ಸ್ವಾತಂತ್ರ್ಯ ಹೋರಾಟಗಾರ ಎಂ. ಆರ್. ಭಟ್ಟ ನಿಧನ

ಕುಮಟಾ : ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತೆಪ್ಪದ ಮದ್ಗುಣಿಯ ಎಂ. ಆರ್. ಭಟ್ಟ (92) ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಅಪಾರ ಬಂಧು ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಎಂ. ಆರ್. ಭಟ್ಟ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಹಾಗೂ ಬಾಡದ ಜನತಾ ವಿದ್ಯಾಲಯದ ಪ್ರೌಢ ಶಾಲೆಯಲ್ಲಿ ಸುದೀರ್ಘ ಕಾಲದ ವರೆಗೆ ಮುಖ್ಯ ಗ್ರಂಥಪಾಲಕರಾಗಿದ್ದರು. ಕೃಷಿಕರೂ ಆಗಿದ್ದ ಅವರು ಜ್ಯೋತಿಷ್ಯ ಹೇಳುವುದರಲ್ಲಿಯೂ ಪ್ರಖ್ಯಾತರಾಗಿದ್ದರು.
ಸಂತಾಪ: ಮೃತರ ಆತ್ಮಕ್ಕೆ ಶಾಂತಿಕೋರಿ ಗುಡೆ ಅಂಗಡಿ ಹವ್ಯಕ ಸಂಘದ ಅಧ್ಯಕ್ಷ ಆರ್. ಎನ್. ಹೆಗಡೆ. ಉಪಾಧ್ಯಕ್ಷರು ಎನ್. ವಿ. ಹೆಗಡೆ ಹವ್ಯಕ ವಲಯದ ಪರವಾಗಿ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement