ರಥೋತ್ಸವದ ವೇಳೆ ಮಗುಚಿ ಬಿದ್ದ ವೀರಭದ್ರ ಸ್ವಾಮಿ ರಥ

ಕೊಳ್ಳೇಗಾಲ : ಚಾಮರಾಜನಗರ ತಾಲೂಕಿನ ಅಮಚವಾಡಿ ಸಮೀಪದ ಚನ್ನಪ್ಪನಪುರದ ವೀರಭದ್ರ ಸ್ವಾಮಿ ರಥೋತ್ಸವದ ವೇಳೆ ರಥ ಮಗುಚಿ ಘಟನೆ ನಡೆದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಚೆನ್ನಪ್ಪನ ಪುರದ ಬೆಟ್ಟದ ಮೇಲಿರುವ ವೀರಭದ್ರ ಸ್ವಾಮಿ ರಥೋತ್ಸವ ಇಂದು, ಮಂಗಳವಾರ ಹರ್ಷೋದ್ಗಾರದ ನಡುವೆ ನಡೆಯುತ್ತಿತ್ತು. ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಜನ ಸೇರಿದ್ದರು. ಈ ವೇಳೆ ಭಕ್ತರು ರಥವನ್ನು ಎಳೆಯುತ್ತದ್ದ ಸಂದರ್ಭದಲ್ಲಿ ರಥದ ಒಂದು ಭಾಗ ಸಡಿಲಗೊಂಡು ಬಾಗಲು ಶುರುವಾಗಿದೆ.

ರಥ ಬಾಗುತ್ತಿರುವುದನ್ನು ಅರಿತ ಜನ ದೂರ ಸರಿದಿದ್ದಾರೆ. ನಂತರ ರಥ ಮುಂದಡಿಯಾಗಿ ಮುಗುಚಿ ಬಿದ್ದಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಆದರೆ ರಥ ಮಗುಚಿ ಬಿದ್ದ ಪರಿಣಾಮ ಜನರಲ್ಲಿ ಆತಂಕ ಭಯ ಮನೆ ಮಾಡಿದೆ.
ಮುಜರಾಯಿ ಇಲಾಖೆಗೆ ಸೇರಿದ ಚಾಮರಾಜನಗರ ತಾಲೂಕಿನ ಚನ್ನಪ್ಪನ ಪುರದ ವೀರಭದ್ರ ಸ್ವಾಮಿ ರಥೋತ್ಸವ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನಡೆಯುತ್ತದೆ. ಅದರಂತೆ ಈ ಬಾರಿಯೂ ಸಹ ದೇವಸ್ಥಾನದಲ್ಲಿ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವದ ವೇಳೆ ಈ ಅವಘಡ ಸಂಭವಿಸಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 18, 19ರಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement