ಐಎಂಎಫ್‌ನಿಂದ ಸಾಲ ಸಿಗುವವರೆಗೂ ನಮಗೆ ಹಣಕಾಸು ನೆರವು ನೀಡಿ: ಶ್ರೀಲಂಕಾದಿಂದ ಭಾರತಕ್ಕೆ ಮನವಿ

ಕೊಲಂಬೊ(ಶ್ರೀಲಂಕಾ): ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ ಈಗ ಸಹಾಯಕ್ಕಾಗಿ ಭಾರತಕ್ಕೆ ಮನವಿ ಮಾಡಿದೆ.
ಈಗ ಆರ್ಥಿಕ ಸಂಕಷ್ಟದಿಂದ ಹೊರಬರಲು ಭಾರತದ ನೆರವು ಅತ್ಯಗತ್ಯ ಎಂದು ಅರಿತಿರುವ ಶ್ರೀಲಂಕಾ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್​​) ಸಾಲ ಸಿಗುವವರೆಗೆ ಶ್ರೀಲಂಕಾಕ್ಕೆ ಹಣಕಾಸು ನೆರವು ನೀಡುವಂತೆ ಮನವಿ ಮಾಡಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಶ್ರೀಲಂಕಾಗೆ ಸಾಲ ನೆರವು ನೀಡಲು ಮೂರ್ನಾಲ್ಕು ತಿಂಗಳುಗಳನ್ನು ಬೇಕಾಗಬಹುದು. ಅಲ್ಲಿಯವರೆಗೆ ಸಂಕಷ್ಟ ನಿಭಾಯಿಸಲು ಬೇರೆ ಬೇರೆ ಸಂಸ್ಥೆಗಳಿಂದ ಮತ್ತು ಬೇರೆ ಬೇರೆ ರಾಷ್ಟ್ರಗಳಿಗೆ ಹಣಕಾಸು ನೆರವು ನೀಡುವಂತೆ ಮನವಿ ಮಾಡಲು ಭಾರತ ತನ್ನ ಪ್ರಭಾವವನ್ನು ಬಳಸಿ ನೆರವಿಗೆ ಮುಂದಾಗಬೇಕು ಎಂದು ಶ್ರೀಲಂಕಾ ಕೇಳಿಕೊಂಡಿದೆ.
ವಿಶೇಷವಾಗಿ ಜಪಾನ್​​ನಂತಹ ರಾಷ್ಟ್ರಗಳ ಮೇಲೆ ತನ್ನ ಪ್ರಭಾವ ಬೀರುವಂತೆಯೂ ಭಾರತಕ್ಕೆ ಮನವಿ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶ್ರೀಲಂಕಾದ ಹಣಕಾಸು ಸಚಿವರು ಮತ್ತು ಶ್ರೀಲಂಕಾದ ಹೈಕಮಿಷನರ್ ಜೊತೆಗೆ ಹಲವಾರು ಸುತ್ತಿನ ಚರ್ಚೆಗಳ ಸಂದರ್ಭದಲ್ಲಿ ಶ್ರೀಲಂಕಾವು ಈ ಬಗ್ಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಒಂದೇ ದಿನ ಸ್ವತಂತ್ರವಾದೆವು ; ನಾವೀಗ ಭಿಕ್ಷೆ ಬೇಡುತ್ತಿದ್ದೇವೆ...ಆದರೆ ಭಾರತ...: ಪಾಕಿಸ್ತಾನ ನಾಯಕನ ಹೇಳಿಕೆ ವೈರಲ್‌...

ಏತನ್ಮಧ್ಯೆ ಶ್ರೀಲಂಕಾದ ಹಣಕಾಸು ಸಚಿವ ಅಲಿ ಸಬ್ರಿ ಮುಂದಿನ ವಾರ ಅಮೆರಿಕದಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಏಷ್ಯನ್ ಕ್ಲಿಯರಿಂಗ್ ಯೂನಿಯನ್‌ ಮೂಲಕ ಭಾರತ ಈಗಾಗಲೇ ಹಲವು ರೀತಿಯ ಸಹಕಾರವನ್ನು ಶ್ರೀಲಂಕಾಕ್ಕೆ ನೀಡಿದೆ. ಆಹಾರ, ಇಂಧನ, ಔಷಧವನ್ನು ಸಾಲದ ರೂಪದಲ್ಲಿ ನೀಡಲಾಗಿದೆ. ಭಾರತ ಈವರೆಗೆ 2.4 ಶತಕೋಟಿ ಅಮೆರಿಕನ್ ಡಾಲರ್​ ನೆರವು ನೀಡಿದೆ. ಐಎಂಎಫ್​ ಸಾಲ ಶ್ರೀಲಂಕಾ ತಲುಪುವವರೆಗೆ ವಿವಿಧ ರಾಷ್ಟ್ರಗಳಿಂದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಇನ್ನೂ ಹೆಚ್ಚಿನ ಸಹಾಯದ ಅಗತ್ಯವಿದ್ದು, ಇದೇ ಕಾರಣಕ್ಕಾಗಿ ಭಾರತಕ್ಕೆ ನೆರವು ನೀಡಬೇಕು ಎಂದು ಶ್ರೀಲಂಕಾ ಮನವಿ ಮಾಡಿದೆ. ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಅವರೊಂದಿಗೆ ಬಹುಪಕ್ಷೀಯ ಮಾತುಕತೆ ಮತ್ತು ಸಾಲದ ಕುರಿತು ಶ್ರೀಲಂಕಾದ ಅಧ್ಯಕ್ಷೀಯ ಸಲಹಾ ಗುಂಪಿನ ಸದಸ್ಯರ ನಡುವೆ ತಾಂತ್ರಿಕ ಮಾತುಕತೆಗಳು ನಡೆಯುತ್ತಿವೆ. ಶ್ರೀಲಂಕಾ ನಾಳೆ, ಸೋಮವಾರ ಐಎಂಎಫ್​ನೊಂದಿಗೆ ಮಾತುಕತೆ ಆರಂಭಿಸಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ನಾಲ್ಕು ತಿಂಗಳುಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಶ್ರೀಲಂಕಾ ಭಾರತದಿಂದ ‘ಬ್ರಿಡ್ಜಿಂಗ್ ಫೈನಾನ್ಸ್’ ಅನ್ನು ನಿರೀಕ್ಷಿಸುತ್ತಿದೆ. ಶ್ರೀಲಂಕಾವನ್ನು ತನ್ನ ಆರ್ಥಿಕ ಅವ್ಯವಸ್ಥೆಯಿಂದ ಹೊರತರಲು ಮುಂದೆ ಬಂದ ಏಕೈಕ ಮತ್ತು ಮೊದಲ ರಾಷ್ಟ್ರ ಭಾರತ ಆಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಒಂದೇ ದಿನ ಸ್ವತಂತ್ರವಾದೆವು ; ನಾವೀಗ ಭಿಕ್ಷೆ ಬೇಡುತ್ತಿದ್ದೇವೆ...ಆದರೆ ಭಾರತ...: ಪಾಕಿಸ್ತಾನ ನಾಯಕನ ಹೇಳಿಕೆ ವೈರಲ್‌...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement