“ನಾವು ಭಾರತದತ್ತ ನೋಡೋಣ;ಅವರು ಪ್ರತಿಭಾವಂತರು, ಸಾಮರ್ಥ್ಯವುಳ್ಳವರು : ಭಾರತದ ಬಗ್ಗೆ ರಷ್ಯಾ ಅಧ್ಯಕ್ಷರ ಮುಕ್ತ ಶ್ಲಾಘನೆ

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಭಾರತೀಯರನ್ನು “ಪ್ರತಿಭಾವಂತರು” ಮತ್ತು “ಸ್ಫೂರ್ತಿ”ದಾಯಕ ಜನರು ಎಂದು ಹೊಗಳಿದ್ದಾರೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಭಾರತವು ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.
ನವೆಂಬರ್ 4ರಂದು ರಷ್ಯಾದ ಏಕತಾ ದಿನದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ಪುತಿನ್‌ ಅವರು, ಭಾರತವು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ ಎಂದು ಶ್ಲಾಘಿಸಿದರು ಹಾಗೂ ಭಾರತವು ತನ್ನ ಅಭಿವೃದ್ಧಿಯ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುತ್ತದೆ. ಇದರಲ್ಲಿ ಯಾವುದೇ ಸಂದೇಹಗಳಿಲ್ಲ ಮತ್ತು ಸುಮಾರು ಒಂದೂವರೆ ಶತಕೋಟಿ ಜನರು ಈಗ ಅದರ ಸಾಮರ್ಥ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಆಂತರಿಕ ಅಭಿವೃದ್ಧಿಗಾಗಿ ನಾವು ಭಾರತವನ್ನು ನೋಡೋಣ. ಅವರು ಪ್ರತಿಭಾವಂತರು, ಸಾಮರ್ಥ್ಯವುಳ್ಳವರು ಹಾಗೂ ಅತ್ಯಂತ ಆಂತರಿಕ ಪ್ರಚೋದನೆಯುಳ್ಳ ಜನರು. ಇದರಿಂದಾಗಿ (ಭಾರತ) ಖಂಡಿತವಾಗಿಯೂ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುತ್ತದೆ ಎಂದು ಹೇಳಿದರು.
ಆಫ್ರಿಕಾದಲ್ಲಿ ವಸಾಹತುಶಾಹಿ, ಭಾರತದ ಸಾಮರ್ಥ್ಯ ಮತ್ತು ರಷ್ಯಾ ಹೇಗೆ ‘ವಿಶಿಷ್ಟ ನಾಗರಿಕತೆ ಮತ್ತು ಸಂಸ್ಕೃತಿಯನ್ನು’ ಹೊಂದಿದೆ ಎಂಬುದರ ಕುರಿತು ಮಾತನಾಡಿದ ಅವರು ರಷ್ಯಾದ ಮತ್ತು ಜಾಗತಿಕ ಇತಿಹಾಸದ ಬಗ್ಗೆ ಮಾತನಾಡುವಾಗ ಪಾಶ್ಚಿಮಾತ್ಯ ಸಾಮ್ರಾಜ್ಯಗಳು ಆಫ್ರಿಕಾವನ್ನು ದೋಚಿದವು ಎಂದು ಹೇಳಿದರು.

ಪ್ರಮುಖ ಸುದ್ದಿ :-   ಪಕ್ಷದ ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ತೆಲಂಗಾಣ ಬಿಜೆಪಿಯಲ್ಲಿ ಬಿರುಕು ; ಬಿಜೆಪಿಗೆ ಶಾಸಕ ಟಿ.ರಾಜಾ ಸಿಂಗ್ ರಾಜೀನಾಮೆ

ಹೆಚ್ಚಿನ ಮಟ್ಟಿಗೆ, ಹಿಂದಿನ ವಸಾಹತುಶಾಹಿ ಶಕ್ತಿಗಳಲ್ಲಿ ಸಾಧಿಸಿದ ಸಮೃದ್ಧಿಯ ಮಟ್ಟವು ಆಫ್ರಿಕಾದ ದರೋಡೆಯಲ್ಲಿ ನೆಲೆಗೊಂಡಿದೆ. ಇದು ಎಲ್ಲರಿಗೂ ತಿಳಿದಿದೆ. ಯುರೋಪಿನ ಸಂಶೋಧಕರು ಇದನ್ನು ಮರೆಮಾಡುವುದಿಲ್ಲ. ವಸಾಹತುಶಾಹಿ ಶಕ್ತಿಗಳಲ್ಲಿ ಸಾಧಿಸಿದ ಸಮೃದ್ಧಿಯು ಗಮನಾರ್ಹವಾದ ಮಟ್ಟಿಗೆ ಆಫ್ರಿಕನ್ ಜನರ ದುಃಖ ಮತ್ತು ಸಂಕಟದ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಿದ ಅವರು ನಾನು ಸಂಪೂರ್ಣವಾಗಿ ಅದರಲ್ಲೇ ನಿರ್ಮಿಸಲಾಗಿದೆ ಎಂದು ಹೇಳುತ್ತಿಲ್ಲ, ಆದರೆ ಗಮನಾರ್ಹವಾದ ಮಟ್ಟಿಗೆ ವಸಾಹತುಶಾಹಿ ಶಕ್ತಿಗಳ ಸಮೃದ್ಧಿಯನ್ನು ಈ ರೀತಿಯಲ್ಲಿ ನಿರ್ಮಿಸಲಾಗಿದೆ. ಇದು ಸ್ಪಷ್ಟ ಸತ್ಯವಾಗಿದೆ. ದರೋಡೆ, ಗುಲಾಮರ ವ್ಯಾಪಾರ ಹೀಗೆ ಎಂದು ಪುತಿನ್ ಹೇಳಿದರು.

ರಷ್ಯಾವು ಬಹುರಾಜ್ಯಗಳ ದೇಶವಾಗಿದೆ. ಅನನ್ಯ ನಾಗರಿಕತೆ ಮತ್ತು ಸಂಸ್ಕೃತಿ ಹೊಂದಿರುವ ದೇಶವಾಗಿದೆ. ದೇಶವು ಗಮನಾರ್ಹ ರೀತಿಯಲ್ಲಿ ಯುರೋಪಿಯನ್ ಸಂಸ್ಕೃತಿಯ ಭಾಗವಾಗಿದೆ ಮತ್ತು ಧರ್ಮದ ಮೂಲಕ ಖಂಡದೊಂದಿಗೆ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದರು.
ರಷ್ಯಾವು ಗಮನಾರ್ಹ ರೀತಿಯಲ್ಲಿ, ಕ್ರೈಸ್ತ ಧರ್ಮದ ಆಧಾರದ ಮೇಲೆ ಈ ಸಂಸ್ಕೃತಿಯ (ಯುರೋಪಿಯನ್ ಶಕ್ತಿಗಳ) ಭಾಗವಾಗಿದೆ” ಎಂದು ಹೇಳಿದ ಅವರು, ಆದರೆ ರಷ್ಯಾವು ಒಂದು ಪ್ರಮುಖ ವಿಶ್ವ ಶಕ್ತಿಯಾಗಿ ರೂಪುಗೊಳ್ಳಲು ಬಹುದೇಶೀಯ ಹಾಗೂ ಬಹು ಸಂಸ್ಕೃತಿಯ ದೇಶವಾಗಿರುವುದು ಕೂಡ ಕಾರಣ. ಅಲ್ಲಿಯೇ ಇದರ ಅನನ್ಯತೆ ಅಡಗಿದೆ. ಇದು ನಿಜವಾಗಿಯೂ ಒಂದು ಅನನ್ಯ ನಾಗರಿಕತೆ ಮತ್ತು ವಿಶಿಷ್ಟ ಸಂಸ್ಕೃತಿಯ ದೇಶವಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅಧಿಕಾರಿಯನ್ನು ಕಚೇರಿಯಿಂದ ಹೊರಗೆಳೆದು ಥಳಿತ, ಮುಖಕ್ಕೆ ಒದ್ದು ಹಲ್ಲೆ : ಮೂವರ ಬಂಧನ-ದೃಶ್ಯ ಸಿಸಿಟಿವಿಯಲ್ಲಿ ಸೆರೆ

3.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement