ಆನೆ ದಾಳಿಗೆ ರೈತ ಸಾವು: ಕಾಡಿನೊಳಗೆ ಅರ್ಧ ಕಿಮೀ ದೂರ ಮೃತದೇಹ ಎಳೆದೊಯ್ದ ಒಂಟಿ ಸಲಗ…!

ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ವ್ಯಕ್ತಿ ಸಾವಿಗೀಡಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾರ್ಗೋಡು ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದ್ದು, ದಾಳಿ ಮಾಡಿ ಸಾಯಿಸಿದ ಕಾಡಾನೆ ನಂತರ ಸುಮಾರು ಅರ್ಧ ಕಿಮೀಗಿಂತಲೂ ದೂರ ಮೃತ ದೇಹವನ್ನು ಕಾಡಿನಲ್ಲಿ ಎಳೆದೊಯ್ದಿದೆ ಎಂದು ಹೇಳಲಾಗಿದೆ.
ಮೃತ ವ್ಯಕ್ತಿಯನ್ನು ಆನಂದ ದೇವಾಡಿಗ (52 ವರ್ಷ) ಎಂದು ಗುರುತಿಸಲಾಗಿದೆ. ಇವರು ಮನೆಯ ಹಿಂಭಾಗದಲ್ಲಿ ಆಕಳನ್ನು ಹುಡುಕಿಕೊಂಡು ಹೋದಾಗ ಆನೆ ಇವರ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ಕಾಡಿನೊಳಗೆ ಮೃತ ಆನಂದ ದೇವಾಡಿಗ ದೇಹದ ಅಂಗಾಗಗಳು ಅಲ್ಲಲ್ಲಿ ಬಿದ್ದಿವೆ.ಮೃತದೇಹವನ್ನ ಕಾಡಿನಲ್ಲಿ ಎಳೆದು ತಂದಿರುವುದರಿಂದ ಕಾಡಿನ ಮರಗಿಡಗಳಿಗೆ ಸಿಲುಕಿ ಮೃತದೇಹದ ಕೆಲ ಅಂಗಾಂಗಳು ಛಿದ್ರವಾಗಿ ಅಲ್ಲಿಲ್ಲಿ ಬಿದ್ದಿವೆ ಎಂದು ವರದಿಯಾಗಿದೆ. ಆನಂದ ಮನೆಗೆ ಬಾರದ ಕಾರಣ ಬೆಳಗ್ಗೆ ಸ್ಥಳಿಯರು ಮನೆ ಹಿಂದಿನ ಕಾಡಿನಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ ಎಂದು ಹೇಳಲಾಗಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement