ಗಣೇಶನಮೂರ್ತಿ ತಬ್ಬಿಕೊಂಡು ವಿಸರ್ಜನೆಗೆ ಒಯ್ಯಲು ಬಿಡದ ಪುಟ್ಟ ಹುಡುಗಿ, ಮೂರ್ತಿ ತಬ್ಬಿಕೊಂಡು ಅಳುವ ಕಂದ | ವೀಕ್ಷಿಸಿ

10 ದಿನಗಳ ಗಣೇಶ ಚತುರ್ಥಿ ಹಬ್ಬವು ಮುಕ್ತಾಯವಾಗಿದ್ದು ಒಂದು ದಿನದ ಹಿಂದೆ ಮಹಾರಾಷ್ಟ್ರ ಮತ್ತು ಭಾರತದ ಇತರ ಭಾಗಗಳಾದ್ಯಂತ ಜನರು ವಿವಿಧ ಜಲಮೂಲಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು. ಒಂದು ಕುಟುಂಬವು ತಮ್ಮ ಗಣಪತಿ ವಿಗ್ರಹವನ್ನು ನಿಮಜ್ಜನಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ, ಒಂದು ಚಿಕ್ಕ ಹುಡುಗಿ ಗಣಪತಿ ಬಪ್ಪನನ್ನು ತನ್ನ ಮನೆಯಿಂದ ವಿಸರ್ಜನೆಗೆ ಹೋಗಲು ಬಿಡಲಿಲ್ಲ.
ಹಬ್ಬದ ಕೊನೆಯ ದಿನದಂದು, ಕುಟುಂಬದವರು ತಮ್ಮ ಕಾರಿನ ಟ್ರಂಕ್‌ನಲ್ಲಿ ತಮ್ಮ ವಿಗ್ರಹವನ್ನು ವಿಸರ್ಜನೆಗೆಂದು ಮುಳುಗಿಸಲು ತೆಗೆದುಕೊಂಡು ಹೋಗುತ್ತಿದ್ದಾಗ ಅವರ ಪುಟ್ಟ ಮಗಳು ಗಣಪತಿ ಬಪ್ಪನನ್ನು ತಬ್ಬಿ ಹಿಡಿದು ಮನೆಯವರನ್ನು ತಡೆದಿದ್ದಾಳೆ.

ಗಣಪತಿಯನ್ನು ಹೋಗಲು ಬಿಡುವಂತೆ ಆಕೆಯ ಕುಟುಂಬವು ಮನವೊಲಿಸಲು ಪ್ರಯತ್ನಿಸುತ್ತಿದ್ದಾಗಲೂ ಆ ಪುಟ್ಟ ಹುಡುಗಿ ಕಾರಿನಲ್ಲಿ ವಿಗ್ರಹವನ್ನು ತಬ್ಬಿಕೊಂಡು ಅಳುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಒಂದು ಹಂತದಲ್ಲಿ, ಹುಡುಗಿ ಬಪ್ಪನ ಮಡಿಲಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಾಳೆ ಹಾಗೂ ಗಣಪತಿ ಮೂರ್ತಿ ವಿಸರ್ಜನೆಯನ್ನು ಮಾಡುವುದು ಬೇಡವೆಂದು ಮನೆಯವರ ಬಳಿ ಪಟ್ಟು ಹಿಡಿಯುತ್ತಾಳೆ. ಕೆಲವು ಹೆಂಗಸರು ಅವಳನ್ನು ವಿಗ್ರಹದ ಬಳಿಯಿಂದ ಎತ್ತಿಕೊಳ್ಳಲು ಪ್ರಯತ್ನಿಸುತ್ತಾರೆ, ಬಪ್ಪಾ ಮುಂದಿನ ವರ್ಷ ಮನೆಗೆ ಹಿಂತಿರುಗುತ್ತಾನೆ ಎಂದು ಮನವೊಲಿಸಲು ಪ್ರಯತ್ನಿಸುತ್ತಾರೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಆದರೆ ಪುಟ್ಟ ಹುಡುಗಿ ವಿಗ್ರಹವನ್ನು ಹಿಡಿದುಕೊಂಡು ಅಳುತ್ತಾಳೆ ಮತ್ತು ಬಿಡಲು ನಿರಾಕರಿಸುತ್ತಾಳೆ. ಆಕೆಯ ಕುಟುಂಬವು ಅಂತಿಮವಾಗಿ ಅವಳನ್ನು ವಿಗ್ರಹದಿಂದ ಬೇರ್ಪಡಿಸುತ್ತದೆ ಮತ್ತು ಅದನ್ನು ವಿಸರ್ಜನಿಗೆಂದು ತೆಗೆದುಕೊಳ್ಳುತ್ತದೆ. “ಮೇರೆ ಬಪ್ಪಾ ಕೋ ಮತ್ ಲೆ ಜಾವೋ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

4.3 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement