ಔರಾದ : ಹಳ್ಳದಲ್ಲಿ ಕೊಚ್ಚಿ ಹೋದ ತಾಯಿ, ಇಬ್ಬರು ಮಕ್ಕಳ ಶವ ಪತ್ತೆ

ಬೀದರ: ಭಾರಿ ಮಳೆಯಿಂದ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಜಿಲ್ಲೆಯ  ಔರಾದ ತಾಲೂಕಿನ ಹೆಡಗಾಪುರ ಗ್ರಾಮದ ಮೂವರ ಮೃತದೇಹ ಪತ್ತೆಯಾಗಿದೆ. ಭಾನುವಾರ ಸಂಜೆ ಈ ದುರ್ಘಟನೆ ನಡೆದಿತ್ತು.
ಹೊಲದಿಂದ ಮನೆಗೆ ಹೋಗುವಾಗ ಭಾರಿ ಮಳೆಗೆ ಹಳ್ಳದ ಮೇಲೆ ನೀರು ಹರಿಯುತ್ತಿತ್ತು,ನೀರು ಕಡಿಮೆ ಇದ್ದ ಕಾರಣ ಸೇತುವೆ ದಾಟಲು ಹೋದಾಗ ಒಮ್ಮಲೇ ಹಳಕ್ಕೆ ಪ್ರವಾಹ ಬಂದು ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ತಂದೆ ಸಂಗಪ್ಪ ಈಜಾಡಿ ಪಾರಾಗಿ ಬಂದಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಸುನಂದಾ ಸಂಗಪ್ಪ (41), ಮಗ ಸಮೀತ ಸಂಗಪ್ಪ (18), ಮಗಳು ಐಶ್ವರ್ಯ ಸಂಗಪ್ಪ (14) ಅವರ ಮೃತದೇಹಗಳು ಪತ್ತೆಯಾಗಿವೆ. ಘಟನೆಯಾದ ಸ್ಥಳದಿಂದ 1 ಕಿ.ಮೀ ದೂರದಲ್ಲಿ ಮೃತದೇಹಗಳು ಪತ್ತೆಗಳು ಪತ್ತೆಯಾಗಿದೆ.
ಪೋಲಿಸರು ಹಾಗೂ ಅಗ್ನಿಶಾಮಕ ‌ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹಳ್ಳದಲ್ಲಿ ಮುಳ್ಳಿನ‌ ಪೊದೆಯಲ್ಲಿ ಶವ ಪತ್ತೆ ಮಾಡಿದ್ದಾರೆ. ಸ್ಥಳದಲ್ಲಿ ಕುಟುಂಬದ ಸದಸ್ಯರ ಆಕ್ರಂದನ ಮನಕಲುಕವಂತಿತ್ತು. ಇಡೀ ‌ಹೆಡಗಾಪುರ ಊರಲ್ಲಿ ಸೂತಕದ ಛಾಯೆ ಆವರಿಸಿದೆ. ಔರಾದ್ ತಹಸೀಲ್ದಾರ್ ಹಾಗೂ ಕುಶನೂರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೀತಿಯೇ ಸಿದ್ದು, ಪರಮೇಶ್ವರ ವೀಡಿಯೊ ಹೊರಬರಬಹುದು : ರಮೇಶ ಜಾರಕಿಹೊಳಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement