ಧಾರವಾಡ: ಸಿಬಿಎಸ್‌ಇ ೧೦ನೇ ತರಗತಿ ಪರೀಕ್ಷೆಯಲ್ಲಿ ಜೆಎಸ್‌ಎಸ್‌ ಮಂಜುನಾಥೇಶ್ವರ ಸಿಬಿಎಸ್ಇ ಶಾಲೆ ನೂರಕ್ಕೆ ೧೦೦% ಫಲಿತಾಂಶ

ಧಾರವಾಡ: ೨೦೨೧-೨೨ ರ ಸಿಬಿಎಸ್‌ಇ ೧೦ನೇ ತರಗತಿಯ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆ ನೂರಕ್ಕೆ ೧೦೦ % ಫಲಿತಾಂಶ ಪಡೆದಿದೆ. ಶಾಲೆಯು ಸತತ ೧೬ ನೇ ವರ್ಷ ನೂರಕ್ಕೆ ೧೦೦% ಫಲಿತಾಂಶ ಪಡೆದಿದೆ.
ಸೌಮ್ಯಾ ಸುಮನ್ ಅತೀ ಹೆಚ್ಚು ೪೯೭/೫೦೦ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಶಾಲೆಯಲ್ಲಿ ಪರೀಕ್ಷೆಗೆ ಕುಳಿತ ಒಟ್ಟು ೨೪೨ ವಿದ್ಯಾರ್ಥಿಗಳಲ್ಲಿ ೨೪ ವಿದ್ಯಾರ್ಥಿಗಳು ೯೫% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ೩೪ ವಿದ್ಯಾರ್ಥಿಗಳು ೮೫ %ರಿಂದ ೯೪% ಅಂಕಗಳನ್ನು ಪಡೆದಿದ್ದಾರೆ ಹಾಗೂ ೯೪ ವಿದ್ಯಾರ್ಥಿಗಳು ೬೦% ರಿಂದ ೮೪% ಅಂಕಗಳನ್ನು ಪಡೆದಿದ್ದಾರೆ.
ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿ ಡಾ. ನ .ವಜ್ರಕುಮಾರ, ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ, ಪ್ರಾಂಶುಪಾಲರಾದ ಸಾಧನಾ.ಎಸ್ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement