ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗಿದ್ದ ಬೋಟ್ ಮುಳುಗಡೆ

ಮಂಗಳೂರು: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗಿದ್ದ ಬೋಟ್ ಮುಳುಗಡೆಗೊಂಡ ಘಟನೆ ಇಂದು, ಭಾನುವಾರ ನಡೆದಿದೆ.
ಮಂಗಳೂರಿನಿಂದ ಆಳಸಮುದ್ರದಲ್ಲಿ ಮೀನುಗಾರಿಕೆಗೆ 11 ಜನ ಮೀನುಗಾರನ್ನು ಹೊತ್ತೊಯ್ದ ಜೈ ಶ್ರೀರಾಮ ಎನ್ನುವ ಬೋಟ್ ಸಮುದ್ರದ ಮಧ್ಯೆ ಮುಳುಗಡೆಯಾಗಿದೆ. ಪಣಂಬೂರು ಕರಾವಳಿಯಿಂದ 90 ನಾಟಿಕಲ್ ಮೈಲು ದೂರದಲ್ಲಿ ಬೋಟ್‌ ಮುಳುಗಡೆಗೊಂಡಿದ್ದು, ಹಡಗಿನಲ್ಲಿ 11 ಮಂದಿ ಮೀನುಗಾರರರಿದ್ದರು.

ಬೋಟ್​​ನಲ್ಲಿದ್ದ 11 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೋಟ್ ಮುಳಗುತ್ತಿದ್ದಂತೆ  ಅವರನ್ನು ಸಮೀಪದಲ್ಲಿದ್ದ ಇನ್ನೊಂದು ಹಡಗಿನಲ್ಲಿದ್ದವರು  ಅವರನ್ನು ರಕ್ಷಿಸಿದ್ದಾರೆ ಎಂದುಹೇಳಲಾಗಿದೆ.ಜನರು  ಜೈ ಶ್ರೀರಾಮ್ ಹೆಸರಿನ ಬೋಟ್ ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಹೊರಟಿತ್ತು. ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾದ ಹಿನ್ನೆಲೆ ಈ ಈ ಘಟನೆ ಸಂಭವಿಸಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement