ತಾಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನ

ಮಂಡ್ಯ : ತಾಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ದಾಳಿ ನಡೆಸಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಲು ಯತ್ನಿಸಿದ ಭೀಕರ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಚೆನ್ನರಾಜು ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದಾತ ನಂದನ ಎಂದು ಹೇಳಲಾಗಿದೆ. ಹಲ್ಲೆಯಿಂದಾಗಿ ಚೆನ್ನರಾಜು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಡ್ಯ ಹಲ್ಲೆಗೊಳಗಾದ ಚೆನ್ನಾರಾಜು ಹಾಗೂ ಹಲ್ಲೆ ಮಾಡಿದ ನಂದನ ಇಬ್ಬರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗ ಗ್ರಾಮದ ನಿವಾಸಿಗಳು. ಜಮೀನು ವ್ಯಾಜ್ಯ ಹಿನ್ನೆಲೆಯಲ್ಲಿ ಅವರು ಮದ್ದೂರು ತಾಲೂಕು ಕಚೇರಿ ಬಂದಿದ್ದರು. ಜಮೀನು ವ್ಯಾಜ್ಯ ಪ್ರಕರಣದಲ್ಲಿ ಚೆನ್ನರಾಜು ಪರ ತೀರ್ಪು ಬರುತ್ತಿದ್ದಂತೆ ಕೋಪಗೊಂಡ ನಂದನ ಚೆನ್ನರಾಜುವಿಗೆ ಖಾರದ ಪುಡಿ ಎರಚಿ ನಂತರ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲಿದ್ದವರು ತಪ್ಪಿಸಲು ಪ್ರಯತ್ನಿಸಿದರೂ ನಂದನ ಬಿಡಲಿಲ್ಲ ಎಂದು ಹೇಳಲಾಗಿದೆ. ಕೊನೆಗೆ ಆತನ ಮೇಲೆ ಕಲ್ಲು ತೂರಿ ಚೆನ್ನರಾಜುವನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement