ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಅವರ ಬೆಂಗಾವಲು ಕೋಟ್ದ್ವಾರ-ದುಗಡ್ಡಾ ರಸ್ತೆಯಲ್ಲಿ ಆನೆಯೊಂದು ಅಡ್ಡಹಾಕಿದ ಪರಿಣಾಮ ತಮ್ಮ ಕಡೆಗೆ ಬರುವ ಆನೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಅವರು ವಾಹನ ಬಿಟ್ಟು ದೊಡ್ಡದಾದ ಬಂಡೆ ಏರಿ ತಪ್ಪಿಸಿಕೊಳ್ಳಬೇಕಾಯಿತು. ಸೆಪ್ಟೆಂಬರ್ 14ರ ಸಂಜೆ ಈ ಘಟನೆ ನಡೆದಿದೆ.
ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ವೀಡಿಯೊದಲ್ಲಿ, ಮಾಜಿ ಮುಖ್ಯಮಂತ್ರಿ ತಮ್ಮ ಬೆಂಗಾವಲು ಸಿಬ್ಬಂದಿಯೊಂದಿಗೆ ಬಂಡೆಯನ್ನು ಹತ್ತುತ್ತಿರುವುದನ್ನು ಕಾಣಬಹುದು.
ತುಟ್ ಗದ್ರೆ ಬಳಿ ಕಾಡಿನಿಂದ ಆನೆಯೊಂದು ರಸ್ತೆಗೆ ಬಂದಿತ್ತು. ರಾವತ್ ಗರ್ವಾಲ್ ಪ್ರವಾಸದಿಂದ ಕೋಟ್ದ್ವಾರಕ್ಕೆ ಹಿಂತಿರುಗುತ್ತಿದ್ದರು. ಆ ವೇಳೆ ದೊಡ್ಡ ಕಾಡಾನೆಯೊಂದು ಸಿದ್ಧಬಲಿ ದೇವಸ್ಥಾನದ ಬಳಿ ಅವರ ಬೆಂಗಾವಲು ವಾಹನಕ್ಕೆ ಅಡ್ಡವಾಯಿತು.
ಆನೆ ಹೊರಡಬಹುದು, ಅದು ಹೋದ ನಂತರ ಬೆಂಗಾವಲು ಪಡೆ ಮುಂದೆ ಸಾಗಬಹುದು ಎಂದು ಎಲ್ಲರೂ ಕಾಯುತ್ತಿದ್ದರು. ಆದಾಗ್ಯೂ, ಆನೆಯು ಬೆಂಗಾವಲು ಪಡೆಯನ್ನು ಅಟ್ಟಿಸಿಕೊಂಡು ಬರಲು ಪ್ರಾರಂಭಿಸಿತು.
ರಾವತ್ ಅವರನ್ನು ಭದ್ರತಾ ಸಿಬ್ಬಂದಿ ಕಾರಿನಿಂದ ಕೆಳಗಿಳಿಸಿ ಹತ್ತಿರದ ಪರ್ವತ ತೊರೆಯ ಕಡೆಗೆ ಕರೆದೊಯ್ದರು, ಆದರೆ ಆನೆ ಅವರ ಹಿಂದೆ ಓಡಿಬಂತು. ನಂತರ ಆನೆ ಸೊಂಡಿಲಿನಲ್ಲಿ ನೀರು ತುಂಬಿ ಅವರತ್ತ ಹಾರಿಸಿದೆ.
ಸ್ವಲ್ಪ ಸಮಯ ಆನೆ ಶಾಂತವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ರಾವತ್ ಸೇರಿದಂತೆ ಎಲ್ಲರೂ ಬಂಡೆಯಿಂದ ಹಾರಿ ಕೆಳಗೆ ಓಡಿದರು. ತಕ್ಷಣವೇ ತಮ್ಮ ವಾಹನಗಳಲ್ಲಿ ಅಲ್ಲಿಂದ ಹೊರಟರು. 61 ವರ್ಷದ ರಾವತ್ ಅವರು 2017 ರಿಂದ 2021 ರವರೆಗೆ ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದರು.
ಆನೆಗಳು ಪದೇ ಪದೇ ರಸ್ತೆಗೆ ಬರುತ್ತಿರುವ ಪ್ರದೇಶದಿಂದ ವರದಿಯಾಗುತ್ತಿರುವುದು ಇದೇ ಮೊದಲಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ