ಗೆಳೆತನ ಮಾಡದಿದ್ದರೆ ಕಿಡ್ನಾಪ್ ಮಾಡ್ತೇವೆ: ರಾಂಚಿಯ ಶಾಲೆಯಲ್ಲಿ ಹಿಂದೂ ಬಾಲಕಿಯರಿಗೆ ಬೆದರಿಕೆ

ರಾಂಚಿ: ಮುಸ್ಲಿಂ ಗೂಂಡಾಗಳ ಗುಂಪೊಂದು ಜಾರ್ಖಂಡ್‌ನ ರಾಂಚಿಯಲ್ಲಿ ಸರ್ಕಾರಿ ಶಾಲೆಯೊಂದಕ್ಕೆ ನುಗ್ಗಿ, ಶಸ್ತ್ರಾಸ್ತ್ರಗಳನ್ನು ಝಳಪಿಸಿ ತಮ್ಮನ್ನು ಸ್ನೇಹಿತರಾಗಿ ಮಾಡಿಕೊಳ್ಳಬೇಕು. ಒಂದುವೇಳೆ ಇದನ್ನು ಪಾಲಿಸದಿದ್ದರೆ ಅಪಹರಿಸುವುದಾಗಿ ಹುಡುಗಿಯರಿಗೆ ಬೆದರಿಕೆ ಹಾಕಿದ್ದಾರೆ.
ಕೆಲವು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಗೂಂಡಾಗಳ ವಿರುದ್ಧ ನಿಂತಿದ್ದರಿಂದ, ಅವರಿಗೆ ಬೆದರಿಕೆ ಹಾಕಿ ನಂತರ ಥಳಿಸಲಾಗಿದೆ. 9ನೇ ತರಗತಿಯ ವಿದ್ಯಾರ್ಥಿನಿಯರ ಪ್ರಕಾರ, ಬುಡಕಟ್ಟು ಮತ್ತು ಇತರ ಸಮುದಾಯದ ಹಿಂದೂ ಹುಡುಗಿಯರಿಗೆ ಒಂದು ವಾರದಿಂದ ನಿರಂತರವಾಗಿ ಇಂತಹ ಬೆದರಿಕೆಗಳನ್ನು ಹಾಕುತ್ತಿದ್ದಾರೆ ಎಂದ ಇಂಡಿಯಾ ಟುಡೇ.ಇನ್‌ ವರದಿ ಮಾಡಿದೆ.

ಬಾಲಕಿಯರು ಮತ್ತು ಶಾಲೆಯ ಆಡಳಿತ ಮಂಡಳಿ ನೀಡಿದ ಲಿಖಿತ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಗಾಗಿ 5 ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ
ವಿಷಯಕ್ಕೆ ಕೋಮು ಬಣ್ಣ ನೀಡಲು ಪ್ರಯತ್ನಿಸುವುದು ಬೇಡ. ಇಲ್ಲಿನ ಜನರು ಬುದ್ಧಿವಂತರು. ಪೊಲೀಸರು ನಿರಪರಾಧಿಗಳನ್ನು ಮುಟ್ಟುವುದಿಲ್ಲ. ಆದರೆ ತಪ್ಪಿತಸ್ಥ ಯಾರನ್ನೂ ಬಿಡುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ನೌಶಾದ್ ಆಲಂ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

ರಾಜ್ಯದಲ್ಲಿ ಲವ್ ಜಿಹಾದ್ ಮತ್ತು ಗೂಂಡಾಗಿರಿಯ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿವೆ ಎಂದು ಆರೋಪಿಸಿ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿರುವ ಬಿಜೆಪಿ ಈ ವಿಷಯದ ಬಗ್ಗೆ ಹೇಮಂತ್ ಸೊರೇನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. “ಕೆಲವು ಹತಾಶೆಗೊಂಡ ಮುಸ್ಲಿಂ ಪುರುಷರು ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸುತ್ತಿದ್ದಾರೆ ಮತ್ತು ಇದನ್ನು ತಡೆಯಲು ಸರ್ಕಾರ ಏನನ್ನೂ ಮಾಡುತ್ತಿಲ್ಲ” ಎಂದು ಬಿಜೆಪಿ ಆರೋಪಿಸಿದೆ.
ಇತ್ತೀಚೆಗೆ, ದುಮ್ಕಾದಲ್ಲಿ ಹುಡುಗಿಯೊಬ್ಬಳು ವ್ಯಕ್ತಿಯೊಬ್ಬನ ಲವ್‌ ನಿರಾಕರಿಸಿದ್ದಕ್ಕಾಗಿ ಆಕೆಗೆ ಬೆಂಕಿ ಹಚ್ಚಲಾಯಿತು. ನಂತರ ಆಕೆ ಗಾಯಗೊಂಡು ಆಸ್ಪತ್ರೆಯಲ್ಲಿಮೃತಪಟ್ಟಳು. ಕೆಲವು ದಿನಗಳ ನಂತರ, ಅಂತೆಯೇ ದುಮ್ಕಾದಲ್ಲಿ ಅತ್ಯಾಚಾರವೆಸಗಿದ ನಂತರ ಬುಡಕಟ್ಟು ಬಾಲಕಿಯೊಬ್ಬಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement