ಗೋಕರ್ಣ: ಕೋಟಿತೀರ್ಥದಲ್ಲಿ ಮುಳುಗಿ ಸಾವು

ಗೋಕರ್ಣ: ಉತ್ತರ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಗೋಕರ್ಣದ ಕೋಟಿತೀರ್ಥ ಕೆರೆಯಲ್ಲಿ ಈಜಾಡಲು ತೆರಳಿದ ವ್ಯಕ್ತಿಯೊರ್ವ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಈತನನ್ನು ಗೋಕರ್ಣದ ಮೇಲಿನಕೇರಿಯ ಸಂತೋಷ ರೆಬೆಲೂ ( 45) ಎಂದು ಗುರುತಿಸಲಾಗಿದ್ದು, ಮಧ್ಯಾಹ್ನದ ವೇಳೆ ಸ್ನಾನಕ್ಕಾಗಿ ತೆರಳಿದಾಗ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.

ತಕ್ಷಣ ಪೊಲೀಸ್ ತುರ್ತುವಾಹನ 112 ಆಗಮಿಸಿ ಪರಿಶೀಲನೆ ನಡೆಸಿ, ನಂತರ ಮೃತದೇಹ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು ಹಾಗೂ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೂಳೆತ್ತಿ ಸ್ವಚ್ಛಗೊಳಿಸಿ ಶುದ್ದೀಕರಣಗೊಳಿಸಿ, ನೀರು ತುಂಬಿ ನವೀಕರಣಗೊಂಡ ಕೋಟಿತೀರ್ಥದಲ್ಲಿ ನೀರಿನಲ್ಲಿ ಮುಳಗಿ ಮೃತಪಟ್ಟ ಮೊದಲ ಘಟನೆ ಇದಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ ಇನ್ನಿಲ್ಲ

ನಿಮ್ಮ ಕಾಮೆಂಟ್ ಬರೆಯಿರಿ

advertisement