ಶಿರಸಿ: ವರ್ಧಂತಿ ಉತ್ಸವದಂದು ರಕ್ತದಾನ ಮಾಡಿ ಪ್ರೇರಣೆಯಾದ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಶಿರಸಿ: ಪರಿಸರ ಸ್ವಾಮೀಜಿ ಎಂದು ಹೆಸರಾದ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ ವರ್ಧಂತಿ ಉತ್ಸವದ ಹಿನ್ನಲೆಯಲ್ಲಿ ಶಿರಸಿ ತಾಲೂಕಿನ ಸೋಂದಾದ ಶ್ರೀಮಠದಲ್ಲಿ ಮಠದ ಅಂಗ ಸಂಸ್ಥೆ ಗ್ರಾಮಾಭ್ಯುದಯ ಸಂಸ್ಥೆ ಹಮ್ಮಿಕೊಂಡ ಆರೋಗ್ಯ ತಪಾಸಣೆ ರಕ್ತದಾನ ಶಿಬಿರದಲ್ಲಿ ಶ್ರೀಗಳೇ ರಕ್ತದಾನ ಮಾಡುವ ಮೂಲಕ ಅನೇಕರಿಗೆ ಪ್ರೇರಣೆದಾಯಕರಾಗಿದ್ದಾರೆ.
ಜೀವ ಉಳಿಸಿಕೊಳ್ಳುವ ಸಂದರ್ಭದಲ್ಲಿ ರಕ್ತಗಳ ಅಲಭ್ಯತೆ ಆದರೆ ಸಮಸ್ಯೆ ಆಗುವದನ್ನು ತಪ್ಪಿಸಬೇಕು, ಎಲ್ಲರೂ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು ಎಂಬ ಆಶಯದಲ್ಲಿ ಸ್ವರ್ಣವಲ್ಲೀ ಶ್ರೀಗಳು ಸಮಾಜಮುಖಿ ಆಶಯದಿಂದ ರಕ್ತದಾನ ಮಾಡುತ್ತಿದ್ದಾರೆ. ಹದಿಮೂರು ವರ್ಷಗಳಿಂದ ವರ್ಧಂತಿ ಉತ್ಸವದಲ್ಲಿ ರಕ್ತದಾನ ಮಾಡಿಯೇ ಆರೋಗ್ಯ ತಪಾಸಣೆ, ರಕ್ತದಾನ, ರಕ್ತವರ್ಗೀಕರಣ ಶಿಬಿರಗಳಿಗೆ ಶ್ರೀಗಳು ಚಾಲನೆ ನೀಡುತ್ತಿದ್ದಾರೆ.

ಇಂದು, ಗುರುವಾರ (ಜೂನ್‌ ೯) ನಡೆದ ವರ್ಧಂತಿ ಉತ್ಸವದಲ್ಲಿಯೂ ಅವರು ರಕ್ತದಾನ ಮಾಡುವ ಮೂಲಕ ಹಲವರಿಗೆ ರಕ್ತದಾನ ಮಾಡಲು ಪ್ರೇರಣೆ ನೀಡಿದ್ದಾರೆ.
ಮೂವತ್ತಕ್ಕೂ ಅಧಿಕ ಶಿಷ್ಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಸ್ವರ್ಣವಲ್ಲೀ ಶ್ರೀಗಳ ಐವತ್ತೈದನೇ ವರ್ಧಂತಿ ಉತ್ಸವಕ್ಕೆ ಸಾಕ್ಷಿಯಾದರು. ಶಿರಸಿ ಟಿಎಸ್‌ಎಸ್, ಸರ್ಕಾರಿ ಆಸ್ಪತ್ರೆ ಹಾಗೂ ಹೃದಯ ರೋಗ ತಜ್ಞ ಡಾ. ವಿವೇಕಾನಂದ ಗಜಪತಿ ಅವರು ರಕ್ತದಾನ ಶಿಬಿರಕ್ಕೆ ಸಹಕಾರ ನೀಡಿದ್ದಾರೆ.
ಈ ವೇಳೆ ಮಠದಲ್ಲಿ ಗಣಪತಿ ಅಥರ್ವಶೀರ್ಷ ಹವನ, ಮೃತ್ಯುಂಜಯ ಹವನ, ಶ್ರೀಸೂಕ್ತ, ಪುರಷಸೂಕ್ತ ಹವನ ಮೊದಲಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ನಡೆದವು. ಈ ವೇಳೆ ಮಠದ ವ್ಯವಸ್ಥಾಪಕ ಎಸ್.ಎನ್.ಗಾಂವಕರ್, ಕೃಷಿ ಪ್ರತಿಷ್ಠಾನದ ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಗ್ರಾಮಾಭ್ಯುದಯ ಸಂಚಾಲಕ ರಮೇಶ ಹೆಗಡೆ ದೊಡ್ನಳ್ಳಿ, ಅಧ್ಯಕ್ಷ ಎಂ.ಸಿ.ಹೆಗಡೆ ಶಿರಸಿಮಕ್ಕಿ, ಕಾರ್ಯದರ್ಶಿ ಸಂತೋಷ ಭಟ್ಟ ಕೋಡಿಗಾರ, ಎಂ.ಕೆ. ಹೆಗಡೆ ಗೋಳಿಕೊಪ್ಪ, ಶ್ರೀಧರ ಭಟ್ಟ ಕಳವೆ ಇತರರು ಇದ್ದರು.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement