ಮಂಗಳೂರು: ಮಸೀದಿಯ ಹಿಂದಿನ ರಚನೆ ಕೆಡಹದಂತೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ

ಮಲಾಲಿಯಲ್ಲಿ ಮಸೀದಿಯ ಹಿಂದಿನ ಕಟ್ಟಡವನ್ನು ಕೆಡವಲು ನ್ಯಾಯಾಲಯದ ತಡೆಯಾಜ್ಞೆ ನೀಡಿದ್ದು, ಪ್ರವೇಶವನ್ನು ನಿರಾಕರಿಸಿತು
ಮಂಗಳೂರು: ಮಂಗಳೂರು ಹೊರವಲಯದ ಮಳಲಿಯಲ್ಲಿ ಮಸೀದಿಯೊಂದರ ನವೀಕರಣ ಕಾಮಗಾರಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಥಗಿತಗೊಳಿಸಿದ ಒಂದು ದಿನದ ನಂತರ, ಮಸೀದಿಯ ಹಿಂದೆ ಕಂಡುಬಂದ ಕಟ್ಟಡದೊಳಗೆ ಯಾವುದೇ ಕೆಲಸ ಮಾಡದಂತೆ ಹಾಗೂ ಯಾರೂ ಪ್ರವೇಶ ಮಾಡದಂತೆ ನ್ಯಾಯಾಲಯದ ತಡೆಯಾಜ್ಞೆ ನೀಡಿದೆ.

ಗಂಜಿಮಠದ ನಿವಾಸಿ ಧನಂಜಯ್ ಅವರು ಮಸೀದಿಯ ಹಿಂಭಾಗದಲ್ಲಿ ಕಂಡಬಂದ ಕಟ್ಟಡಕ್ಕೆ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಮಂಗಳೂರು ನ್ಯಾಯಾಲಯವು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಮುಂದಿನ ವಿಚಾರಣೆಯ ದಿನಾಂಕದ ವರೆಗೆ ಕಟ್ಟಡ ಕೆಡವಲು ಅಥವಾ ಅದಕ್ಕೆ ಯಾವುದೇ ಹಾನಿ ಮಾಡದಂತೆ ತಡೆ ನೀಡಿ ಆದೇಶಿಸಿದೆ. ಯಾವುದೇ ಭಕ್ತರು ಅಥವಾ ಮಸೀದಿ ಸಮಿತಿಯ ಸದಸ್ಯರ ಪ್ರವೇಶವನ್ನು ನ್ಯಾಯಾಲಯವು ನಿರ್ಬಂಧಿಸಿದೆ ಎಂದು ನ್ಯೂ ಇಂಡಿಯನ್‌ ಎಕ್ಸಪ್ರೆಸ್‌.ಕಾಮ್‌ ವರದಿ ಮಾಡಿದೆ.

ನ್ಯಾಯಾಲಯದ ಆದೇಶವನ್ನು ವಿಎಚ್‌ಪಿ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಸ್ವಾಗತಿಸಿದ್ದಾರೆ. ಮಳಲಿಯಲ್ಲಿ ಮಸೀದಿಯ ನವೀಕರಣದ ವೇಳೆ ಕಟ್ಟಡವೊಂದು ಪತ್ತೆಯಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಶಾಂತಿ ಕಾಪಾಡಲು ಮಂಗಳೂರು ನಗರ ಪೊಲೀಸರು ಸಿಬ್ಬಂದಿ ನಿಯೋಜಿಸಿದ್ದಾರೆ.
ಕಟ್ಟಡದ ಸಮಸ್ಯೆ ಬಗೆಹರಿಯುವವರೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

‘ಹಳೆಯ ಧಾರ್ಮಿಕ ಕಟ್ಟಡವನ್ನು ನವೀಕರಣಕ್ಕಾಗಿ ಕೆಡವುತ್ತಿದ್ದಾಗ ದೇವಾಲಯದ ತರಹದ ಕಾಣುವ ಕಟ್ಟಡ ಕಂಡುಬಂದಿದ್ದು, ನಂತರ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿದ್ದರು ಮತ್ತು ವಿಷಯವನ್ನು ಸೌಹಾರ್ದಯುತವಾಗಿ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪೊಲೀಸ್‌ ಆಯುಕ್ತರು ಹೇಳಿದರು.
ಶಾಂತಿ ಕಾಪಾಡಲು ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಒಂದು ವಾರದಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ’ ಎಂದರು.
ಗುರುವಾರ, ಮಂಗಳೂರು ಹೊರವಲಯದ ಗಂಜಿಮಠ ಸಮೀಪದ ಮಳಲಿಯಲ್ಲಿ ಶತಮಾನಗಳಷ್ಟು ಹಳೆಯದಾದ ಮಸೀದಿ ನವೀಕರಣಕ್ಕಾಗಿ ಕಟ್ಟಡ ಕೆಹುವಾಗ ದೇವಸ್ಥಾನದ ಮಾದರಿಯ ಹಳೆಯ ಕಟ್ಟಡವು ಪತ್ತೆಯಾಗಿದೆ. ಈ ರಚನೆಯು ದೇವಾಲಯ ಅಥವಾ ಜೈನ ಬಸದಿಯಂತೆಯೇ ಇದೆ ಎಂದು ಹೇಳಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement