ನವದೆಹಲಿ: ಶುಕ್ರವಾರ, ಏಪ್ರಿಲ್ 22 ರಂದು ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬೆಳಿಗ್ಗೆ 9:40 ರ ಸುಮಾರಿಗೆ ರೋಹಿಣಿ ನ್ಯಾಯಾಲಯದ ಗೇಟ್ ಸಂಖ್ಯೆ 8 ರ ಬಳಿ ಇಬ್ಬರು ವಕೀಲರಾದ ಸಂಜೀವ್ ಚೌಧರಿ ಮತ್ತು ರಿಷಿ ಚೋಪ್ರಾ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ಜಗಳ ನಡೆದಿದೆ.
ಎನ್ಎಪಿ ಕಾನ್ಸ್ಟೆಬಲ್ ಚಕಮಕಿಯಲ್ಲಿ ಮಧ್ಯಪ್ರವೇಶಿಸಿದ್ದು, ನಂತರ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಈ ಸಮಯದಲ್ಲಿ, ನಾಗಾಲ್ಯಾಂಡ್ ಸಶಸ್ತ್ರ ಪೊಲೀಸರ ಕಾನ್ಸ್ಟೆಬಲ್, ಗೇಟ್ನಲ್ಲಿ ನಿಯೋಜಿಸಲ್ಪಟ್ಟಿದ್ದರು, ಜಗಳ ನಡೆಯುತ್ತಿರುವಾಗ ಮಧ್ಯಪ್ರವೇಶಿಸಿದರು ಮತ್ತು ನೆಲಕ್ಕೆ ಗುಂಡು ಹಾರಿಸಲಾಯಿತು. ಗುಂಡು ನೆಲಕ್ಕೆ ಅಪ್ಪಳಿಸಿದ್ದರಿಂದ ಕಾಂಕ್ರೀಟ್ ಸ್ಪೋಟಕಗಳು ತಗುಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ (ರೋಹಿಣಿ ಜಿಲ್ಲೆ) ಪ್ರಣವ್ ತಯಾಲ್ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಐಎಎನ್ಎಸ್ಗೆ ಮಾತನಾಡಿದ ವಕೀಲರೊಬ್ಬರು, “ರೋಹಿಣಿ ನ್ಯಾಯಾಲಯದ ಗೇಟ್ನ ಹೊರಗೆ ವಕೀಲರು ಮತ್ತು ಭದ್ರತಾ ಸಿಬ್ಬಂದಿ ನಡುವೆ ವಾದ ನಡೆಯಿತು. ವಾದ ವಿಕೋಪಕ್ಕೆ ಹೋಗಿ ಮತ್ತೆ 2-3 ವಕೀಲರು ಅವರೊಂದಿಗೆ ಸೇರಿಕೊಂಡರು. ವಾದ ಹಿಂಸಾತ್ಮಕ ತಿರುವು ಪಡೆದುಕೊಂಡಿತು ಮತ್ತು ಸಿಬ್ಬಂದಿ ಗುಂಡು ಹಾರಿಸಿದರು, ಅದು ನೆಲಕ್ಕೆ ತಾಗಿ ಕಾಂಗ್ರಿಕಟ್ ಸಿಡಿದು ಇಬ್ಬರು ಗಾಯಗೊಂಡಿದ್ದಾರೆ ಎಂದು ವಕೀಲರೊಬ್ಬರು ತಿಳಿಸಿದ್ದಾರೆ, ಆದರೆ ಯಾರಿಗೂ ಕೂಡ ಬುಲೆಟ್ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ