ಪಿಎಂಒ ಅಧಿಕಾರಿಯೆಂದು ಪೋಸ್ ನೀಡಿದ ಕಿರಣ ಪಟೇಲಗೆ 15 ದಿನ ನ್ಯಾಯಾಂಗ ಬಂಧನ: ಈತ ಕಾಶ್ಮೀರದಲ್ಲಿ ಭದ್ರತಾ ಕವರ್‌ ಸಹ ಪಡೆದಿದ್ದ…!

ನವದೆಹಲಿ: ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಅಧಿಕಾರಿಯಂತೆ ನಟಿಸುತ್ತಿದ್ದ ಗುಜರಾತಿನ ಆರೋಪಿ ಕಿರಣ ಪಟೇಲ ಅವರನ್ನು ಬಂಧಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಬಂಧಿಸಿದ ಒಂದು ದಿನದ ನಂತರ ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಅಧಿಕಾರಿಯಂತೆ ನಟಿಸುತ್ತಿದ್ದ ಗುಜರಾತಿನ ಆರೋಪಿ ಕಿರಣ ಪಟೇಲ ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಗುರುವಾರ, ಮ್ಯಾಜಿಸ್ಟ್ರೇಟ್ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನಂತರ ಆತನ ಬಂಧನದ ಸುದ್ದಿ ಹೊರಬಿದ್ದಿದೆ. 10 ದಿನಗಳ ಹಿಂದೆ ಪಟೇಲ್ ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ಆತನನ್ನು ಬಂಧಿಸಿದ ದಿನವೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆಯೇ ಅಥವಾ ಅದನ್ನು ಸಲ್ಲಿಸಲು ಸ್ವಲ್ಪ ವಿಳಂಬವಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಿರಣ ಪಟೇಲ್ ಟ್ವಿಟರ್‌ನಲ್ಲಿ ಪರಿಶೀಲಿಸಿದ ಬಳಕೆದಾರರಾಗಿದ್ದಾರೆ ಮತ್ತು ಸಾವಿರಾರು ಅನುಯಾಯಿಗಳನ್ನು ಹೊಂದಿದ್ದಾರೆ. ಅವರನ್ನು ಬಿಜೆಪಿ ಗುಜರಾತ್ ಪ್ರಧಾನ ಕಾರ್ಯದರ್ಶಿ ಪ್ರದೀಪ ಸಿಂಗ್‌ ವಘೇಲಾ ಕೂಡ ಫಾಲೋ ಮಾಡುತ್ತಿದ್ದಾರೆ.
ಕಿರಣ ಪಟೇಲನ ಕಾಶ್ಮೀರದ ‘ಅಧಿಕೃತ ಭೇಟಿ’ಯ ಹಲವಾರು ವೀಡಿಯೊಗಳು ಮತ್ತು ಚಿತ್ರಗಳಲ್ಲಿ ಅರೆಸೈನಿಕ ಸಿಬ್ಬಂದಿಯಿಂದ ಸುತ್ತುವರಿದಿರುವುದನ್ನು ಕಾಣಬಹುದು. ಮಾರ್ಚ್ 2 ರಂದು ಆತ ಕೊನೆಯ ಬಾರಿಗೆ ಶ್ರೀನಗರಕ್ಕೆ ಭೇಟಿ ನೀಡಿದ್ದ.
ಕೇಂದ್ರದಲ್ಲಿ ‘ಹೆಚ್ಚುವರಿ ಕಾರ್ಯದರ್ಶಿ’ ಎಂದು ಬಿಂಬಿಸಿಕೊಳ್ಳುತ್ತಿದ್ದ ವ್ಯಕ್ತಿ, ದಕ್ಷಿಣ ಕಾಶ್ಮೀರದಲ್ಲಿ ಸೇಬು ತೋಟಗಳಿಗೆ ಖರೀದಿದಾರರನ್ನು ಗುರುತಿಸಲು ಸರ್ಕಾರದಿಂದ ಆದೇಶ ನೀಡಲಾಗಿದೆ ಎಂದು ಹೇಳಿಕೊಂಡಿದ್ದ.

ಕೇಂದ್ರದಲ್ಲಿ ‘ಹೆಚ್ಚುವರಿ ಕಾರ್ಯದರ್ಶಿ’ ಎಂದು ಪೋಸ್ ನೀಡಿದ್ದಕ್ಕಾಗಿ ಮತ್ತು ಇತರ ಆತಿಥ್ಯದ ಜೊತೆಗೆ ಭದ್ರತಾ ಕವರ್‌ ಪಡೆದಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಪಂಚತಾರಾ ಹೋಟೆಲ್‌ನಿಂದ ಈ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಶ್ರೀನಗರದ ನಿಶಾತ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಕಿರಣ ಪಟೇಲ್ “ಈ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮತ್ತು ಕಾಶ್ಮೀರ ಕಣಿವೆಯ ಇತರ ಭಾಗಗಳಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಆತ ಸರ್ಕಾರಿ ಆತಿಥ್ಯವನ್ನು ಪಡೆಯುತ್ತಿದ್ದ, ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ) ಮತ್ತು ಐಷಾರಾಮಿ ಹೋಟೆಲ್‌ನಲ್ಲಿ ಕೊಠಡಿಯನ್ನು ನಿಯೋಜಿಸಲಾಗಿತ್ತು.
ಕಿರಣ ಪಟೇಲ್ ಕಳೆದ ವರ್ಷ ಅಕ್ಟೋಬರ್‌ನಿಂದ ಕಾಶ್ಮೀರ ಕಣಿವೆಗೆ ಪದೇಪದೇ ಭೇಟಿ ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಆತ ಬಂಧನಕ್ಕೊಳಗಾಗುವ ಮೊದಲು ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಹತ್ತಿರವಿರುವ ಉರಿ ಕಮಾನ್ ಪೋಸ್ಟ್ ಹೋಗಲು ದಾರಿ ಕಂಡುಕೊಂಡಿದ್ದ.
ವರ್ಜೀನಿಯಾದ ಕಾಮನ್‌ವೆಲ್ತ್ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ, ಐಐಎಂ ತಿರುಚ್ಚಿಯಿಂದ ಎಂಬಿಎ, ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಟೆಕ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿಇ ಎಂದು ಆತನ ಟ್ವಿಟರ್ ಬಯೋ ವಿವರಿಸುತ್ತದೆ.
ಮೂಲಗಳ ಪ್ರಕಾರ, ಪಟೇಲ್ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದಾನೆ ಮತ್ತು ಗುಜರಾತ್‌ನಿಂದ ಹೆಚ್ಚಿನ ಪ್ರವಾಸಿಗರನ್ನು ಕರೆತರಲು ಮತ್ತು ದೂಧಪತ್ರಿಯನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡುವ ಬಗ್ಗೆ ಚರ್ಚಿಸಿದ್ದಾನೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಎರಡು ವಾರಗಳಲ್ಲಿ ಎರಡನೇ ಭೇಟಿಗಾಗಿ ಕಣಿವೆಗೆ ಆಗಮಿಸಿದ ನಂತರ ಆತನ ಮೇಲೆ ಅನುಮಾನ ಬಂದಿದೆ. ಅದರ ನಂತರ ಐಎಎಸ್ ಅಧಿಕಾರಿ, ಜಿಲ್ಲಾಧಿಕಾರಿಯೊಬ್ಬರು ಕಳೆದ ತಿಂಗಳು ಆತನ ಭೇಟಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಗುಪ್ತಚರ ಸಂಸ್ಥೆಗಳಿಂದ ಪೊಲೀಸರಿಗೆ ಎಚ್ಚರಿಕೆ ನೀಡಲಾಯಿತು ಮತ್ತು ಆತನ ಹಿನ್ನೆಲೆಯನ್ನು ಪರಿಶೀಲಿಸಿದ ನಂತರ, ಶ್ರೀನಗರದ ಹೋಟೆಲ್‌ನಿಂದ ಆತನನ್ನು ಬಂಧಿಸುವಂತೆ ಪೊಲೀಸರಿಗೆ ತಿಳಿಸಲಾಯಿತು.
ಮಾರ್ಚ್ 2 ರಂದು ಪಟೇಲ್ ವಿರುದ್ಧ ವಂಚನೆ ಮತ್ತು ಫೋರ್ಜರಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಮರುದಿನ ಆತನನ್ನು ಬಂಧಿಸಲಾಯಿತು. ಯಾವುದೇ ವಿಐಪಿ ಚಲನವಲನದ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಮಾರ್ಚ್ 2 ರಂದು ಜೆ & ಕೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಕಳ್ಳನನ್ನು ಪತ್ತೆಹಚ್ಚಲಾಯಿತು.
ಆತನ ಬಂಧನ ಮತ್ತು ಪ್ರಾಥಮಿಕ ವಿಚಾರಣೆಯ ನಂತರ ಅಧಿಕಾರಿಗಳು ಆತನ ಬಳಿ ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಸಕಾಲದಲ್ಲಿ ವಂಚಕನನ್ನು ಪತ್ತೆಹಚ್ಚಲು ವಿಫಲರಾದ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಗುಜರಾತ್ ಪೊಲೀಸರ ತಂಡವೂ ಈತನ ಬಗೆಗಿನ ತನಿಖೆಗೆ ಸೇರುತ್ತಿದೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement