ತೆಲಂಗಾಣ: ತಾನು ಕಾಂಗ್ರೆಸ್‌ಗೆ ಸೇರುವುದಾಗಿ ಆರೋಪಿಸಿದ ಬಿಜೆಪಿ ಸಂಸದನಿಗೆ ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಕೆ ಹಾಕಿದ ಕೆಸಿಆರ್ ಪುತ್ರಿ

ಹೈದರಾಬಾದ್‌ : ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಮತ್ತು ನಿಜಾಮಾಬಾದ್ ವಿಧಾನ ಪರಿಷತ್‌ ಸದಸ್ಯೆ ಕಲ್ವಕುಂಟ್ಲ ಕವಿತಾ ಅವರು ತಮ್ಮ ಮೊದಲಿನ ಪಕ್ಷವಾದ ಕಾಂಗ್ರೆಸ್‌ಗೆ ಸೇರಲು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಪರ್ಕದಲ್ಲಿದ್ದಾರೆ ಎಂದು ತಮ್ಮ ವಿರುದ್ಧ ಆರೋಪಿಸಿರುವ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಮತ್ತು ತಮ್ಮ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿಯ ಬಗ್ಗೆ ಮಾತನಾಡುವುದನ್ನು ಮುಂದುವರಿಸಿದರೆ ಸಾರ್ವಜನಿಕವಾಗಿ ಚಪ್ಪಲಿಯಿಂದ ಹೊಡೆಯುವುದಾಗಿ ಎಂದು ಅವರು ಬಿಜೆಪಿ ಸಂಸದರಿಗೆ ಬೆದರಿಕೆ ಹಾಕಿದ್ದಾರೆ.
ಬಿಜೆಪಿ ಸಂಸದರ ಕಾಮೆಂಟ್‌ಗಳಿಂದ ಕೋಪಗೊಂಡ ಟಿಆರ್‌ಎಸ್ ಕಾರ್ಯಕರ್ತರು ಹೊರಗೆ ಪ್ರತಿಭಟನೆ ನಡೆಸಿ ಹೈದರಾಬಾದ್‌ನಲ್ಲಿರುವ ಅರವಿಂದ್ ಅವರ ನಿವಾಸವನ್ನು ಮುಂಜಾನೆ ಧ್ವಂಸಗೊಳಿಸಿದರು. ಕಲ್ವಕುಂಟ್ಲ ಕವಿತಾ ಅವರು ಮುಖ್ಯಮಂತ್ರಿ ಹುದ್ದೆ ಬಗೆಗಿನ ಅಸಮಧಾನದಿಂದ ಕಾಂಗ್ರೆಸ್ ಸೇರಲು ಬಯಸಿದ್ದಾರೆ. ಕವಿತಾ ಅವರು ಖರ್ಗೆ ಅವರಿಗೆ ಕರೆ ಮಾಡಿದ್ದಾರೆ ಎಂದು ಅರವಿಂದ್ ಆರೋಪಿಸಿದ್ದರು. ನಂತರ ಟಿಆರ್‌ಎಸ್‌ ಕಾರ್ಯಕರ್ತರು ಅವರ ಮನೆಗೆ ನುಗ್ಗಿ ಧ್ವಂಸಗೊಳಿಸಿದರು. ಘಟನಾ ಸ್ಥಳದಲ್ಲಿ ಪೊಲೀಸರು ಅವರನ್ನು ತಡೆಯಲು ಯತ್ನಿಸಿದ ಹೊರತಾಗಿಯೂ ಟಿಆರ್‌ಎಸ್‌ ಕಾರ್ಯಕರ್ತರು ಬಲವಂತವಾಗಿ ಅವರ ಮನೆಗೆ ನುಗ್ಗಿ ಕಿಟಕಿ ಗಾಜುಗಳು ಮತ್ತು ಪೀಠೋಪಕರಣಗಳನ್ನು ಹಾನಿಗೊಳಿಸಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ತಮಗೆ ಬೇರೆ ಯಾವುದೇ ಪಕ್ಷ ಸೇರುವ ಆಸಕ್ತಿ ಇಲ್ಲ ಎಂದು ಕವಿತಾ ಪ್ರತಿಕ್ರಿಯಿಸಿದ್ದಾರೆ. “ನಾವು ಇತ್ತೀಚೆಗೆ ಮಾತನಾಡಿದ್ದರೆ ಅದನ್ನು ಖರ್ಗೆ ಜೊತೆ ಪರಿಶೀಲಿಸಿ. ಆಗ ಸತ್ಯ ಹೊರಬೀಳಲಿದೆ ಎಂದು ಅವರು ಹೇಳಿದರು.
ಸಂಸದ ಅರವಿಂದ್‌ ವಿರುದ್ಧ ಹರಿಹಾಯ್ದ ಅವರು, ಬಿಜೆಪಿಯಲ್ಲಿ ಕೇವಲ ಕೀಳು ಮಟ್ಟದ ರಾಜಕೀಯ ಮಾಡುವ ನಾಯಕರಿದ್ದಾರೆ, ಮತ್ತು ಅವರು ತಮ್ಮ ಅಥವಾ ಅವರ ಕುಟುಂಬದ ಬಗ್ಗೆ ಮಾತನಾಡುವುದನ್ನು ಮುಂದುವರಿಸಿದರೆ, ಸಂಸದರಿಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ನಿಜಾಮಾಬಾದ್‌ನ ಚೌರಸ್ತಾದಲ್ಲಿ ಎಚ್ಚರಿಸಿದರು.
ಅರವಿಂದ್ ಅವರ ಹೆಸರನ್ನು ಉಲ್ಲೇಖಿಸಲು ಯೋಗ್ಯವಾಗಿಲ್ಲ ಆದರೆ, ದುರದೃಷ್ಟವಶಾತ್, ಬಿಜೆಪಿಯಲ್ಲಿ ಕೇವಲ ಕೀಳು ರಾಜಕೀಯ ಮಾಡುವವರು ಮಾತ್ರ ಇದ್ದಾರೆ ಎಂದು ಕವಿತಾ ಹೇಳಿದರು. ನಾನು ಯಾವಾಗಲೂ ವೈಯಕ್ತಿಕ ಕಾಮೆಂಟ್‌ಗಳನ್ನು ಮಾಡುವುದಿಲ್ಲ ಮತ್ತು ಅದಕ್ಕಾಗಿಯೇ ನಾನು ನಿಮಗೆ ಎಚ್ಚರಿಕೆ ನೀಡುತ್ತೇನೆ, ನೀವು ನನ್ನ ಅಥವಾ ನನ್ನ ಕುಟುಂಬದ ಬಗ್ಗೆ ಅಸಭ್ಯವಾಗಿ ಮಾತನಾಡುವುದನ್ನು ಮುಂದುವರಿಸಿದರೆ, ನಿಜಾಮಾಬಾದ್‌ನ ಚೌರಸ್ತಾದಲ್ಲಿ ಚಪ್ಪಲಿಯಿಂದ (ಚಪ್ಪಲಿ) ನಿಮಗೆ ಹೊಡೆಯಲಾಗುತ್ತದೆ ಎಂದು ಹೇಳಿದರು.

ತನ್ನ ತಂದೆ ಕೆಸಿಆರ್ (ಕೆ ಚಂದ್ರಶೇಖರ್ ರಾವ್) ನನ್ನ ಜೀವನದಲ್ಲಿ ಒಬ್ಬನೇ ನಾಯಕ. ಅವರೊಂದಿಗೆ ಮಾತ್ರ ನನ್ನ ರಾಜಕೀಯ ಪಯಣ ಮುಂದುವರಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಕಾಂಗ್ರೆಸ್ ಸೇರುವಂತೆ ಮಾತನಾಡಿದ್ದೇನೆ ಎಂಬುದು ಸಂಪೂರ್ಣ ಸುಳ್ಳು ಆರೋಪ. ಬಿಜೆಪಿಯಿಂದ ನನಗೆ ಆಫರ್ ಬಂದಿದ್ದು ನಿಜ. ಅವರು (ಬಿಜೆಪಿ ನಾಯಕರು) ಇಲ್ಲಿ ‘ಶಿಂಧೆ ಮಾದರಿ’ ಅನುಷ್ಠಾನದ ಬಗ್ಗೆ ಮಾತನಾಡಿದ್ದಾರೆ, ಅದು ತೆಲಂಗಾಣದಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ಪೊಲೀಸರು 30 ಪ್ರತಿಭಟನಾಕಾರರನ್ನು ಬಂಧಿಸಿ ಬಂಜಾರ ಹಿಲ್ಸ್ ಮತ್ತು ಜುಬಿಲಿ ಹಿಲ್ಸ್‌ನಲ್ಲಿರುವ ಪೊಲೀಸ್ ಠಾಣೆಗಳಿಗೆ ಸ್ಥಳಾಂತರಿಸಿದ್ದಾರೆ. ಬಿಜೆಪಿ ಸಂಸದರು ತಮ್ಮ ಲೋಕಸಭಾ ಕ್ಷೇತ್ರವಾದ ನಿಜಾಮಾಬಾದ್‌ನ ಕಲೆಕ್ಟರೇಟ್‌ನಲ್ಲಿ ದಿಶಾ ಕುರಿತಾದ ಸಭೆಯಲ್ಲಿ ಭಾಗವಹಿಸಿದ್ದರು. ಹೈದರಾಬಾದ್ ದಾಳಿಯ ನಂತರ, ನಿಜಾಮಾಬಾದ್‌ನಲ್ಲಿರುವ ಸಂಸದರ ಮನೆಗೆ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಪ್ರಮುಖ ಸುದ್ದಿ :-   ಆಘಾತಕಾರಿ...| ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡ ಬ್ಯಾಂಕ್‌ ; ಹಣದ ಕಂತು ಕೊಟ್ಟ ಬಳಿಕವೇ ಮಹಿಳೆಯ ಬಿಡುಗಡೆ...!

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement