ನವದೆಹಲಿ: ದೆಹಲಿಯ ಜಹಾಂಗೀರ್ಪುರಿ ಪ್ರದೇಶದಲ್ಲಿ ಶನಿವಾರ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಐವರ ಮೇಲೆ ಕಟ್ಟುನಿಟ್ಟಿನ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್ಎಸ್ಎ) ಹಾಕಲಾಗಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.
ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಆರೋಪಿಗಳಲ್ಲಿ ಮಾಸ್ಟರ್ಮೈಂಡ್ ಅನ್ಸರ್ ಶೇಖ್, ಸಲೀಂ ಚಿಕ್ನಾ, ಇಮಾಮ್ ಶೇಖ್ ಅಲಿಯಾಸ್ ಸೋನು, ದಿಲ್ಶಾದ್ ಮತ್ತು ಅಹೀದ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಹಾಂಗೀರ್ಪುರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನ ಪ್ರಕಾರ, ಶನಿವಾರ ಹನುಮ ಜಯಂತಿ ಮೆರವಣಿಗೆ ಶಾಂತಿಯುತವಾಗಿ ಆ ಪ್ರದೇಶದಲ್ಲಿ ಸಾಗುತ್ತಿತ್ತು, ಆದರೆ ಸಂಜೆ 6 ಗಂಟೆ ಸುಮಾರಿಗೆ ಸಿ-ಬ್ಲಾಕ್ನಲ್ಲಿರುವ ಮಸೀದಿಯ ಹೊರಗೆ ಬಂದಾಗ, ಅನ್ಸಾರ್ ತನ್ನ 4-5 ಸಹಚರರೊಂದಿಗೆ ಬಂದರು. ಮತ್ತು ‘ಶೋಭಾ ಯಾತ್ರೆ’ಯಲ್ಲಿ ಭಾಗವಹಿಸಿದವರ ಜೊತೆ ವಾಗ್ವಾದ ಆರಂಭಿಸಿದರು. ವಾದವು ಹಿಂಸಾಚಾರಕ್ಕೆ ತಿರುಗಿತು ಮತ್ತು ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟವನ್ನು ಪ್ರಾರಂಭಿಸಿದರು.
ಇಮಾಮ್ ಅಲಿಯಾಸ್ ಸೋನು ಎಂಬಾತನನ್ನು ವಾಯುವ್ಯ ಜಿಲ್ಲಾ ಪೊಲೀಸ್ ವಿಶೇಷ ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ. ಘರ್ಷಣೆಯ ವೇಳೆ ಕುಶಾಲ್ ಚೌಕ್ ಬಳಿ ಪಿಸ್ತೂಲ್ ಮೂಲಕ ಗುಂಡು ಹಾರಿಸಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಹಿರಂಗಪಡಿಸಿದ್ದಾನೆ.
ಗಲಭೆಯ ವೇಳೆ ಇಮಾಮ್ ನೀಲಿ ಕುರ್ತಾ ಧರಿಸಿ ಗುಂಡಿನ ದಾಳಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ