ಬೆಕ್ಕುಗಳಿಗೂ ಸಂತಾನಹರಣ ಚಿಕಿತ್ಸೆ ಮಾಡಿ : ಬಿಬಿಎಂಪಿಗೆ ಹೀಗೊಂದು ಮನವಿ..!

ಬೆಂಗಳೂರು : ಇಷ್ಟು ದಿನ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಬಿಬಿಎಂಪಿಗೆ ದೂರು ದಾಖಲಾಗುತ್ತಿತ್ತು. ಆದರೆ ಈಗ ಬೆಕ್ಕುಗಳ ಕಾಟಗಳ ವಿರುದ್ಧ ಸ್ಥಳೀಯ ನಿವಾಸಿಗಳು ದೂರು ನೀಡಿದ್ದಾರೆ…!
ಬೆಕ್ಕಿನ ಹಾವಳಿಯಿಂದ ಕಂಗಾಲಾಗಿರುವ ಸ್ಥಳೀಯರು ನಾಯಿಗಳಿಗೆ ಮಾಡಿದಂತೆ ಬೆಕ್ಕುಗಳಿಗೂ ಸಂತನಾಹರಣ ಚಿಕಿತ್ಸೆ ಮಾಡುವಂತೆ ಮನವಿ ಬಿಬಿಎಂಪಿಗೆ ಮಾಡಿದ್ದಾರೆ.
ಬೆಂಗಳೂರಿನ ವಾರ್ಡ್ ನಂಬರ್ 5ರ ನ್ಯಾಯಾಂಗ ಬಡಾವಣೆಯಲ್ಲಿ ಇತ್ತೀಚಿನ ಕೆಲ ದಿನಗಳಿಂದ ಬೆಕ್ಕುಗಳ ಹಾವಳಿ ಜಾಸ್ತಿಯಾಗಿದಯಂತೆ. ಬೆಕ್ಕುಗಳು ಪ್ರತಿ ಆರು ತಿಂಗಳಿಗೊಮ್ಮೆ ಮರಿಗಳನ್ನು ಹಾಕಲಿದ್ದು, ಚಿಕ್ಕ ಮರಿಗಳಿಂದ ದೊಡ್ಡ ದೊಡ್ಡ ಬೆಕ್ಕುಗಳವರೆಗೂ ಪ್ರತಿನಿತ್ಯ ಈ ಬಡಾವಣೆ ಜನರಿಗೆ ಕಿರಿಕಿರಿ ಉಂಟುಮಾಡುತ್ತಿವೆ ಎಂದು ಬಿಬಿಎಂಪಿಗೆ ದೂರು ನೀಡಿದ್ದಾರೆ.
ಮನೆಗಳಿಗೆ ಬೆಕ್ಕುಗಳು ಬಂದು ಸೇರಿಕೊಳ್ಳುತ್ತಿದ್ದು, 6 ತಿಂಗಳಿಗೊಮ್ಮೆ ಮರಿಗಳನ್ನ ಹಾಕುತ್ತಿವೆ. ಅವುಗಳ ಕಾಟ ಹೇಳತೀರದಾಗಿದೆ ಎಂದು ಈ ಭಾಗದ ಜನರು ದೂರಿದ್ದಾರೆ. ದಯಾಮಾಡಿ ಈ ಭಾಗದಲ್ಲಿರುವ ಬೆಕ್ಕುಗಳಿಗೆ ವಯಸ್ಸಿನ ಆಧಾರದ ಮೇಲೆ ಸಂತಾನಹರಣ ಚಿಕಿತ್ಸೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement