ಬಾಲಕರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‍ಶಿಪ್: ಧಾರವಾಡದ ಖ್ವಾಜಾಮೈನುದ್ದೀನ್‍ಗೆ ಕಂಚಿನ ಪದಕ

ಧಾರವಾಡ: ರೆಸ್ಲ್ಟಿಂಗ್‌ ಫೆಡರೇಷನ್ ಆಫ್ ಇಂಡಿಯಾ ಮತ್ತು ಜಾರ್ಖಂಡ್ ರಾಜ್ಯ ಕುಸ್ತಿ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಂಚಿಯಲ್ಲಿ ನಡೆದ 15 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಧಾರವಾಡದ ಬಾಲ ಕುಸ್ತಿಪಟು ಖ್ವಾಜಾ ಮೈನುದ್ದೀನ್ ಮಾಳಗಿ ಕಂಚಿನ ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
ಫ್ರೀಸ್ಟೈಲ್ ಕುಸ್ತಿಯ 52 ಕೆ.ಜಿ. ವಿಭಾಗದಲ್ಲಿ ಮಾಳಗಿ ತೃತೀಯ ಸ್ಥಾನ ಪಡೆದಿದ್ದಾರೆ. ದಾವಣಗೆರೆ ಕ್ರೀಡಾ ನಿಲಯದ ಕೋಚ್ ವಿನೋದಕುಮಾರ್ ಮತ್ತು ಶಿವಾನಂದ್ ಅವರ ಬಳಿ ಮಾಳಗಿ ತರಬೇತಿ ಪಡೆಯುತ್ತಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

ನಿಮ್ಮ ಕಾಮೆಂಟ್ ಬರೆಯಿರಿ

advertisement