ಲೂಧಿಯಾನ: ಗುಡಿಸಲಿನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನವಾಗಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಲಸೆ ಕಾರ್ಮಿಕರು ಮತ್ತು ಇಲ್ಲಿನ ಟಿಬ್ಬಾ ರಸ್ತೆಯಲ್ಲಿರುವ ಮುನ್ಸಿಪಲ್ ಕಸದ ಡಂಪ್ ಯಾರ್ಡ್ ಬಳಿಯ ತಮ್ಮ ಗುಡಿಸಲಿನಲ್ಲಿ ಮಲಗಿದ್ದರು ಎಂದು ಲುಧಿಯಾನದ ಸಹಾಯಕ ಕಮಿಷನರ್ (ಪೂರ್ವ) ಸುರೀಂದರ್ ಸಿಂಗ್ ಹೇಳಿದ್ದಾರೆ.
ಟಿಬ್ಬಾ ಪೊಲೀಸ್ ಠಾಣೆಯ ಎಸ್ಎಚ್ಒ, ರಣಬೀರ್ ಸಿಂಗ್, ಮೃತರನ್ನು ದಂಪತಿ ಮತ್ತು ಅವರ ಐದು ಮಕ್ಕಳು ಎಂದು ಗುರುತಿಸಿದ್ದಾರೆ. ಮುಂಜಾನೆ 2 ಗಂಟೆ ಸುಮಾರಿಗೆ ಕುಟುಂಬಸ್ಥರೆಲ್ಲರೂ ಗುಡಿಸಲಿನಲ್ಲಿ ಮಲಗಿದ್ದಾಗ ಈ ಘಟನೆ ನಡೆದಿದೆ.
ಮೃತರನ್ನು ಸುರೇಶ (54), ರಾವುರ್ ದೇವಿ (50), ಅವರ ಪುತ್ರಿಯರಾದ ರಾಖಿ (15), ಮನಿಶಾ (10), ಚಂದಾ (8), ಗೀತಾ (6) ಮತ್ತು ಮಗ ಸನ್ನಿ (2) ಎಂದು ಗುರುತಿಸಲಾಗಿದೆ.
ಮೃತರು ಗುಡಿಸಲಿನೊಳಗೆ ಅಪಾರ ಪ್ರಮಾಣದ ಚಿಂದಿ, ಪ್ಲಾಸ್ಟಿಕ್ ಮತ್ತು ಜಂಕ್ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರಿಂದ ಬೆಂಕಿ ವೇಗವಾಗಿ ಹರಡಿತು ಮತ್ತು ಅವರು ತಪ್ಪಿಸಿಕೊಳ್ಳಲು ಅವಕಾಶ ಸಿಗಲಿಲ್ಲ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ