ಕುಮಟಾ: ಜುಲೈ 23ರಂದು ಗಂಧರ್ವ ಕಲಾಕೇಂದ್ರದ ವಾರ್ಷಿಕೋತ್ಸವ

ಕುಮಟಾ: ಇಲ್ಲಿನ ಗಂಧರ್ವ ಕಲಾಕೇಂದ್ರದ ವಾರ್ಷಿಕೋತ್ಸವ ಜುಲೈ 23, ಭಾನುವಾರ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾಭವನದಲ್ಲಿ ನಡೆಯಲಿದೆ.
ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ವಿವಿಧ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮವಿದ್ದು, ವೈದ್ಯ ಡಾ.ಅನಿಲ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಅರೇಅಂಗಡಿಯ ಎಸ್‌.ಕೆ.ಪಿ.ಸಂಯುಕ್ತ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಐ.ಎಸ್‌.ಹೆಗಡೆ ಹಾಗೂ ಕುಮಟಾ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜ್‌ ಉಪನ್ಯಾಸಕರಾದ ಪ್ರೊ. ಆನಂದ ನಾಯ್ಕ ಆಗಮಿಸಲಿದ್ದಾರೆ.
ಪ್ರಮುಖ ಕಲಾವಿದರಾಗಿ ಹೊನ್ನಾವರ ತಾಲೂಕಿನ ಗುಡ್ಡೇಬಾಳದ ಚಿನ್ಮಯ ಭಟ್‌ ಅವರ ಗಾಯನ ಕಾರ್ಯಕ್ರಮವಿದೆ. ಅವರಿಗೆ ತಬಲಾದಲ್ಲಿ ಭರತ ಹೆಗಡೆ ಕವಲಕ್ಕಿ ಹಾಗೂ ಹಾರ್ಮೋನಿಯಂನಲ್ಲಿ ಅಜೇಯ ಶಿರಸಿ ಸಾಥ್‌-ಸಂಗತ್‌ ಮಾಡಲಿದ್ದಾರೆ. ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘಟಕರು ಕೋರಿದ್ದಾರೆ.

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement