ನವದೆಹಲಿ: ಗುಡುಗು ಸಹಿತ ಮಳೆ ಮತ್ತು 100 ಕಿಮೀ ವೇಗದಲ್ಲಿ ಗಾಳಿ ಬೀಸಿದ ಪರಿಣಾಮ ಸೋಮವಾರ ಸಂಜೆ ದೆಹಲಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ನೂರಾರು ಮರಗಳು ನೆಲಕ್ಕುರುಳಿವೆ ಮತ್ತು ಸಂಚಾರ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ.
ಮಧ್ಯ ದೆಹಲಿಯ ಜಾಮಾ ಮಸೀದಿ ಪ್ರದೇಶದಲ್ಲಿ 50 ವರ್ಷದ ವ್ಯಕ್ತಿಯೊಬ್ಬರು ತಮ್ಮ ನಿವಾಸದ ಹೊರಗೆ ನಿಂತಿದ್ದಾಗ ಬಲವಾದ ಗಾಳಿ ಬೀಸಿದ ಪರಿಣಾಮ ಪಕ್ಕದ ಮನೆಯ ಬಾಲ್ಕನಿಯ ಒಂದು ಭಾಗವು ಅವರ ಮೇಲೆ ಬಿದ್ದು ಮೃತಪಟ್ಟಿದ್ದಾರೆ.
ಉತ್ತರ ದೆಹಲಿಯ ಅಂಗೂರಿ ಬಾಗ್ ಪ್ರದೇಶದಲ್ಲಿ, ಬಸೀರ್ ಬಾಬಾ ಎಂದು ಗುರುತಿಸಲಾದ 65 ವರ್ಷದ ನಿರಾಶ್ರಿತ ವ್ಯಕ್ತಿಯೊಬ್ಬರು ಮರವೊಂದು ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು 2018ರ ನಂತರ ದೆಹಲಿಯಲ್ಲಿ “ತೀವ್ರ” ತೀವ್ರತೆ ಪಡೆದ ಮೊದಲ ಚಂಡಮಾರುತವಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಸೋಮವಾರ ನಗರದಲ್ಲಿ ಸಾಧಾರಣ ಗುಡುಗು ಸಹಿತ ಮಳೆ ಸುರಿದಿತ್ತು.
ವಿಮಾನ ನಿಲ್ದಾಣದ ಬಳಿಯಿರುವ ಪಾಲಂ ವೀಕ್ಷಣಾಲಯದ ಪ್ರಕಾರ ತಾಪಮಾನವು 13 ಡಿಗ್ರಿ ಸೆಲ್ಸಿಯಸ್ನಷ್ಟು ತೀವ್ರವಾಗಿ ಕುಸಿದಿದೆ ಮತ್ತು ದಕ್ಷಿಣ ದೆಹಲಿಯ ಸಫ್ದರ್ಜಂಗ್ನಲ್ಲಿ 16 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆಯಾಗಿದೆ.
ಫಿರೋಜ್ಶಾ ರಸ್ತೆ, ಟಾಲ್ಸ್ಟಾಯ್ ಮಾರ್ಗ, ಕೋಪರ್ನಿಕಸ್ ರಸ್ತೆ, ಕೆಜಿ ಮಾರ್ಗ ಮತ್ತು ಪಂಡಿತ್ ರವಿಶಂಕರ್ ಶುಕ್ಲಾ ಲೇನ್ ಬಳಿಯ ಪ್ರದೇಶಗಳಲ್ಲಿ ಭಾರೀ ಮಳೆಯ ನಂತರ ವಾಹನಗಳು ಸಿಲುಕಿಕೊಂಡಿವೆ. ದೆಹಲಿಯ ಪೂರ್ವ ಮತ್ತು ಮಧ್ಯ ಭಾಗಗಳು ಚಂಡಮಾರುತದ ಗರಿಷ್ಠ ಹೊಡೆತವನ್ನು ಅನುಭವಿಸಿದವು, ಮರಗಳು ಬೀಳುತ್ತಿರುವ ಕುರಿತು ಸುಮಾರು 300 ಕರೆಗಳನ್ನು ಅಧಿಕಾರಿಗಳು ಸ್ವೀಕರಿಸಿದ್ದಾರೆ.
ಭಾರತದ ಹವಾಮಾನ ಇಲಾಖೆ (IMD) ಈ ಸಂಜೆಯ ಬೆಳವಣಿಗೆಗಳಿಗೆ ವಾಯುವ್ಯ ರಾಜಸ್ಥಾನ ಮತ್ತು ಪಕ್ಕದ ಪಾಕಿಸ್ತಾನದ ಮೇಲೆ ಪ್ರೇರಿತ ಚಂಡಮಾರುತದ ಪರಿಚಲನೆ ಕಾರಣವಾಗಿದೆ. ಬಂಗಾಳಕೊಲ್ಲಿಯಿಂದ ತೇವಾಂಶ-ಸಾಗಿಸುವ ಪೂರ್ವ ಮಾರುತಗಳು ಚಂಡಮಾರುತದ ಪರಿಚಲನೆಗೆ ಕಾಋಣವಾಗಿದೆ ಎಂದು ಹೇಳಿದೆ.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ವರದಿಯಾಗಿದೆ. ಪಾಲಮ್ ಹವಾಮಾನ ಕೇಂದ್ರವು ಗಂಟೆಗೆ 70 ಕಿಮೀ ವೇಗದ ಗಾಳಿಯನ್ನು ದಾಖಲಿಸಿದೆ. ದೆಹಲಿಯಲ್ಲಿ ಬಿರುಗಾಳಿ ಸಹಜ. ಮಾರ್ಚ್ ನಿಂದ ಮೇ ಅವಧಿಯಲ್ಲಿ ಸರಾಸರಿ 12 ರಿಂದ 14 ದಿನಗಳಲ್ಲಿ ನಗರವು ಇಂತಹ ಹವಾಮಾನವನ್ನು ನೋಡುತ್ತದೆ ಎಂದು ಹಿರಿಯ IMD ವಿಜ್ಞಾನಿ ಆರ್ ಕೆ ಜೆನಮಣಿ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ