ವೃದ್ಧಿಮಾನ್ ಸಹಾ ಬೆದರಿಸಿದ ಪ್ರಕರಣ: ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷಗಳ ನಿಷೇಧ ಹೇರಿದ ಬಿಸಿಸಿಐ

ಮುಂಬೈ: ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರನ್ನು ಬೆದರಿಸಿರುವ ಪತ್ರಕರ್ತ ಬೋರಿಯಾ ಮಜುಂದಾರ್‌ಗೆ ಬಿಸಿಸಿಐ ಎರಡು ವರ್ಷಗಳ ನಿಷೇಧ ಹೇರಿದ್ದು, ದೇಶದ ಕ್ರೀಡಾಂಗಣಗಳಿಗೆ ಪ್ರವೇಶಿಸದಂತೆ ಅವರನ್ನು ನಿರ್ಬಂಧಿಸಿದೆ.
ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಅನುಮೋದಿಸಿದ ನಿರ್ಬಂಧಗಳ ಭಾಗವಾಗಿ ಮಜುಂದಾರ್ ಅವರಿಗೆ ಎರಡು ವರ್ಷಗಳವರೆಗೆ ಮಾಧ್ಯಮ ಮಾನ್ಯತೆ ನೀಡಲಾಗುವುದಿಲ್ಲ.
ಫೆಬ್ರವರಿ 25 ರಂದು, ಸಂದರ್ಶನದ ಕೋರಿಕೆಯನ್ನು ನಿರಾಕರಿಸಿದ್ದಕ್ಕಾಗಿ ಸಹಾ ಅವರಿಗೆ ಬೆದರಿಕೆ ಸಂದೇಶಗಳನ್ನು ತನಿಖೆ ಮಾಡಲು ಬಿಸಿಸಿಐ ಮೂರು ಸದಸ್ಯರ ಸಮಿತಿಯನ್ನು ರಚಿಸಿತ್ತು.

ಫೆಬ್ರವರಿ 23 ರಂದು ಸರಣಿ ಟ್ವೀಟ್‌ಗಳಲ್ಲಿ ಪತ್ರಕರ್ತನ ಹೆಸರನ್ನು ಹೇಳಲು ಸಹಾ ಆರಂಭದಲ್ಲಿ ನಿರಾಕರಿಸಿದ್ದರೆ, ನಂತರ ಅವರು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಬಿಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಾಲ್ ಮತ್ತು ಬಿಸಿಸಿಐ ಕೌನ್ಸಿಲರ್ ಪ್ರಭತೇಜ್ ಸಿಂಗ್ ಭಾಟಿಯಾ ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯ ಮುಂದೆ ಪತ್ರಕರ್ತನನ್ನು ಮಜುಂದಾರ್ ಎಂದು ಗುರುತಿಸಿದ್ದಾರೆ.
ಮೇ 3 ರಂದು, ಬಿಸಿಸಿಐ ಹಂಗಾಮಿ ಸಿಇಒ ಮತ್ತು ಐಪಿಎಲ್ ಸಿಒಒ ಹೇಮಾಂಗ್ ಅಮೀನ್ ರಾಜ್ಯ ಘಟಕಗಳಿಗೆ ಪತ್ರ ಬರೆದಿದ್ದಾರೆ, ” ವೃದ್ದಿಮಾನ್ ಸಹಾ ಅವರು ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ವಿಟರ್‌ನಲ್ಲಿ ಪತ್ರಕರ್ತರು ಕಳುಹಿಸಿದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಪತ್ರಕರ್ತನ ನಡತೆಯಿಂದ ತಾವು ಹಿಂಸೆಗೆ ಒಳಗಾಗಿದ್ದಾಗಿ ಹೇಳಿದ್ದಾರೆ. ವಿಚಾರಣೆಯಲ್ಲಿ ಸಹಾ ಅವರು ಬೋರಿಯಾ ಮಜುಂದಾರ್ ಅವರನ್ನು ಬೆದರಿಕೆ ಹಾಕಿದ ಪತ್ರಕರ್ತ ಎಂದು ಹೆಸರಿಸಿದ್ದಾರೆ.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

ಬಿಸಿಸಿಐ ಸಮಿತಿಯು ಸಹಾ ಮತ್ತು ಮಜುಂದಾರ್ ಅವರ ಸಲ್ಲಿಕೆಗಳನ್ನು ಪರಿಗಣಿಸಿದೆ ಮತ್ತು ಮಜುಂದಾರ್ ಅವರ ಕ್ರಮಗಳು ನಿಜವಾಗಿಯೂ ಬೆದರಿಕೆಯ ಸ್ವರೂಪದಲ್ಲಿವೆ” ಎಂದು ಅಮೀನ್ ಹೇಳಿದ್ದಾರೆ.
ಅಮೀನ್ ಪ್ರಕಾರ, ಈ ಸಮಿತಿಯು ಅಪೆಕ್ಸ್ ಕೌನ್ಸಿಲ್‌ಗೆ ಮೂರು ನಿರ್ಬಂಧಗಳನ್ನು ಶಿಫಾರಸು ಮಾಡಿತು, ಅದನ್ನು ಒಪ್ಪಿಕೊಂಡು ಮಜುಂದಾರ್ ಮೇಲೆ ನಿರ್ಬಂಧಗಳನ್ನು ವಿಧಿಸಲಾಯಿತು.

ವಿಧಿಸಲಾದ ನಿರ್ಬಂಧಗಳೆಂದರೆ – ಭಾರತದಲ್ಲಿನ ಯಾವುದೇ ಕ್ರಿಕೆಟ್ ಪಂದ್ಯಗಳಲ್ಲಿ (ದೇಶೀಯ ಮತ್ತು ಅಂತರಾಷ್ಟ್ರೀಯ) ಪತ್ರಿಕಾ ಸದಸ್ಯರಾಗಿ ಯಾವುದೇ ಮಾನ್ಯತೆ ಪಡೆಯಲು ಬೊರಿಯಾ ಮಜುಂದಾರ್‌ಗೆ 2 ವರ್ಷಗಳ ನಿಷೇಧ, ಭಾರತದಲ್ಲಿ ಯಾವುದೇ ನೋಂದಾಯಿತ ಆಟಗಾರರೊಂದಿಗೆ ಯಾವುದೇ ಸಂದರ್ಶನವನ್ನು ಪಡೆಯಲು 2 ವರ್ಷಗಳ ನಿಷೇಧ ಮತ್ತು BCCI ಮತ್ತು ಸದಸ್ಯ ಸಂಘಗಳ ಮಾಲೀಕತ್ವದ ಕ್ರಿಕೆಟ್ ಸೌಲಭ್ಯಗಳ ಪ್ರವೇಶಕ್ಕೆ 2 ವರ್ಷಗಳ ನಿಷೇಧ. ಬಿಸಿಸಿಐನ ಉನ್ನತ ಅಧಿಕಾರಿ ಎಲ್ಲಾ ರಾಜ್ಯ ಘಟಕಗಳಿಗೆ ತಮ್ಮ ಸಂಘಗಳಲ್ಲಿನ ನಿರ್ಬಂಧಗಳ ಅನುಸರಣೆಗೆ ಕೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement