ಕಾಂಗ್ರೆಸ್​​​ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ: ಸಿದ್ದರಾಮಯ್ಯಗೆ ಕೋಲಾರದಲ್ಲಿ ಟಿಕೆಟ್‌ ಇಲ್ಲ, ಕುಮಟಾದಲ್ಲಿ ಆಳ್ವ ಕುಟುಂಬಕ್ಕೆ ಮಣೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ತಯಾರಿಯಲ್ಲಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ.
ಚುನಾವಣಾ ತಯಾರಿಯಲ್ಲಿರುವ ಕಾಂಗ್ರೆಸ್ ಈಗಾಗಲೇ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈಗ 43 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಅಥಣಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಾರೆ ಎನ್ನಲಾಗಿದ್ದ ಕೋಲಾರದಿಂದ ಡಿ.ಕೆ. ಶಿವಕುಮಾರ ಅವರ ಆಪ್ತ ಕೊತ್ತೂರು ಮಂಜುನಾಥ ಅವರಿಗೆ ಟಿಕೆಟ್ ಘೊಷಣೆಯಾಗಿದೆ.
ಜೆಡಿಎಸ್ ತೊರೆದು ‘ಕೈ’ ಹಿಡಿದಿದ್ದ ಶಿವಲಿಂಗೇಗೌಡ ಅವರಿಗೆ ಅರಸೀಕೆರೆ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಬೆಳಗಾವಿ ಉತ್ತರ ಕ್ಷೇತ್ರದಿಂದ ಆಸೀಫ್‌ ಸೇಠ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮೂರನೇ ಪಟ್ಟಿ
ಅಥಣಿ-ಲಕ್ಷ್ಮಣ್‌ ಸವದಿ
ಅರಭಾವಿ-ಅರವಿಂದ ದಳವಾಯಿ
ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್​
ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್​
ಬೆಳಗಾವಿ ದಕ್ಷಿಣ ಕ್ಷೇತ್ರ- ಪ್ರಭಾವತಿ ಮಾಸ್ತಿ ಮರಡಿ
ನವಲಗುಂದ-ಎನ್‌.ಎಚ್‌. ಕೋನರೆಡ್ಡಿ
ಕುಂದಗೋಳ- ಕುಸುಮಾ ಶಿವಳ್ಳಿ
ಸಿಂದಗಿ: ಅಶೋಕ್‌ ಎಂ ಮನಗೊಳಿ
ಶಿರಹಟ್ಟಿ: ಸುಜಾತ ಎನ್‌ ದೊಡ್ಮನಿ
ತೇರದಾಳ – ಸಿದ್ದು ಕೊಣ್ಣೂರರಚ
ಮೂಡಿಗೆರೆ: ನಯನ ಮೊಟ್ಟಮ್ಮ
ಅರಸೀಕೆರೆ: ಶಿವಲಿಂಗೇಗೌಡ
ಚಿಕ್ಕಪೇಟೆ: ಆರ್‌ ವಿ ದೇವರಾಜ

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಕಲಬುರಗಿ ಗ್ರಾಮೀಣ- ರೇವುನಾಯ್ಕ್ ಬೆಳಮಗಿ
ದೇವರಹಿಪ್ಪರಗಿ-ಶರಣಪ್ಪ ಟಿ.ಸುನಗಾರ
ಸಿಂದಗಿ ಕ್ಷೇತ್ರ-ಅಶೋಕ ಎಂ.ಮನಗೂಳಿ
ಔರಾದ್ ಕ್ಷೇತ್ರ-ಡಾ.ಶಿಂಧೆ ಭೀಮಸೇನ್​ ರಾವ್​
ಮಾನ್ವಿ ಕ್ಷೇತ್ರ-ಜಿ.ಹಂಪಯ್ಯ ನಾಯಕ
ಶಿರಹಟ್ಟಿ ಕ್ಷೇತ್ರ-ಸುಜಾತಾ ಎನ್.ದೊಡ್ಮನಿ
ಕುಮಟಾ ಕ್ಷೇತ್ರ-ನಿವೇದಿತ್ ಆಳ್ವಾ
ಬಳ್ಳಾರಿ ನಗರ ಕ್ಷೇತ್ರ-ಭರತ್​ ರೆಡ್ಡಿ
ಸಿರುಗುಪ್ಪ ಕ್ಷೇತ್ರ-ಬಿ.ಎಂ.ನಾಗರಾಜ್​
ಸಿಂಧನೂರು: ಹಂಪನಗೌಡ ಬಾದರ್ಲಿ
ಮಂಗಳೂರು ನಗರ- ಜೆ ಆರ್ ಲೋಬೋ
ಕೋಲಾರ – ಕೊತ್ತೂರು ಮಂಜುನಾಥ
ದಾಸರಹಳ್ಳಿ- ಧನಂಜಯ

ಚಿಕ್ಕಪೇಟೆ – ಆರ್ ವಿ ದೇವರಾಜ್
ಕೋಲಾರ: ಕೊತ್ತೂರು ಮಂಜುನಾಥ್‌
ಕೃಷ್ಣರಾಜ – ಎಂ.ಕೆ‌ ಸೋಮಶೇಕರ್
ಶಿಖಾರಿಪುರ- ಗೋಣಿ ಮಾಲತೇಶ
ತರಿಕೆರೆ- ಶ್ರೀನಿವಾಸ್
ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್
ಅರಸಿಕೆರೆ- ಶಿವಲಿಂಗೇಗೌಡ
ಬೊಮ್ಮನಹಳ್ಳಿ – ಉಮಾಪತಿ ಗೌಡ
ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ
ಮೂಡಿಗೆರೆ- ನಯನ ಮೋಟಮ್ಮ
ಮದ್ದೂರು- ಉದಯ್ ಗೌಡ‘
ಶಿವಮೊಗ್ಗ – ಯೋಗೇಶ

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement