ಐವರು ಪೊಲೀಸರು 2 ರೂ. ಲಂಚ ಪಡೆದ ಪ್ರಕರಣ: 37 ವರ್ಷಗಳ ನಂತರ ಬಂತು ಕೋರ್ಟ್‌ ತೀರ್ಪು…

ಪಾಟ್ನಾ : 2 ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಐವರು ಪೊಲೀಸ್‌ ಸಿಬ್ಬಂದಿಯ ಮೇಲೆ ದಾಖಲಾಗಿದ್ದ ಪ್ರಕರಣದ ತೀರ್ಪು 37 ವರ್ಷಗಳ ಬಳಿಕ ಬಂದಿದೆ. ಬಿಹಾರದ ಭಾಗಲ್ಪುರದ ವಿಜಿಲೆನ್ಸ್ ನ್ಯಾಯಾಲಯವು 37 ವರ್ಷಗಳ ಕಾಲ ನಡೆದ ಪ್ರಕರಣದ ತೀರ್ಪನ್ನು ನೀಡಿದೆ.
ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಎರಡು ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಅಧಿಕಾರಿ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 37 ವರ್ಷಗಳ ಹಿಂದಿನ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ. ತೀರ್ಪನ್ನು ನ್ಯಾಯಾಲಯ ಇತ್ತೀಚೆಗೆ ಪ್ರಕಟಿಸಿದೆ.
ಏನಿದು ಪ್ರಕರಣ…?
1986ರ ಜೂನ್ 10ರಂದು ರಾತ್ರಿ ಭಾಗಲ್ಪುರದ ಚೆಕ್ ಪೋಸ್ಟ್​​​ನಲ್ಲಿ ಕರ್ತವ್ಯದಲ್ಲಿದ್ದ ಐವರು ಪೊಲೀಸರು ಆ ಮಾರ್ಗದಲ್ಲಿ ಹಾದು ಹೋಗುವ ವಾಹನಗಳ ತಪಾಸಣೆ ಮಾಡುತ್ತಿದ್ದರು. ಲಂಚ ಪಡೆಯುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೇಗುಸರಾಯ್ ಎಸ್ಪಿ ಅರವಿಂದ್ ವರ್ಮಾ ಅವರು, ಲಂಚ ಪಡೆಯುತ್ತಿರುವ ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಯೋಜನೆ ರೂಪಿಸಿದ್ದರು.

ಚೆಕ್ ಪೋಸ್ಟ್ ಕಡೆಗೆ ಹೋಗುತ್ತಿದ್ದ ವಾಹನವನ್ನು ಎಸ್ಪಿ ತಡೆದಿದ್ದಾರೆ. ಆ ವಾಹನದ ಚಾಲಕನಿಗೆ ಎರಡು ರೂಪಾಯಿ ನೋಟುಗಳನ್ನು ನೀಡಲಾಯಿತು. ನೋಟು ಕೊಡುವ ಮುನ್ನ ಎಸ್ಪಿ ಅದಕ್ಕೆ ಸಹಿ ಮಾಡಿದ್ದರು. ನಂತರ ಆ ಮಾರ್ಗದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ವಾಹನ ಚಾಲಕರನ್ನು ತಡೆದರು. ಹಾಗೂ ಲಂಚ ಪಡೆದು ಆ ವಾಹನಗಳನ್ನು ಬಿಟ್ಟಿದ್ದಾರೆ. ನಂತರ ಸ್ವಲ್ಪ ಸಮಯದ ನಂತರ ಭಾಗಲ್ಪುರದ ಚೆಕ್ ಪೋಸ್ಟ್​ಗೆ ಎಸ್ಪಿ ಅರವಿಂದ್ ವರ್ಮಾ ಆಗಮಿಸಿದ್ದಾರೆ. ಚೆಕ್ ಪೋಸ್ಟ್ ಕಾನ್ ಸ್ಟೆಬಲ್ ಜೇಬಿನಿಂದ ಸಹಿ ಹಾಕಿದ್ದ ನೋಟನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಐವರು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ರಾಮರತನ್ ಶರ್ಮಾ, ಕೈಲಾಶ ಶರ್ಮಾ, ಗಿಯಾನಿ ಶಂಕರ, ಯುಗೇಶ್ವರ ಮಹ್ತೋ ಮತ್ತು ರಾಮಬಾಲಕ್ ರಾಯ್ ವಿರುದ್ಧ ಮುಫಾಸಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಈ ಪ್ರಕರಣವು ಹಲವು ಬಾರಿ ತನಿಖೆಗೆ ಒಳಗಾಗಿ ಕೊನೆಗೂ ಭಾಗಲ್ಪುರದ ವಿಜಿಲೆನ್ಸ್ ಕೋರ್ಟ್ ಗೆ ಬಂದಿತ್ತು, ಆದರೆ ಭಾಗಲ್ಪುರದ ಚೆಕ್ ಪೋಸ್ಟ್​​​ನಲ್ಲಿ ಐವರ ಬಳಿ ಇನ್ನು ಹಲವು ನೋಟುಗಳು ಇದ್ದವು. ಆದರೆ ಸಾಕ್ಷ್ಯಾಧಾರಗಳ ಕೊರತೆ ಕಾರಣದಿಂದ ಎಲ್ಲರೂ ನಿರಪರಾಧಿಗಳು ಎಂಬ ಇತ್ತೀಚಿನ ತೀರ್ಪು ಪ್ರಕಟಿಸಿದೆ. ಹೀಗೆ 37 ವರ್ಷಗಳ ಕಾಲ ನಡೆದ 2 ರೂಪಾಯಿ ಲಂಚದ ಪ್ರಕರಣ ಕೊನೆಗೂ ಮುಕ್ತಾಯವಾಗಿದೆ.

ಪ್ರಮುಖ ಸುದ್ದಿ :-   50 ದಿನಗಳ ನಂತರ ಜೈಲಿನಿಂದ ಹೊರಬಂದ ಅರವಿಂದ ಕೇಜ್ರಿವಾಲ್ ; ಸರ್ವಾಧಿಕಾರದ ವಿರುದ್ಧ ಹೋರಾಡಬೇಕಿದೆ ಎಂದ ದೆಹಲಿ ಸಿಎಂ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement