ಉತ್ತರ ಕನ್ನಡ ಜಿಲ್ಲೆಯ 12 ತಾಪಂಗಳ ಕ್ಷೇತ್ರ ಮರುವಿಂಗಡಣೆಯಲ್ಲಿ ಒಟ್ಟು121 ತಾಪಂ ಕ್ಷೇತ್ರಗಳ ರಚನೆ

posted in: ರಾಜ್ಯ | 0

ಕಾರವಾರ: ಜಿಲ್ಲೆಯ ಹನ್ನೆರಡು ತಾಲೂಕುಗಳ ತಾಲೂಕು ಪಂಚಾಯತ ಕ್ಷೇತ್ರಗಳ ಮರುವಿಂಗಡೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಒಟ್ಟು 12 ತಾಲೂಕುಗಳಲ್ಲಿ ಒಟ್ಟು 121 ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗವು ಈ ಬಗ್ಗೆ ರಾಜ್ಯಪತ್ರ ಪ್ರಕಟಿಸಿದೆ. ಉತ್ತರ ಕನ್ನಡ ತಾಲೂಕು ಪಂಚಾಯತ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ 16-01-2023ರೊಳಗೆ ಆಕ್ಷೇಪಣೆ ಸಲ್ಲಿಸಲು ತಿಳಿಸಲಾಗಿದೆ.  (ಉತ್ತರ ಕನ್ನಡ ಜಿಲ್ಲೆಯ ಕ್ಷೇತ್ರ ವಿಂಗಡಣೆಗಳ ವಿವರಗಳುಳ್ಳ ಪಿಡಿಎಫ್‌ ನೋಡಲು ಇಲ್ಲಿUttara kannada TP-delimitation   ಕ್ಲಿಕ್‌ ಮಾಡಿ)
ಜೊಯಿಡಾ ತಾಲೂಕನ್ನು ಅಖೇತಿ, ಕಲಂಬುಲಿ, ರಾಮನಗರ, ಅಸು, ಜಗಲಬೇಟ, ಪ್ರಧಾನಿ, ಕಾತೇಲಿ, ಜೋಯಿಡಾ ಹಾಗೂ ನಂದಿಗದ್ದೆ ಸೇರಿ ಒಟ್ಟು 9 ತಾಪಂ ಕ್ಷೇತ್ರಗಳಾಗಿ ವಿಂಗಡಣೆ ಮಾಡಲಾಗಿದೆ. ದಾಂಡೇಲಿ ತಾಲೂಕನ್ನು ವಿಟ್ನಾಳ, ಕೇರವಾಡ, ಅಂಬೇವಾಡಿ, ಬಡಾಕಾನಶಿರಡಾ, ಬೊಮ್ಮನಳ್ಳಿ, ಜಮಗಾ ಹಾಗೂ ಅಮಗಾ ಸೇರಿದಂತೆ ಒಟ್ಟು ತಾಪಂ 7 ಕ್ಷೇತ್ರಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಹಳಿಯಾಳ ತಾಲೂಕನ್ನು ಮಂಗಳವಾಡ, ಮದನಳ್ಳಿ, ತೇರಗಾಂವ, ಬುಜೂರಕಂಚನಳ್ಳಿ, ಗುಂಡೊಳ್ಳಿ, ತಟ್ಟಿಗೇರಿ, ನಾಗಶೆಟ್ಟಿಕೊಪ್ಪ, ಮುರ್ಕವಾಡ, ಹಾಗೂ ಕಾವಲವಾಡ ಸೇರಿ ಒಟ್ಟು 9 ತಾಪಂ ಕ್ಷೇತ್ರಗಳನ್ನು ರಚನೆ ಮಾಡಲಾಗಿದೆ.
ಕಾರವಾರ ತಾಲೂಕನ್ನು ಮಾಜಾಳಿ, ಮುಡಗೇರಿ, ಘಾಡಸಾಯಿ, ಗೋಟೆಗಾಳಿ(ಬಾಳ್ನಿ), ಮಲ್ಲಾಪುರ, ದೇವಳಮಕ್ಕಿ, ಚಿತ್ತಾಕುಲಾ, ಕಡವಾಡ, ಹಾಗೂ ಚೆಂಡಿಯಾ ಸೇರಿ 9 ತಾಪಂ ಕ್ಷೇತ್ರಗಳನ್ನಾಗಿ ವಿಂಗಡಣೆ ಮಾಡಲಾಗಿದೆ, ಯಲ್ಲಾಪುರ ತಾಲೂಕನ್ನು ಕಣ್ಣಿಗೇರಿ, ಕಿರವತ್ತಿ, ಮದನೂರ, ನಂದೊಳ್ಳಿ, ಮಾವಿನಮನೆ, ಕಂಪ್ಲಿ, ಕುಂದರಗಿ, ಹಾಗೂ ಶಿಗೇಮನೆ ಸೇರಿ ಒಟ್ಟು 9 ತಾಪಂ ಕ್ಷೇತ್ರಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಮುಂಡಗೋಡ ತಾಲೂಕನ್ನು ಹುನುಗುಂದ, ಬಾಚಣಕಿ, ಇಂದೂರ, ಗುಂಜಾವತಿ, ಚವಡಳ್ಳಿ, ಚಿಗಳ್ಳಿ, ಪಾಳಾ, ಕೋಡಂಬಿ ಹಾಗೂ ಮಳಗಿ ಸೇರಿ ಒಟ್ಟು 9 ಕ್ಷೇತ್ರಗಳನ್ನಾಗಿ ವಿಂಗಡಣೆ ಮಾಡಲಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಭೂ ಮಂಜೂರಾತಿ ಅಕ್ರಮ: ಜೆಡಿಎಸ್‌ ಶಾಸಕ ಲಿಂಗೇಶ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರ್ಟ್‌ ಆದೇಶ

ಅಂಕೋಲಾ ತಾಲೂಕನ್ನು ಅಗಸೂರು, ಅವರ್ಸಾ, ಬೆಳಂಬಾರ, ಬೇಲೆಕೇರಿ, ಬೆಳಸೆ, ಭಾವಿಕೇರಿ, ಹಿಲ್ಲೂರು, ಸಗಡಗೇರಿ ಹಾಗೂ ಶೆಟಗೇರಿ ಸೇರಿದಂತೆ ಒಟ್ಟು ತಾಪಂ 9 ಕ್ಷೇತ್ರಳು ಹಾಗೂ ಶಿರಸಿ ತಾಲೂಕನ್ನು ಹುಲೆಕಲ್, ಭೈರುಂಬೆ, ಬಿಸಲಕೊಪ್ಪ, ಬದನಗೋಡ, ಇಸಳೂರು, ಇಟಗುಳಿ, ಶಿವಳ್ಳಿ, ದೇವನಳ್ಳಿ, ಜಾನ್ಮನೆ, ಯಡಳ್ಳಿ, ಅಂಡಗಿ, ಸುಗಾವಿ ಹಾಗೂ ಬನವಾಸಿ ಸೇರಿದಂತೆ ಒಟ್ಟು 13 ತಾಪಂ ಕ್ಷೇತ್ರಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಕುಮಟಾ ತಾಲೂಕನ್ನು ಹನೇಹಳ್ಳಿ, ಗೋಕರ್ಣ, ಹಿರೇಗುತ್ತಿ, ಮಿರ್ಜಾನ, ಕೋಡ್ಕಣಿ, ಅಳಕೋಡ, ಹೆಗಡೆ, ಕಾಗಾಲ, ಬಾಡ, ದೇವಗಿರಿ, ವಾಲಗಳ್ಳಿ, ಮುರೂರು, ಸಂತೆಗುಳಿ ಸೇರಿದಂತೆ ಒಟ್ಟು 13 ಕ್ಷೇತ್ರಗಳನ್ನಾಗಿ ವಿಂಗಡಣೆ ಮಾಡಲಾಗಿದೆ.
ಸಿದ್ದಾಪುರ ತಾಲೂಕನ್ನು ಹೆಗ್ಗರಣಿ, ಹಸರಗೋಡ, ಹಾರ್ಸಿಕಟ್ಟಾ, ಕಾನಗೋಡ, ಕೋಲಸಿರ್ಸಿ, ಇಟಗಿ, ಕ್ಯಾದಗಿ, ಹಲಗೇರಿ ಹಾಗೂ ಮನಮನೆ ಸೇರಿ ಒಟ್ಟು 9 ತಾಪಂ ಕ್ಷೇತ್ರಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಹೊನ್ನಾವರ ತಾಲೂಕನ್ನು ಕಡತೋಕಾ, ಕಡ್ಲೆ, ಮುಗ್ವಾ, ಹಡಿನಬಾಳ, ಹಳದೀಪುರ, ಕರ್ಕಿ, ಮಾವಿನಕುರ್ವಾ, ಹೆರಂಗಡಿ, ಕಾಸರಕೋಡ, ಬಳಕೂರ, ನಗರಬಸ್ತಿಕೇರಿ, ಕೆಳಗಿನೂರು ಹಾಗೂ ಕೊಡಾಣಿ ಸೇರಿದಂತೆ ಒಟ್ಟು 13 ಕ್ಷೇತ್ರಗಳನ್ನಾಗಿ ಮರುವಿಂಗಡಣೆ ಮಾಡಲಾಗಿದೆ. ಭಟ್ಕಳ ತಾಲೂಕನ್ನು ಬೈಲೂರು, ಮಾವಳ್ಳಿ-1, ಮಾವಳ್ಳಿ-2, ಕಾಯ್ಕಿಣಿ, ಬೇಂಗ್ರೆ, ಶಿರಾಲಿ, ಹೆಬಳೆ, ಬಿಳಲಖಂಡ, ಮಾರುಕೇರಿ, ಮುಂಡಳ್ಳಿ, ಪುರವರ್ಗ ಹಾಗೂ ಬೆಳಕೆ ಸೇರಿ 12 ಕ್ಷೇತ್ರವನ್ನಾಗಿ ವಿಂಗಡಿಸಲಾಗಿದೆ.

ಇಂದಿನ ಪ್ರಮುಖ ಸುದ್ದಿ :-   ವರುಣಾದಿಂದ ವಿಜಯೇಂದ್ರ ಸ್ಪರ್ಧೆ : ಊಹಾಪೋಹಕ್ಕೆ ತೆರೆ ಎಳೆದ ಯಡಿಯೂರಪ್ಪ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement