ಬೆಂಗಳೂರು: ರಾಜ್ಯ ಸರ್ಕಾರ ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಿದೆ. ಪಕ್ಷ ನಿಷ್ಠ ನಾಯಕರುಗಳಿಗೆ ಮಣೆ ಹಾಕಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಶ್ರಮಿಸುತ್ತಿರುವರಿಗೆ ನಿಗಮ ಮಂಡಳಿ ನೀಡಲಾಗಿದೆ.
ಜುಲೈ 12 ರಂದು ರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು 47 ನಿಗಮ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ರದ್ದು ಮಾಡಿ ಆದೇಶ ಹೊರಡಿಸಿದ್ದರು.
ಇತ್ತೀಚೆಗೆ ಅಷ್ಟೇ 47 ನಿಗಮ ಮಂಡಳಿಗಳ ಪೈಕಿ ಶಾಸಕರು, ಮಾಜಿ ಶಾಸಕರು ಅಧ್ಯಕ್ಷರಿರುವ ನಿಗಮ ಮಂಡಳಿ ಬಿಟ್ಟು ಉಳಿದ 22 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿತ್ತು. ಈಗ ಆ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿದ್ದು, ಯಾರಿಗೆ ಯಾವ ನಿಗಮದ ಅಧ್ಯಕ್ಷರ ನೇಮಕಾತಿಯನ್ನು ನೀಡಲಾಗಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ರಘು ಕೌಟಿಲ್ಯ ಮತ್ತು ಮಣಿರಾಜ ಶೆಟ್ಟಿಗೆ ಮತ್ತೆ ಅಧ್ಯಕ್ಷ ಸ್ಥಾನ ದೊರೆತಿದೆ ಎಂಬ ವಿವರ ಈ ಕೆಳಗಿನಂತಿದೆ.
ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ನೇಮಕವಾದ ಅಧ್ಯಕ್ಷರ ಪಟ್ಟಿ
* ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ – ಕೆ.ಪಿ. ವೆಂಕಟೇಶ್
* ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ -ದೇವೇಂದ್ರನಾಥ
* ಕಾಡುಗೊಲ್ಲ ಅಭಿವೃದ್ಧಿ ನಿಗಮ -ಚಂಗಾವರ ಮಾರಣ್ಣ
* ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ -ಎಂ.ಕೆ.ವಾಸುದೇವ
* ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ -ಎಂ.ಕೆ.ಶ್ರೀನಿವಾಸ
* ದ್ರಾಕ್ಷಿ ಮತ್ತು ವೈನ್ ಬೋರ್ಡ್ -ಎನ್.ಎಂ. ರವಿನಾರಾಯಣ ರೆಡ್ಡಿ
* ರೇಷ್ಮೆ ಮಾರಾಟ ಮಂಡಳಿ -ಬಿ.ಸಿ.ನಾರಾಯಣಸ್ವಾಮಿ
* ಲಿಂಬೆ ಅಭಿವೃದ್ಧಿ ಮಂಡಳಿ -ಚಂದ್ರಶೇಖರ ಕವಟಗಿ
* ರಾಜ್ಯ ಗೇರು ಅಭಿವೃದ್ಧಿ ನಿಗಮ -ಮಣಿರಾಜ ಶೆಟ್ಟಿ
* ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ -ಗೋವಿಂದ ಜಟ್ಟಪ್ಪ ನಾಯ್ಕ
* ಮೈಸೂರು ಮೃಗಾಲಯ ಪ್ರಾಧಿಕಾರ -ಎಂ.ಶಿವಕುಮಾರ
* ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ -ಎನ್.ರೇವಣಪ್ಪ ಕೋಳಗಿ
* ರೇಷ್ಮೆ ಉದ್ಯಮಗಳ ನಿಗಮ -ಎಂ.ಗೌತಮ್ ಗೌಡ
* ಜೀವ ವೈವಿಧ್ಯ ಮಂಡಳಿ -ಎನ್.ಎಂ.ರವಿ ಕಾಳಪ್ಪ
* ಮದ್ಯಪಾನ ಸಂಯಮ ಮಂಡಳಿ – ಮಲ್ಲಿಕಾರ್ಜುನ ತುಬಾಕಿ
* ಮೀನುಗಾರಿಕೆ ಅಭಿವೃದ್ಧಿ ನಿಗಮ -ಎ.ವಿ.ತೀರ್ಥರಾಮ
* ಮೈಸೂರು ಪೈಂಟ್ಸ್ ಮತ್ತು ವಾರ್ನಿಷ್ ನಿಗಮ – ರಘು ಕೌಟಿಲ್ಯ
* ಮಾರ್ಕೆಟಿಂಗ್ ಕಮ್ಯುನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ – ಎಂ.ಎಸ್. ಕರಿಗೌಡ್ರ
* ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ – ವಿರೂಪಾಕ್ಷ ಗೌಡ
* ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ – ಧರ್ಮಣ್ಣ ದೊಡ್ಡಮನಿ
* ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ -ಕೆ.ವಿ.ನಾಗರಾಜ
* ಕರಕುಶಲ ಅಭಿವೃದ್ಧಿ ನಿಗಮ -ಮಾರುತಿ ಮಲ್ಲಪ್ಪ ಅಷ್ಟಗಿ
* ಕಾಡಾ(ತುಂಗಭದ್ರಾ ಯೋಜನೆ) -ಕೊಲ್ಲಾ ಶೇಷಗಿರಿ ರಾವ್
* ಕಾಡಾ(ಕಾವೇರಿ ಜಲಾನಯನ ಯೋಜನೆ) -ಜಿ.ನಿಜಗುಣರಾಜು
* ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ – ಎಂ. ಸರವಣ
ನಿಮ್ಮ ಕಾಮೆಂಟ್ ಬರೆಯಿರಿ