ಜಮ್ಮು: ಇಬ್ಬರು ಮೋಸ್ಟ್ ವಾಂಟೆಡ್ ಎಲ್ಇಟಿ ಭಯೋತ್ಪಾದಕರನ್ನು ಶಸ್ತ್ರಾಸ್ತ್ರ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು..! ಎಲ್ಲೆಡೆ ಪ್ರಶಂಸೆ

ಜಮ್ಮು: ಜಮ್ಮು ವಿಭಾಗದ ರಿಯಾಸಿ ಪ್ರದೇಶದಲ್ಲಿ ಗ್ರಾಮಸ್ಥರು ಭಾರೀ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಮೇತ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಸೆರೆ ಹಿಡಿದಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ವರದಿಯ ಪ್ರಕಾರ, ಸ್ಥಳೀಯರು ಭಾರೀ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಉಗ್ರರನ್ನು ಸೆರೆಹಿಡಿದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಮೊದಲು ಜನರು ಬದುಕಲು ಹೆದರುವಂತ ಪರಿಸ್ಥಿತಿ ಇತ್ತು. ಆದರೆ ಈಗ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ರಿಯಾಸಿ ಜಿಲ್ಲೆಯಲ್ಲಿ ನಡೆದ ಐಇಡಿ ಸ್ಫೋಟದ ರೂವಾರಿ ಲಷ್ಕರ್ ಕಮಾಂಡರ್ ತಾಲಿಬ್ ಹುಸೇನ್‍ನನ್ನು ಗ್ರಾಮಸ್ಥರೇ ಸದೆಬಡೆದು ನಂತರ ಟುಕ್ಸಾನ್‍ನಲ್ಲಿ ಭದ್ರತಾ ಪಡೆಗಳಿಗೆ ಒಪ್ಪಿಸಿದೆ. ಈತನ ಜೊತೆಗೆ ಮತ್ತೊಬ್ಬ ಉಗ್ರ ಫೈಝುಲ್ ಅಹಮದ್ ದಾರ್‌ನನ್ನು ಗ್ರಾಮಸ್ಥರು ಬಂಧಿಸಿದ್ದಾರೆ.

ಟ್ವೀಟ್‌ಗಳ ಸರಣಿಯಲ್ಲಿ, ಎಡಿಜಿಪಿ ಜಮ್ಮುವಿನ ಅಧಿಕೃತ ಹ್ಯಾಂಡಲ್ ಸ್ಥಳೀಯ ಗ್ರಾಮಸ್ಥರ ಧೈರ್ಯ ಮತ್ತು ಭದ್ರತಾ ಪಡೆಗಳ ಸಹಕಾರಕ್ಕಾಗಿ ಶ್ಲಾಘಿಸಿದೆ.
“ರಿಯಾಸಿ ಜಿಲ್ಲೆಯ ತುಕ್ಸಾನ್‌ನ ಗ್ರಾಮಸ್ಥರ ಧೈರ್ಯಕ್ಕೆ ಹ್ಯಾಟ್ಸ್ ಆಫ್. ಎಲ್‌ಇಟಿಯ ಇಬ್ಬರು ಉಗ್ರಗಾಮಿಗಳನ್ನು ಗ್ರಾಮಸ್ಥರು ಶಸ್ತ್ರಾಸ್ತ್ರಗಳ ಸಮೇತವೇ ಸೆರೆ ಹಿಡಿದಿದ್ದಾರೆ. ಅವರಿಂದ 2ಎಕೆ ರೈಫಲ್‌ಗಳು, 7 ಗ್ರೆನೇಡ್‌ಗಳು ಮತ್ತು ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗ್ರಾಮಸ್ಥರಿಗೆ 2 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಡಿಜಿಪಿ ಘೋಷಿಸಿದ್ದಾರೆ ಎಂದು ಎಡಿಜಿಪಿ ಜಮ್ಮು ಬರೆದಿದ್ದಾರೆ.
ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಗ್ರಾಮಸ್ಥರಿಗೆ 2 ಲಕ್ಷ ಬಹುಮಾನವನ್ನು ಘೋಷಿಸಿದರು ಮತ್ತು ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಮತ್ತೊಂದು ಟ್ವೀಟ್‌ನಲ್ಲಿ ಬಂಧಿತ ಉಗ್ರರ ಗುರುತನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಅವರನ್ನು ಫೈಝಲ್ ಅಹ್ಮದ್ ದಾರ್ ಪುಲ್ವಾಮಾ ಎಂದು ಗುರುತಿಸಲಾಗಿದೆ ಮತ್ತು ಮತ್ತೊಬ್ಬನನ್ನು ವರ್ಗೀಕೃತ ಭಯೋತ್ಪಾದಕ ತಾಲಿಬ್ ಹುಸೇನ್ ರಾಜೌರಿ ಎಂದು ಗುರುತಿಸಲಾಗಿದೆ ಹಾಗೂ ಈತನಿಗೆ ಬಹುಮಾನ ಘೋಷಿಸಲಾಗಿತ್ತು.
ಏತನ್ಮಧ್ಯೆ, ಲೆಫ್ಟಿನೆಂಟ್‌ ಗವರ್ನರ್‌ ಜಮ್ಮು ಮತ್ತು ಕಾಶ್ಮೀರದ ಮನೋಜ್ ಸಿನ್ಹಾ ಸಹ ಗ್ರಾಮಸ್ಥರ ಧೈರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಅವರಿಗೆ ಪ್ರಶಸ್ತಿಗಳನ್ನು ಘೋಷಿಸಿದರು.
ಇಬ್ಬರು ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಬಂಧಿಸಿದ ತುಕ್ಸನ್ ಧೋಕ್, ರಿಯಾಸಿ ಗ್ರಾಮಸ್ಥರ ಶೌರ್ಯಕ್ಕೆ ನಾನು ವಂದಿಸುತ್ತೇನೆ. ಶ್ರೀಸಾಮಾನ್ಯನ ಇಂತಹ ಸಂಕಲ್ಪವು ಭಯೋತ್ಪಾದನೆಯ ಅಂತ್ಯ ದೂರವಿಲ್ಲ ಎಂದು ತೋರಿಸುತ್ತದೆ. ಕೇಂದ್ರಾಡಳಿತ ಪ್ರದೇಶದ ಸರ್ಕಾರವು ಭಯೋತ್ಪಾದಕರು ಮತ್ತು ಭಯೋತ್ಪಾದನೆ ವಿರುದ್ಧ ಧೀರ ಕ್ರಮಕ್ಕಾಗಿ ಗ್ರಾಮಸ್ಥರಿಗೆ 5 ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಿಸುತ್ತದೆ ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

ಬಂಧನದ ಬಗ್ಗೆ ವಿವರಗಳನ್ನು ಹಂಚಿಕೊಂಡ ಜಮ್ಮು ಪೊಲೀಸರು, ಬಂಧಿತ ಉಗ್ರರು ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಸೇರಿದ್ದಾರೆ ಎಂದು ಹೇಳಿದ್ದಾರೆ.
ರಾಜೌರಿ ಪೊಲೀಸರು ಇತ್ತೀಚೆಗಷ್ಟೇ ಹೆಚ್ಚಿನ ಸಂಖ್ಯೆಯ ಐಇಡಿಗಳನ್ನು ವಶಪಡಿಸಿಕೊಂಡಿದ್ದರು ಮತ್ತು ಇತ್ತೀಚೆಗೆ ಎಲ್‌ಇಟಿಯ ಮಾಡ್ಯೂಲ್ ಅನ್ನು ಭೇದಿಸಿದ್ದರು, ಇದರಲ್ಲಿ ಎಲ್‌ಇಟಿಯ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿತ್ತು ಮತ್ತು ತಾಲಿಬ್ ಹುಸೇನ್ ಅವರನ್ನು ಪರಾರಿ ಎಂದು ಘೋಷಿಸಲಾಯಿತು ಮತ್ತು ಅವರಿಗೆ ಬಹುಮಾನವನ್ನು ಘೋಷಿಸಲಾಯಿತು. ತಾಲಿಬ್ ಹುಸೇನ್ ಪಾಕಿಸ್ತಾನ ಮೂಲದ ಎಲ್‌ಇಟಿ ಭಯೋತ್ಪಾದಕ ಖಾಸಿಮ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಾಗರಿಕ ಹತ್ಯೆಗಳು ಮತ್ತು ಗ್ರೆನೇಡ್ ಸ್ಫೋಟಗಳ ಜೊತೆಗೆ ರಾಜೌರಿ ಜಿಲ್ಲೆಯಲ್ಲಿ ಕನಿಷ್ಠ 3 ಐಇಡಿ ಸ್ಫೋಟಗಳಲ್ಲಿ ಭಾಗಿಯಾಗಿದ್ದಾನೆ.
ಪ್ರಾಥಮಿಕ ವಿಚಾರಣೆಯ ವೇಳೆ ಇಬ್ಬರೂ ಉಗ್ರರು ಪಾಕಿಸ್ತಾನದ ಎಲ್‌ಇಟಿ ಹ್ಯಾಂಡ್ಲರ್ ಸಲ್ಮಾನ್ ಜೊತೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement