ಸಂಯುಕ್ತ ಕಿಸಾನ್ ಮೋರ್ಚಾದ 3 ಸದಸ್ಯರನ್ನು ಒಳಗೊಂಡ ಕನಿಷ್ಠ ಬೆಂಬಲ ಬೆಲೆ ಸಮಿತಿ ರಚಿಸಿದ ಕೇಂದ್ರ

ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ಕೃಷಿ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರವು ಅಂತಿಮವಾಗಿ ಸಮಿತಿಯನ್ನು ರಚಿಸಿದ್ದು, ಮಾಜಿ ಕೃಷಿ ಕಾರ್ಯದರ್ಶಿ ಸಂಜಯ್ ಅಗರವಾಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಸಮಿತಿಯು ನೈಸರ್ಗಿಕ ಕೃಷಿ, ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸಲು ಮತ್ತು ಎಂಎಸ್‌ಪಿ(MSP)ಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸುವ ಗುರಿಯನ್ನು ಹೊಂದಿದೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಈ ಕುರಿತು ಜುಲೈ 12 ರಂದು ಅಧಿಸೂಚನೆ ಹೊರಡಿಸಿತ್ತು. ಸಂಯುಕ್ತ ಕಿಸಾನ್ ಮೋರ್ಚಾದ (SKM) ಮೂವರು ಸದಸ್ಯರು MSP ಸಮಿತಿಯ ಭಾಗವಾಗಬೇಕಿದೆ. ಮೂರು ಹೆಸರುಗಳನ್ನು ಕೇಂದ್ರಕ್ಕೆ ಕಳುಹಿಸಲು ಎಸ್‌ಕೆಎಂಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ಎಂಎಸ್‌ಪಿ ಮೇಲಿನ ಕಾನೂನು ಖಾತರಿಗಾಗಿ ರೈತರ ಬೇಡಿಕೆಯನ್ನು ಚರ್ಚಿಸಲು ಸಮಿತಿಯನ್ನು ರಚಿಸುವುದಾಗಿ ಭರವಸೆ ನೀಡಿದ್ದರು. ಹೆಚ್ಚುವರಿಯಾಗಿ, ಈ ವರ್ಷದ ಫೆಬ್ರವರಿಯಲ್ಲಿ, ಪ್ರಧಾನಿ ಮೋದಿ ಅವರು ಸಮಿತಿಯನ್ನು ರಚಿಸಲು ಬದ್ಧರಾಗಿದ್ದೇವೆ ಮತ್ತು ರಾಜ್ಯ ಚುನಾವಣೆಯ ನಂತರ ಇದನ್ನು ರಚಿಸಲಾಗುವುದು ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

ಸಮಿತಿಯ ಸದಸ್ಯರು
ಅಧ್ಯಕ್ಷರು-ಸಂಜಯ್ ಅಗರವಾಲ್ (ಮಾಜಿ ಕೃಷಿ ಕಾರ್ಯದರ್ಶಿ)
ರಮೇಶ್ ಚಂದ್ ಸದಸ್ಯರು- NITI ಆಯೋಗ್ (ಕೃಷಿ)
ಕೃಷಿ ಅರ್ಥಶಾಸ್ತ್ರಜ್ಞ- ಡಾ.ಸಿ.ಎಸ್.ಸಿ. ಶೇಖರ್ -(ಭಾರತೀಯ ಆರ್ಥಿಕ ಅಭಿವೃದ್ಧಿ ಸಂಸ್ಥೆ) (ii) ಡಾ. ಸುಖಪಾಲ್ ಸಿಂಗ್ (IIM, ಅಹಮದಾಬಾದ್)

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರೈತ ಭರತ್ ಭೂಷಣ ತ್ಯಾಗಿ

ರೈತರ ಪ್ರತಿನಿಧಿಗಳು-ಸಂಯುಕ್ತ ಕಿಸಾನ್ ಮೋರ್ಚಾದ ಮೂವರು ಸದಸ್ಯರು (ಹೆಸರುಗಳನ್ನು ಸೇರಿಸಬೇಕು)

ಇತರೆ ರೈತ ಸಂಘಟನೆಗಳ ಸದಸ್ಯರು
ಗುಣವಂತ ಪಾಟೀಲ್, ಕೃಷ್ಣವೀರ್ ಚೌಧರಿ, ಪ್ರಮೋದ್ ಕುಮಾರ್ ಚೌಧರಿ, ಗುಣಿ ಪ್ರಕಾಶ್, ಸಯ್ಯದ್ ಪಾಶಾ ಪಟೇಲ್
ರೈತರ ಸಹಕಾರಿ/ಗುಂಪಿನ ಪ್ರತಿನಿಧಿ- ದಿಲೀಪ್ ಸಂಘಾನಿ, ಅಧ್ಯಕ್ಷರು, ಇಫ್ಕೋ, ಬಿನೋದ್ ಆನಂದ್, ಪ್ರಧಾನ ಕಾರ್ಯದರ್ಶಿ, ಸಿಎನ್‌ಆರ್‌ಐ

ಸಿಎಸಿಪಿಯ ಹಿರಿಯ ಸದಸ್ಯ
ನವೀನ್ ಪಿ. ಸಿಂಗ್

ಕೃಷಿ ವಿಶ್ವವಿದ್ಯಾಲಯಗಳು/ಸಂಸ್ಥೆಗಳ ಹಿರಿಯ ಸದಸ್ಯರು
ಡಾ. ಪಿ. ಚಂದ್ರಶೇಖರ್, ನಿರ್ದೇಶಕ ಜನರಲ್, ರಾಷ್ಟ್ರೀಯ ಕೃಷಿ ವಿಸ್ತರಣೆ ಸಂಸ್ಥೆ (ಮ್ಯಾನೇಜ್)
ಡಾ. ಜೆ.ಪಿ. ಶರ್ಮಾ, ಉಪಕುಲಪತಿ, ಶೇರ್-ಎ-ಕಾಶ್ಮೀರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಜಮ್ಮು
ಡಾ. ಪ್ರದೀಪ್ ಕುಮಾರ್ ಬಿಸೆನ್, ಉಪಕುಲಪತಿ, ಜವಾಹರಲಾಲ್ ನೆಹರು ಕೃಷಿ ವಿಶ್ವವಿದ್ಯಾಲಯ, ಜಬಲ್ಪು

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

ಭಾರತ ಸರ್ಕಾರದ ಪ್ರತಿನಿಧಿ
ಕಾರ್ಯದರ್ಶಿ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ
ಕಾರ್ಯದರ್ಶಿ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಮತ್ತು ಮಹಾನಿರ್ದೇಶಕ (ICAR)
ಕಾರ್ಯದರ್ಶಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ
ಕಾರ್ಯದರ್ಶಿ, ಸಹಕಾರ ಸಚಿವಾಲಯ
ಕಾರ್ಯದರ್ಶಿ, ಜವಳಿ ಸಚಿವಾಲಯ

ರಾಜ್ಯ ಸರ್ಕಾರಗಳ ಪ್ರತಿನಿಧಿಗಳು
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಮಿಷನರ್ ಕೃಷಿ, ಕರ್ನಾಟಕ
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಮಿಷನರ್ ಕೃಷಿ, ಆಂಧ್ರ ಪ್ರದೇಶ
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಮಿಷನರ್ ಕೃಷಿ, ಸಿಕ್ಕಿಂ (iv) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಮಿಷನರ್ ಕೃಷಿ, ಒಡಿಶಾ

ಸದಸ್ಯ-ಕಾರ್ಯದರ್ಶಿ
ಜಂಟಿ ಕಾರ್ಯದರ್ಶಿ (ಬೆಳೆ)

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement