ಮಂಗಳೂರು: ಸರ್ಕಾರಿ ಬಸ್ ಏರಲು ಯತ್ನಿಸಿದ ಯುವಕನನ್ನು ಕೆಎಸ್ಆರ್ಟಿಸಿ ನಿರ್ವಾಹಕರೊಬ್ಬರು ಕಾಲಿಂದ ಒದ್ದು ಬಸ್ನಿಂದ ಹೊರಗೆ ಹಾಕಿದ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಪುತ್ತೂರಿನ ಈಶ್ವರಮಂಗಲ ಎಂಬಲ್ಲಿ ಬಸ್ ಏರಲು ಯತ್ನಿಸಿದ ಯುವಕನ ಕಪಾಳಕ್ಕೆ ಹೊಡೆದ ನಿರ್ವಾಹಕ ಹೊಡೆದು, ಕಾಲಿಂದ ಒದ್ದಿದ್ದಾನೆ. ಒದ್ದ ರಭಸಕ್ಕೆ ಪ್ರಯಾಣಿಕ ಬಸ್ನಿಂದ ಕೆಳಗೆ ರಸ್ತೆ ಮೇಲೆ ಬಿದ್ದಿದ್ದಾನೆ. ನಂತರ ರಸ್ತೆ ಮೇಲೆ ಬಿದ್ದ ಪ್ರಯಾಣಿಕನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬಿದ್ದ ರಭಸಕ್ಕೆ ಯುವಕನ ತಲೆಗೆ ಗಾಯವಾಗಿದ್ದು, ಸಾರ್ವಜನಿಕರು ಯುವಕನನ್ನು ಉಪಚರಿಸಿದ್ದಾರೆ ಎಂದು ವರದಿಯಾಗಿದೆ.
ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಯಾಣಿಕ ಪಾನಮತ್ತನಂತೆ ಕಾಣುತ್ತಿದ್ದಾನೆ. ಬಸ್ ಹತ್ತಿದಾಗಲೇ ಕಂಡಕ್ಟರ್ ತಡೆದಿದ್ದಾನೆ. ಪ್ರಯಾಣಿಕನ ಕೊಡೆ ಕಿತ್ತುಕೊಂಡು ರಸ್ತೆಗೆ ಎಸೆದಿದ್ದಾನೆ. ನಂತರ ಬಸ್ ಒಳಗಡೆ ಕಪಾಳ ಮೋಕ್ಷ ಮಾಡಿದ್ದಾನೆ. ಆದರೂ ಪ್ರಯಾಣಿಕ ಕೆಳಗೆ ಇಳಿಯದಿದ್ದಾಗ ಬಸ್ನ ಬಾಗಿನಲ್ಲಿ ನಿಂತಿದ್ದ ಪ್ರಯಾಣಿಕನಿಗೆ ಕಾಲಿನಿಂದ ಒದ್ದಿದ್ದಾನೆ. ಪ್ರಯಾಣಿಕ ರಸ್ತೆಯ ಮೇಲೆ ಬಿದ್ದುದ್ದು ವೀಡಿಯೊದಲ್ಲಿ ಕಂಡುಬಂದಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಾರಿಗೆ ಸಂಸ್ಥೆ ನಿರ್ವಾಹಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಸ್ನಿಂದ ಕೆಳಗಿಳಿಸುವುದಾದರೆ ಈ ರೀತಿ ದುರ್ವರ್ತನೆ ತೋರುವುದಲ್ಲ ಎಂದು ಅನೇಕರು ಖಡಿಸಿದ್ದಾರೆ. ಘಟನೆ ವೀಡಿಯೊ ವೈರಲ್ ಆದ ನಂತರ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ