ಕೆಕೆಆರ್​ಟಿಸಿ ನೇಮಕಾತಿ ದೈಹಿಕ ಪರೀಕ್ಷೆಯಲ್ಲಿ ಮತ್ತೊಬ್ಬ ಅಭ್ಯರ್ಥಿಯ ಕಳ್ಳಾಟ ಪತ್ತೆ: ತೂಕ ಹೆಚ್ಚಿಸಿಕೊಳ್ಳಲು ಎರಡು ಕಾಲಿಗೂ ಹಿಟ್ಟು ಅಂಟಿಸಿಕೊಂಡು ಬಂದ ಭೂಪ…!

posted in: ರಾಜ್ಯ | 0

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್​ಟಿಸಿ) ಡ್ರೈವರ್​ ಕಂ ಕಂಡಕ್ಟರ್​ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾದ್ದರಿಂದ ಅದಕ್ಕಾಗಿ ಅಭ್ಯರ್ಥಿಗಳು ವಾಮಮಾರ್ಗ ಹಿಡಿದಿರುವುದು ಸಂಗತಿ ಬಯಲಾಗುತ್ತಲೇ ಇದೆ.
ನಿನ್ನೆ ಶುಕ್ರವಾರ ಇಂಥ ಪ್ರಕರಣಗಳು ಬಹಿರಂಗವಾಗಿತ್ತು. ತಮ್ಮ ತೂಕ ಹೆಚ್ಚಿಸಿಕೊಳ್ಳಲು ಅಭ್ಯರ್ಥಿಗಳು ಪ್ಯಾಂಟ್‌ ಒಳಗೆ ಕಬ್ಬಿಣದ ಪೀಸ್​ಗಳು, ಒಳ ಉಡುಪಲ್ಲಿ ತೂಕದ ಕಲ್ಲು ಇಟ್ಟುಕೊಂಡು ಬಂದಿದ್ದ ಕಿಲಾಡಿಗಳು ಸಿಕ್ಕಿಬಿದ್ದಿದ್ದರು. ಈಗ ಇದೇ ರೀತಿಯ ಮತ್ತೊಂದು ಕಳ್ಳಾಟ ಮಾಡಿ ಸಿಕ್ಕಿಬಿದ್ದ ವರದಿಯಾಗಿದೆ. ಹೇಗಾದರೂ ಕೆಲಸ ಪಡೆಯಲೇ ಬೇಕು ಎಂದು ವಾಮಮಾರ್ಗದಲ್ಲಿ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಒಬ್ಬಾತ ಕಾಲಿಗೆ ಗೋಧಿ ಹಿಟ್ಟನ್ನು ಮೆತ್ತಿಕೊಂಡು ಬಂದು ಸಿಕ್ಕಿಬಿದ್ದಿದ್ದಾನೆ…!
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಯಲ್ಲಿ ಚಾಲಕ ಕಂ ಕಂಡಕ್ಟರ್ ಹುದ್ದೆಗೆ ಆಯ್ಕೆಯಾಗಬೇಕಾದರೆ 55 ಕೆ.ಜಿ. ತೂಕ ಕಡ್ಡಾಯವಾಗಿದೆ. ಹೇಗಾದರೂ ಮಾಡಿ ತೂಕ ಹೆಚ್ಚಿಸಿಕೊಳ್ಳಲುಈ ಅಭ್ಯರ್ಥಿ ಕಬ್ಬಿಣದ ಬದಲು ಗೋಧಿ ಹಿಟ್ಟಿನ ಮೊರೆ ಹೋಗಿದ್ದಾನೆ. ತನ್ನ ಒಂದೊಂದು ಕಾಲಿಗೆ ಒಂದೊಂದು ಕೆಜಿಯ ಗೋಧಿ ಹಿಟ್ಟನ್ನು ಮೆತ್ತಿಕೊಂಡು ಅದರ ಮೇಲೆ ಪ್ಯಾಂಟ್‌ ಧರಿಸಿಕೊಂಡು ಬಂದಿದ್ದಾನೆ…! ಗೋಧಿ ಹಿಟ್ಟನ್ನು ನೀರಲ್ಲಿ ಕಲಸಿ ಅದಕ್ಕೆ ಅಂಟು ಬರುವಂತೆ ಮಾಡಿ ಅದನ್ನು ಕಾಲಿಗೆ ಅಂಟಿಸಿಕೊಂಡು ಅದರ ಮೇಲೆ ಬಟ್ಟೆ ಕಟ್ಟಿಕೊಂಡು ಬಂದು ದೈಹಿಕ ಪರೀಕ್ಷೆಗೆ ಹಾಜರಾಗಿದ್ದಾನೆ. ಕೆಕೆಆರ್​ಟಿಸಿ ಜಾಗೃತ ದಳದ ಅಧಿಕಾರಿಗಳ ತಪಾಸಣೆ ವೇಳೆ ಈತ ಸಿಕ್ಕಿಬಿದ್ದಿದ್ದಾನೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಲಂಚ ಪ್ರಕರಣ: ಶಾಸಕ ಮಾಡಾಳು ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ ; ಮತ್ತೆ ಬಂಧನದ ಭೀತಿ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement