ನವದೆಹಲಿ: ನೆರೆಮನೆಯ ನಾಯಿ ಬೊಗಳಿತು ಎಂಬ ಕ್ಷುಲ್ಲಕ ಕಾರಣ ವ್ಯಕ್ತಿಯೊಬ್ಬ ಮೂವರ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿರುವ ಘಟನೆ ದೆಹಲಿಯ ಪಶ್ಚಿಮ್ ವಿಹಾರ್ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ವ್ಯಕ್ತಿ ನಾಯಿಗೂ ಹೊಡೆದು ಗಾಯಗೊಳಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಡೀ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮುಂಜಾನೆ ಧರ್ಮವೀರ್ ದಹಿಯಾ ಅಡ್ಡಾಡುತ್ತಿದ್ದಾಗ ನೆರೆಮನೆಯ ರಕ್ಷಿತ್ ಎಂಬವರ ನಾಯಿ ಬೊಗಳಲು ಪ್ರಾರಂಭಿಸಿತು. ನಾಯಿಯ ಬೊಗಳುವಿಕೆಯಿಂದ ಸಿಟ್ಟಿಗೆದ್ದ ಧರ್ಮವೀರ್ ದಹಿಯಾ ನಾಯಿಯ ಬಾಲ ಹಿಡಿದೆಳೆದು ದೂರ ತಳ್ಳಿದ್ದಾನೆ.
ನಾಯಿಯ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ರಕ್ಷಿಸಲು ಬಂದಾಗ, ದಹಿಯಾ ನಾಯಿಯನ್ನು ಥಳಿಸಿದರು, ನಂತರ ಅದು ಆತನಿಗೆ ಕಚ್ಚಿದೆ ಎಂದು ವರದಿಯಾಗಿದೆ. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಹಿಯಾ ನಂತರ ರಕ್ಷಿತ್ ಮತ್ತು ಅವರ ಕುಟುಂಬದ ಮಹಿಳೆಗೆ ರಾಡ್ನಿಂದ ಹೊಡೆದಿದ್ದಾನೆ. ಮಧ್ಯಪ್ರವೇಶಿಸಲು ಪ್ರಯತ್ನಿಸಿದ ತನ್ನ ನೆರೆಯವನಾದ 53 ವರ್ಷದ ವ್ಯಕ್ತಿಯ ಮೇಲೂ ದಾಳಿ ಮಾಡಿದ್ದಾನೆ.
ಘಟನೆಯ ವೀಡಿಯೊದಲ್ಲಿ ಕೋಪಗೊಂಡ ವ್ಯಕ್ತಿ ಮಹಿಳೆಗೆ ರಾಡ್ನಿಂದ ಹೊಡೆದಿದ್ದಾನೆ. ಮತ್ತೊಂದು ವೀಡಿಯೊವು ದಹಿಯಾ ರಾಡ್ನಿಂದ ನಾಯಿಯ ತಲೆಗೆ ಹೊಡೆಯುವುದನ್ನು ತೋರಿಸುತ್ತದೆ.
ಗಾಯಗೊಂಡಿರುವ ಎಲ್ಲಾ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ದಹಿಯಾ ನಾಯಿ ಕಡಿತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಡ್ನಿಂದ ತಲೆಗೆ ಹೊಡೆದ ನಂತರ ನಾಯಿ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ, ಮತ್ತು ಪಶುವೈದ್ಯರ ಬಳಿಗೆ ಕರೆದೊಯ್ಯಲಾಗುವುದು ಎಂದು ಅದರ ಮಾಲೀಕ ರಕ್ಷಿತ್ ಹೇಳಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ