ಬೆಂಗಳೂರು: ವೈದ್ಯರನ್ನು ನಾರಾಯಣ ಸ್ವರೂಪಿ ಎಂದು ಹೇಳುತ್ತಾರೆ. ಕೊರೋನಾ ಉಲ್ಬಣ ಸ್ಥಿತಿಯಲ್ಲಿದ್ದಾಗ ಪ್ರಪಂಚದಾದ್ಯಂತ ವೈದ್ಯರು, ನರ್ಸ್ಗಳು, ಆಸ್ಪತ್ರೆ ಸಿಬ್ಬಂದಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡಿ ವೈದ್ಯಲೋಕದ ಗೌರವ ಹೆಚ್ಚಿಸಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಬೆಂಗಳೂರಿನ ವೈದ್ಯರೊಬ್ಬರು ತಮ್ಮ ಮೇರುಮಟ್ಟದ ಕಾರ್ಯದ ಮೂಲಕ ವೈದ್ಯಲೋಕದ ಕೀರ್ತಿ ಮತ್ತು ಗೌರವ ಹೆಚ್ಚಿಸಿದ್ದಾರೆ.
ಬೆಂಗಳೂರು ನಗರ ಟ್ರಾಫಿಕ್ ಸಮಸ್ಯೆ ಕುಖ್ಯಾತಿ ಪಡೆದಿದೆ. ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆಗಳಿಂದ ತತ್ತರಿಸುವ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಟ್ರಾಫಿಕ್ ಸಮಸ್ಯೆಯಿಂದ ತುರ್ತು ಶಸ್ತ್ರಚಿಕಿತ್ಸೆಗೆ ಹೋಗುವ ಬೆಂಗಳೂರಿನ ವೈದ್ಯರು ಪರದಾಡಬೇಕಾಯಿತು, ಆದರೆ ಅವರಿಗೆ ತುರ್ತಾಗಿ ಆಪರೇಶನ್ಗೆ ಹೋಗಲೇಬೇಕಾಗಿತ್ತು. ಬೆಂಗಳೂರಿನ ಖ್ಯಾತ ಗ್ಯಾಸ್ಟ್ರೋಎಂಟರಾಲಜಿ ಶಸ್ತ್ರಚಿಕಿತ್ಸಕ ಡಾ.ಗೋವಿಂದ್ ನಂದಕುಮಾರ್ ಅವರೇ ಟ್ರಾಫಿಕ್ನಲ್ಲಿ ಸಿಲುಕಿ ಒದ್ದಾಡಿದ ವೈದ್ಯ. ಅವರು ತುರ್ತು ಲ್ಯಾಪರೊಸ್ಕೋಪಿಕ್ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಲು ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗೆ ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಅವರ ಕಾರು ಭಾರೀ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಕೊಂಡಿದೆ.
ಓಡಿಕೊಂಡೇ ಆಸ್ಪತ್ರೆ ತಲುಪಿದ ಡಾಕ್ಟರ್…!
ಸಮಯಕ್ಕೆ ಸರಿಯಾಗಿ ನಿಗದಿತ ಆಪರೇಶನ್ಗೆ ಡಾ. ಗೋವಿಂದ ನಂದಕುಮಾರ ಅವರಿಗೆ ತುರ್ತಾಗಿ ಹೋಗಲೇಬೇಕಾಗಿತ್ತು. ಹೀಗಾಗಿ ಅವರು ಕಾರನ್ನು ಟ್ರಾಫಿಕ್ನಲ್ಲಿ ಬಿಟ್ಟು ಸರ್ಜಾಪುರ-ಮಾರತಹಳ್ಳಿ ಮಾರ್ಗದಲ್ಲಿ ಓಡಲು ನಿರ್ಧರಿಸಿದರು. ತಡಮಾಡದೇ ಸುಮಾರು 3 ಕಿಲೋ ಮೀಟರ್ನಷ್ಟು ಓಡಿಕೊಂಡೇ ಆಸ್ಪತ್ರೆ ತಲುಪಿದ್ದಾರೆ. “ನನಗೆ ಚಾಲಕನಿದ್ದಾನೆ, ಆದ್ದರಿಂದ ನಾನು ಕಾರನ್ನು ಹಿಂದೆ ಬಿಡಲು ಸಾಧ್ಯವಾಯಿತು. ನಾನು ನಿಯಮಿತವಾಗಿ ಜಿಮ್ ಮಾಡಿದ್ದರಿಂದ ನನಗೆ ಓಡುವುದು ಸುಲಭವಾಯಿತು. ನಾನು ಆಸ್ಪತ್ರೆಗೆ ಮೂರು ಕಿಮೀ ಓಡಿದ್ದೇನೆ ಮತ್ತು ಶಸ್ತ್ರಚಿಕಿತ್ಸೆಯ ಸಮಯಕ್ಕೆ ಬಂದಿದ್ದೇನೆ, ಎಂದು ಅವರು ಹೇಳಿದ್ದಾರೆ.
ಪ್ರತಿದಿನ ಬೆಂಗಳೂರಿನ ಮಧ್ಯಭಾಗದಿಂದ ಬೆಂಗಳೂರಿನ ಆಗ್ನೇಯ ಭಾಗದಲ್ಲಿರುವ ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗೆ ಪ್ರಯಾಣಿಸುತ್ತೇನೆ. ನಾನು ಶಸ್ತ್ರಚಿಕಿತ್ಸೆಗೆ ಸಮಯಕ್ಕೆ ಮನೆಯಿಂದ ಹೊರಟೆ. ನನ್ನ ತಂಡ ಸಿದ್ಧವಾಗಿತ್ತು ಮತ್ತು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ಸಮಯಕ್ಕೆ ಸರಿಯಾಗಿ ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು. ಆದರೆ, ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಟ್ರಾಫಿಕ್ ಜಾಮ್ ಆಗಿತ್ತು. ಡ್ರೈವರ್ ಹೇಳಿ ಕಾರನ್ನು ಬಿಟ್ಟು ಓಡಿ ನಿಗದಿತ ಸಮಯಕ್ಕೆ ಆಸ್ಪತ್ರೆ ತಲುಪಿದೆ ಎಂದು ವೈದ್ಯರು ಹೇಳಿದ್ದಾರೆ.
ಟ್ರಾಫಿಕ್ ಬಗ್ಗೆ ಗೂಗಲ್ನಲ್ಲಿ ತಿಳಿದು ಓಡುವ ನಿರ್ಧಾರ
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಕೊಂಡರೆ ಸಾಮಾನ್ಯವಾಗಿ 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಇಂದು ನಾನು ದೊಡ್ಡ ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿಹಾಕಿಕೊಂಡಿದ್ದೆ, ನಾನು ಗೂಗಲ್ ನಕ್ಷೆಗಳನ್ನು ಪರಿಶೀಲಿಸಿದಾಗ ಅದು ಇನ್ನೂ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ತೋರಿಸಿದೆ. ಹೀಗಾಗಿ ನಾನು ಕಾರಿನಿಂದ ಇಳಿದು ಓಡುವ ನಿರ್ಧಾರ ಮಾಡಿದೆ ಎಂದು ಡಾ. ಗೋವಿಂದ್ ನಂದಕುಮಾರ್ ಹೇಳಿದ್ದಾರೆ.
ಆಪರೇಷನ್ ಯಶಸ್ವಿ
ಆಸ್ಪತ್ರೆಯಲ್ಲಿ ರೋಗಿಯು ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ರೋಗಿಗೆ ಅರಿವಳಿಕೆ ನೀಡಲು ಸಿದ್ಧತೆ ನಡೆಸುತ್ತಿರುವ ವೈದ್ಯರು ಆಪರೇಷನ್ ಥಿಯೇಟರ್ ತಲುಪಿದ ಕೂಡಲೇ ಗೋವಿಂದ್ ಅವರ ತಂಡ ಕಾರ್ಯಪ್ರವೃತ್ತವಾಯಿತು. ಡಾ ಗೋವಿಂದ್ ನಂದಕುಮಾರ್ ಅವರು ಸರಿಯಾದ ಸಮಯಕ್ಕೆ ತಲುಪಿ ಶಸ್ತ್ರಚಿಕಿತ್ಸಾ ಉಡುಪುಗಳನ್ನು ಪಡೆದರು ಮತ್ತು ನಂತರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ರೋಗಿಯನ್ನು ನಿಗದಿತ ಸಮಯಕ್ಕೆ ಡಿಸ್ಚಾರ್ಜ್ ಮಾಡಲಾಗಿದೆ ಮತ್ತು ಪ್ರಸ್ತುತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
JAYARAM KARNA
Hats off to the commitment doctre, may your tribe increase