ಭಿಕ್ಷೆ ಕೇಳುತ್ತಿದ್ದ ಸಾಧುವಿನ ಮೇಲೆ ಹಲ್ಲೆ ನಡೆಸಿ, ಕೂದಲು ಕತ್ತರಿಸಿದ ಯುವಕ..ವೀಕ್ಷಿಸಿ

ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಖಾಂಡ್ವಾದಲ್ಲಿ ಸಾಧುವೊಬ್ಬರನ್ನು ಥಳಿಸಿ ಅವರ ಕೂದಲನ್ನು ಕತ್ತರಿಸಿದ ಘಟನೆಯ ವೀಡಿಯೊ ವೈರಲ್‌ ಆಗುತ್ತಿದೆ.. ಭಾನುವಾರ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಖಲ್ವಾ ಬ್ಲಾಕ್‌ನ ಪತಾಜನ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಮತ್ತು ಸೋಮವಾರ ವೀಡಿಯೊ ವೈರಲ್ ಆದ ನಂತರ ತನಿಖೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಧುವಿನ ಕೂದಲು ಕತ್ತರಿಸುತ್ತಿರುವ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ಗುರುತಿಸಿ ವಶಕ್ಕೆ ಪಡೆದಿದ್ದಾರೆ. “ಈ ಘಟನೆ ಭಾನುವಾರ ಮಧ್ಯಾಹ್ನ 1 ಗಂಟೆಗೆ ನಡೆದಿದೆ. ಆರೋಪಿಯನ್ನು ಹೋಟೆಲ್ ಉದ್ಯಮಿಯೊಬ್ಬರ ಪುತ್ರ ಪ್ರವೀಣ್ ಗೌರ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ.
ವೀಡಿಯೊದಲ್ಲಿ, ಗೌರ್ ಕ್ಷೌರಿಕನ ಅಂಗಡಿಯ ಹೊರಗೆ ಸಾಧುವಿನ ಕೂದಲನ್ನು ಕತ್ತರಿಸುವುದನ್ನು ನೋಡಬಹುದು ಮತ್ತು ನಂತರದ ಸಾಧುವಿಗೆ ಥಳಿಸುತ್ತಾನೆ.

ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ ಆರೋಪಿಗಳು ಸಾಧುವಿನ ತಲೆಗೂದಲನ್ನು ಇತರರು ನೋಡುತ್ತಿರುವಾಗಲೇ ಕತ್ತರಿಸಿ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಕ್ಲಿಪ್ ಅನ್ನು ಸಲೂನ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ವರದಿಯಾಗಿದೆ. “ನಾವು ಕೂದಲು ಕತ್ತರಿಸಿದ ಸಾಧುವಿಗಾಗಿ ಹುಡುಕುತ್ತಿದ್ದೇವೆ. ಅವರ ದೂರಿನ ಆಧಾರದ ಮೇಲೆ ಔಪಚಾರಿಕ ಪ್ರಕರಣವನ್ನು ದಾಖಲಿಸಬಹುದು” ಎಂದು ಖಲ್ವಾ ಪೊಲೀಸ್ ಠಾಣೆಯ ಉಸ್ತುವಾರಿ ಪರಶ್ರಾಮ್ ದಬರ್ ಹೇಳಿದ್ದಾರೆ. ಕಿರುಕುಳದ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement