ಧಾರಾಕಾರ ಮಳೆ: ಮನೆಯೊಳಗೆ ಬಂದು ಬೆಚ್ಚಗೆ ಮಲಗಿದ ಕರಡಿ…!

ತುಮಕೂರು: ಧಾರಾಕಾರ ಮಳೆಗೆ ಹೆದರಿಯೋ ಅಥವಾ ಮಳೆಯಿಂದ ರಕ್ಷಿಸಿಕೊಳ್ಳಲೋ ಕರಡಿಯೊಂದು ಓಡಿ ಬಂದು ಮನೆ ನಿರ್ಮಾನ ಹಂತದ ಮನೆಯೊಳಗೆ ಆಶ್ರ ಪಡೆದ ಪ್ರಸಂಗ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿಡಗಲ್ಲು ಹೋಬಳಿ ದೇವಲಕೆರೆ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕಳೆದ ರಾತ್ರಿಯಿಂದಲೇ ಆ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದ ರಕ್ಷಿಸಿಕೊಳ್ಳುವುದಕ್ಕೋ, ಅಥವಾ ವರುಣನ ಆರ್ಭಟಕ್ಕೆ ಹೆದರಿಯೋ ಕರಡಿ ಕಾಡಿನಿಂದ ಈ ಮನೆ ಸೇರಿದೆ.

ಕೇವಲ ನಾಡು ಸೇರಿರುವುದಷ್ಟೇ ಅಲ್ಲ, ನಿರ್ಮಾಣ ಹಂತದಲ್ಲಿದ್ದ ಮಂಜುಳಾ ಪುಟ್ಟರಾಜು ಅವರ ಮನೆಯ ಬೆಡ್‌ರೂಂನೊಳಗೆ ಬಂದು ಬೆಚ್ಚಗೆ ಮಲಗಿಕೊಂಡಿದೆ.
ಬುಧವಾರ ಬೆಳಿಗ್ಗೆ ನಿರ್ಮಾಣವಾಗುತ್ತಿರುವ ಮನೆಗೆ ಬಂದಾಗ ರೂಮಿನಲ್ಲಿ ಕರಡಿ ಮಲಗಿರುವುದು ಕಂಡು ಕಂಗಾಲಾಗಿದ್ದಾರೆ. ಗಾಬರಿಯಾದ ಮನೆ ಮಾಲಕರು ತಕ್ಷಣವೇ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಕರಡಿಯನ್ನು ಗ್ರಾಮದಿಂದ ಕಾಡಿಗೆ ಓಡಿಸಿದ್ದಾರೆ. ಗ್ರಾಮಸ್ಥರು ಈ ಘಟನೆಯಿಂದ ಆತಂಕಿತಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement