ಆಂಧ್ರದಲ್ಲಿ ತೆರೆದ ಬಾವಿಗೆ ಬಿದ್ದ ಆನೆ : ಜೆಸಿಬಿ ಕಾರ್ಯಾಚರಣೆ ನಂತರ ರಕ್ಷಣೆ | ವೀಕ್ಷಿಸಿ

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಸೋಮವಾರ ರಾತ್ರಿ ಬಾವಿಗೆ ಬಿದ್ದ ಆನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಮಂಗಳವಾರ ರಕ್ಷಿಸಿದ್ದಾರೆ.
ವೀಡಿಯೊದಲ್ಲಿ ಜೆಸಿಬಿ ಯಂತ್ರವು ಬಾವಿಯ ಗೋಡೆಯ ಒಂದು ಭಾಗವನ್ನು ಕಿತ್ತು ಹಾಕುವುದನ್ನು ಮತ್ತು ಆನೆ ಹೊರಬರಲು ಅನುಕೂಲವಾಗುವಂತೆ ಇಳಿಜಾರು ಮಾಡುವುದನ್ನು ತೋರಿಸುತ್ತದೆ. ಅದೃಷ್ಟವಶಾತ್ ಸಂಬಂಧಪಟ್ಟ ಬಾವಿ ತುಂಬಾ ಆಳವಾಗಿ ಇರಲಿಲ್ಲ.
ಸ್ಥಳೀಯರು ಮತ್ತು ಅಧಿಕಾರಿಗಳು ಆರಂಭದಲ್ಲಿ ಆನೆ ತನ್ನಿಂದ ತಾನೇ ಬಾವಿಯಿಂದ ಹೊರಬರಬಹುದೇ ಎಂದು ಕಾಯುತ್ತಿದ್ದರು. ಹಾಗೆ ಮಾಡಲು ಪ್ರಯತ್ನಿಸಿದರೂ, ಮೊದಲ ಕೆಲವು ಪ್ರಯತ್ನಗಳಲ್ಲಿ ಅದು ವಿಫಲವಾಯಿತು

ಸಿಕ್ಕಿಬಿದ್ದ ಆನೆಯನ್ನು ರಕ್ಷಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗುತ್ತಿದ್ದಂತೆ, ಆನೆ ಆತಂಕದಿಂದ ಬಾವಿಯೊಳಗೆ ಅತ್ತೊಂದಿತ್ತ ನೀರು ತುಂಬಿಕೊಂಡಿದ್ದ ಬಾವಿಯ ಗೋಡೆಯ ಮೇಲೆ ಏರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ದಾರಿ ಮಾಡಿಕೊಡಲು ಗೋಡೆಯ ಒಂದು ಭಾಗವನ್ನು ಕೆಡಹಲಾಯಿತು. ತಕ್ಷಣ, ಆನೆ ಅದರ ಸಮೀಪವೇ ಬಂದು ಕಾಯುತ್ತಿತ್ತು. ಜೆಸಿಬಿ ಇನ್ನೂ ಕಲ್ಲು ಹಾಗೂ ಮಣ್ಣು ತೆಗೆದ ನಂತರ ಆನೆ ಬಾವಿಯಿಂದ ಹೊರಬಂತು.

ಈಗಷ್ಟೇ ಅಪಾಯದಿಂದ ಹೊರಬಂದ ಸಮಾಧಾನದಿಂದ ಆನೆ ಕಾಡಿನತ್ತ ತೆರಳುತ್ತಿದ್ದಂತೆ ಸ್ಥಳೀಯರು ಮೊಬೈಲ್‌ ಕ್ಯಾಮೆರಾ ಹಿಡಿಯಲು ಅದನ್ನು ಹಿಂಬಾಲಿಸಿ ಓಡಿದರು.
ಇದೇ ರೀತಿಯ ಘಟನೆಯಲ್ಲಿ, ಪ್ರಾಣಿ ರಕ್ಷಣಾ ಎನ್‌ಜಿಒ ಸದಸ್ಯರು ಭಾನುವಾರ ಉತ್ತರ ಪ್ರದೇಶದ ಆಗ್ರಾದ ಹಳ್ಳಿಯೊಂದರಲ್ಲಿ 40 ಅಡಿ ತೆರೆದ ಬೋರ್‌ವೆಲ್‌ನಿಂದ ಗಂಡು ಚಿನ್ನದ ಬಣ್ಣದ ನರಿಯನ್ನು ರಕ್ಷಿಸಿದ್ದರು. ನಂತರ ಸಂಪೂರ್ಣ ವೈದ್ಯಕೀಯ ಪರೀಕ್ಷೆಯ ನಂತರ, ಪ್ರಾಣಿಯನ್ನು ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲಾಗಿತ್ತು.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

 

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement