ಜಮ್ಮು ಮತ್ತು ಕಾಶ್ಮೀರದಲ್ಲಿ ಗುಜ್ಜರ್, ಬಕರ್ವಾಲ್, ಪಹಾರಿ ಸಮುದಾಯಗಳಿಗೆ ಎಸ್‌ಟಿ ಮೀಸಲಾತಿ: ಅಮಿತ್ ಶಾ ಘೋಷಣೆ

ರಾಜೌರಿ/ಜಮ್ಮು: ಕೋಟಾ ಪ್ರಯೋಜನಗಳನ್ನು ಪರಿಶೀಲಿಸಲು ರಚಿಸಲಾದ ಸಮಿತಿಯು ಶಿಫಾರಸು ಮಾಡಿದಂತೆ ಕೇಂದ್ರವು ಗುಜ್ಜರ್, ಬಕರ್ವಾಲ್ ಮತ್ತು ಪಹಾರಿ ಸಮುದಾಯಗಳಿಗೆ ಎಸ್‌ಟಿ ಮೀಸಲಾತಿಯನ್ನು ಜಾರಿಗೊಳಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪ್ರಕಟಿಸಿದ್ದಾರೆ,
ಸರ್ಕಾರದಿಂದ ರಚನೆಯಾದ ಜಿ.ಡಿ. ಶರ್ಮಾ ಆಯೋಗವು ಗುಜ್ಜರ್, ಬಕರ್ವಾಲ್ ಮತ್ತು ಪಹಾರಿ ಸಮುದಾಯಗಳಿಗೆ ಮೀಸಲಾತಿಯನ್ನು ಶಿಫಾರಸು ಮಾಡಿದೆ. ಅದನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಅಮಿತ್‌ ಶಾ ಅವರು ರ್ಯಾಲಿಯಲ್ಲಿ ಹೇಳಿದರು.
ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರವೇ ಅಂತಹ ಮೀಸಲಾತಿ ಸಾಧ್ಯವಾಯಿತು. ಈಗ ಇಲ್ಲಿ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಪಹಾರಿಗಳು ತಮ್ಮ ಹಕ್ಕುಗಳನ್ನು ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಪಹಾರಿಗಳ ಜನಸಂಖ್ಯೆಯು ಸುಮಾರು 6 ಲಕ್ಷ ಎಂದು ಅಂದಾಜಿಸಲಾಗಿದೆ, ಅವರಲ್ಲಿ ಶೇಕಡಾ 55 ರಷ್ಟು ಹಿಂದೂಗಳು ಮತ್ತು ಉಳಿದವರು ಮುಸ್ಲಿಮರು. ಆದರೆ ಗುಜ್ಜರ್ ಮತ್ತು ಬಕರ್ವಾಲ್ ಸಮುದಾಯಗಳು – ಈಗಾಗಲೇ ಶೇಕಡಾ 10 ರಷ್ಟು ಎಸ್‌ಟಿ ಕೋಟಾವನ್ನು ಹೊಂದಿದ್ದಾರೆ. ಅವರು ಪಹಾರಿಗಳಿಗೆ ಬುಡಕಟ್ಟು ಸ್ಥಾನಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಮುಸ್ಲಿಮರು ಮತ್ತು ವಿಶೇಷ ವರ್ಗದ ಹಿಂದೂಗಳು ಕೇವಲ ಭಾಷೆಯ ಆಧಾರದ ಮೇಲೆ ಕೋಟಾ ಪಡೆಯಬಾರದು ಎಂದು ಹೇಳಿದ್ದಾರೆ.
ಅಸ್ತಿತ್ವದಲ್ಲಿರುವ ಎಸ್ಟಿಗಳು ಏನನ್ನೂ ಕಳೆದುಕೊಳ್ಳುವುದಿಲ್ಲ ಎಂದು ಶಾ ಹೇಳಿದರು. “ಕೆಲವರು” ಗುಜ್ಜರ್‌ಗಳು ಮತ್ತು ಬಕರ್‌ವಾಲ್‌ಗಳನ್ನು “ಪ್ರಚೋದನೆ” ಮಾಡಲು ಪ್ರಯತ್ನಿಸಿದರು, ಆದರೆ “ಜನರು ಅವರ ವಿಪ್ರಚೋದನೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಗುಲಾಂ ನಬಿ ಆಜಾದ್ ಸ್ಪರ್ಧಿಸಲ್ಲ

ಇಲ್ಲಿ ಆಳ್ವಿಕೆ ನಡೆಸಿದ ಮೂರು ಕುಟುಂಬಗಳ ಹಿಡಿತದಿಂದ ಜಮ್ಮು ಮತ್ತು ಕಾಶ್ಮೀರವನ್ನು ಮುಕ್ತಗೊಳಿಸಲು ನಾನು ನಿಮ್ಮಲ್ಲಿ ಮನವಿ ಮಾಡಲು ಬಯಸುತ್ತೇನೆ ಎಂದು ಶಾ ಹೇಳಿದರು. ಕಾಂಗ್ರೆಸ್‌ನ ಗಾಂಧಿಗಳಂತೆ ಮುಫ್ತಿಗಳ ಪಿಡಿಪಿ ಮತ್ತು ಅಬ್ದುಲ್ಲಾಗಳ ನ್ಯಾಷನಲ್ ಕಾನ್ಫರೆನ್ಸ್ ಅವರ ಗುರಿಯಾಗಿದ್ದರೂ ಅವರು ಕುಟುಂಬಗಳನ್ನು ಹೆಸರಿಸಲಿಲ್ಲ.
“ಮೀಸಲಾತಿ ನೀಡಿ ಪಹಾರಿಗಳು ಮತ್ತು ಗುಜ್ಜರ್‌ಗಳಿಗೆ ಅಧಿಕಾರ ನೀಡಿದ” ನರೇಂದ್ರ ಮೋದಿಯನ್ನು “ಬಲಪಡಿಸಲು” ಅವರು ಜನರನ್ನು ಕೇಳಿಕೊಂಡರು.
ನ್ಯಾಯಸಮ್ಮತ ಚುನಾವಣೆಯ ಮೂಲಕ ಪಂಚಾಯತ ಮತ್ತು ಜಿಲ್ಲಾ ಕೌನ್ಸಿಲ್‌ಗಳಿಗೆ ಚುನಾಯಿತರಾದ 30,000 ಜನರ ಬಳಿ ಈಗ ಅಧಿಕಾರವಿದೆ.ಈಗಾಗಲೇ ಗ್ರಾಮ ಮಟ್ಟದ ಚುನಾವಣೆಗಳು ನಡೆದಿವೆ ಎಂದು ಅವರು ಒತ್ತಿ ಹೇಳಿದರು.
ಈ ಹಿಂದೆ ಕೇಂದ್ರದಿಂದ ಅಭಿವೃದ್ಧಿಗೆ ಕಳುಹಿಸುತ್ತಿದ್ದ ಹಣವನ್ನೆಲ್ಲ ಕೆಲವರು ಕಬಳಿಸುತ್ತಿದ್ದರು, ಆದರೆ ಈಗ ಎಲ್ಲವನ್ನೂ ಕಲ್ಯಾಣಕ್ಕೆ ಖರ್ಚು ಮಾಡಲಾಗುತ್ತಿದೆ.

ಮೋದಿ ಸರ್ಕಾರವು ಭಯೋತ್ಪಾದಕರ ವಿರುದ್ಧ ಕೈಗೊಂಡಿರುವ “ಬಲವಾದ ಕ್ರಮ” ದಿಂದಾಗಿ ಈಗ ಭದ್ರತಾ ಪರಿಸ್ಥಿತಿ “ತುಂಬಾ ಉತ್ತಮವಾಗಿದೆ” ಎಂದು ಅವರು ಪ್ರತಿಪಾದಿಸಿದರು.
ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಕೆಲವು ಸ್ವಾಯತ್ತತೆಯನ್ನು ನೀಡಿದ ಸಾಂವಿಧಾನಿಕ ನಿಬಂಧನೆಗಳಾದ 35 ಎ ಮತ್ತು 370 ರ ವಿಶೇಷ ಸ್ಥಾನಮಾನ ರದ್ದತಿ ಮಾಡಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ – ಲಡಾಖ್ ಅನ್ನು ಹೀಗೆ ಬೇರ್ಪಡಿಸಲಾಯಿತು – ಅದರಲ್ಲಿ ಜಮ್ಮು ಮತ್ತು ಕಾಶ್ಮೀರವು ಚುನಾಯಿತ ವಿಧಾನಸಭೆಯನ್ನು ಹೊಂದಬಹುದು. ಕ್ಷೇತ್ರಗಳನ್ನು ಗುರುತಿಸುವ ಮತ್ತು ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯು ಬಹುತೇಕ ಮುಗಿದಿರುವುದರಿಂದ ಅದರ ಮೊದಲ ಚುನಾವಣೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಯೋಧ್ಯೆಯಲ್ಲಿ ರಾಮನವಮಿ ದಿನ ಬಾಲರಾಮನ ಹಣೆಗೆ ʼಸೂರ್ಯ ರಶ್ಮಿಯ ತಿಲಕ ʼ ; ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತ ಸಾಗರ

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement