‘ಮಕ್ಕಳಿಲ್ಲದ ಮಹಿಳೆಯನ್ನು ಗರ್ಭ ಧರಿಸುವಂತೆ ಮಾಡಿ….10 ಲಕ್ಷ ರೂ. ಗಳಿಸಿ’: ಹೀಗೊಂದು ವಂಚನೆ ಜಾಲ ಭೇದಿಸಿದ ಪೊಲೀಸರು…!

ಪಾಟ್ನಾ :  ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭ ಧರಿಸುವಂತೆ ಮಾಡಿದರೆ 10 ಲಕ್ಷ ರೂ.ಗಳನ್ನು ನೀಡುವುದಾಗಿ ನಂಬಿಸಿ ಮೋಸ ಮಾಡುವ ಒಂದು ವಿಶಿಷ್ಟ ಹಗರಣವೊಂದನ್ನು ಬಿಹಾರ ಪೊಲೀಸರು ಭೇದಿಸಿದ್ದಾರೆ. ಶುಕ್ರವಾರ, ಪೊಲೀಸರು ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಬಂಧಿತರನ್ನು ನವಾಡ ಜಿಲ್ಲೆಯ ಪ್ರಿನ್ಸ್ ರಾಜ, ಭೋಲಾಕುಮಾರ ಮತ್ತು ರಾಹುಲ್ ಕುಮಾರ ಎಂದು ಗುರುತಿಸಲಾಗಿದೆ. ಪೊಲೀಸರು ಅದನ್ನು ಭೇದಿಸಿ ಮೂವರನ್ನು … Continued

ಏನಂತೀರಿ..? ಒಂದು ವಾರ ಕಾಲ ಹೆರಿಗೆ ರಜೆ ಪಡೆದ ಪುರುಷ ಶಿಕ್ಷಕ…!

ಪಾಟ್ನಾ: ವಿಲಕ್ಷಣ ಘಟನೆಯೊಂದರಲ್ಲಿ, ಬಿಹಾರದ ಪುರುಷ ಸರ್ಕಾರಿ ಶಿಕ್ಷಕರೊಬ್ಬರು ಹೆರಿಗೆ ರಜೆಗಾಗಿ ಸಲ್ಲಿಸಿದ್ದ ಅರ್ಜಿ ಮಂಜೂರಾಗಿದ್ದು, ಅವರು ಒಂದು ವಾರದ ಹೆರಿಗೆ ರಜೆಯನ್ನು ಆನಂದಿಸಿದ್ದಾರೆ…!. ಜಿತೇಂದ್ರಕುಮಾರ ಸಿಂಗ್ ಎಂಬ ಶಿಕ್ಷಕನನ್ನು ವೈಶಾಲಿ ಜಿಲ್ಲೆಯ ಶಾಲೆಯೊಂದರಲ್ಲಿ ನಿಯೋಜಿಸಲಾಗಿತ್ತು. ಸರ್ಕಾರಿ ಶಿಕ್ಷಕರಿಗಾಗಿ ಇರುವ ಆನ್‌ಲೈನ್ ರಜೆ ಪೋರ್ಟಲ್‌ ಬಳಕೆದಾರರು ಅನುಮೋದಿತ ಹೆರಿಗೆ ರಜೆಯ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು ಸಾಮಾಜಿಕ … Continued

ವೀಡಿಯೊ : ಶಾಲೆಗೆ ತೆರಳುತ್ತಿದ್ದ ಶಿಕ್ಷಕನ ಅಪಹರಿಸಿ ಗನ್ ತೋರಿಸಿ ಯುವತಿ ಜೊತೆ ಬಲವಂತದ ಮದುವೆ..!

ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಅಪಹರಿಸಿ ‘ಪಕಡುವಾ ವಿವಾಹ’ ಎಂಬ ಪದ್ಧತಿಯಂತೆ ಗನ್‌ ತೋರಿಸಿ ಯುವತಿಯೊಬ್ಬಳ ಜೊತೆ ಬಲವಂತವಾಗಿ ಮದುವೆ ಮಾಡಿದ ಘಟನೆ ಬಿಹಾರದ ಬೇಗುಸರಾಯ್ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಗಂಡಸರ ಗುಂಪೊಂದು ತನ್ನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿದ್ದಾರೆ ಎಂದು ಶಿಕ್ಷಕ ಅವ್ನಿಶ್ ಆರೋಪಿಸಿದ್ದಾರೆ. ಆದರೆ ವಧು ಗುಂಜನ್ ಎಂಬವಳು ನಾವಿಬ್ಬರು ನಾಲ್ಕು ವರ್ಷಗಳಿಂದ … Continued

ವೀಡಿಯೊ..| ಪರೀಕ್ಷಾ ಕೇಂದ್ರದಲ್ಲಿ ಗದ್ದಲ ; ಪರೀಕ್ಷೆ ಬರೆಯುತ್ತಿದ್ದವರಿಂದ ಪ್ರಶ್ನೆ ಪತ್ರಿಕೆಗಳನ್ನು ಕಸಿದುಕೊಂಡು ಹರಿದು ಹಾಕಿದ ಗುಂಪು..!!

ಶುಕ್ರವಾರ ಪಾಟ್ನಾದಲ್ಲಿರುವ ಬಿಹಾರ ಸಾರ್ವಜನಿಕ ಸೇವಾ ಆಯೋಗದ (ಬಿಪಿಎಸ್‌ಸಿ) ಪರೀಕ್ಷಾ ಹಾಲ್‌ಗೆ ಕೆಲವು ಆಕಾಂಕ್ಷಿಗಳು ಸೇರಿದಂತೆ ದೊಡ್ಡ ಗುಂಪು ನುಗ್ಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮತ್ತು ಹಾಜರಿದ್ದ ಇನ್ವಿಜಿಲೇಟರ್‌ಗಳ ಬಳಿಯಿದ್ದ ಪೇಪರ್‌ಗಳನ್ನು ಕಸಿದುಕೊಂಡ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಹರಿದು ಹಾಕಿದ ಘಟನೆಯ ವೀಡಿಯೊ ಹೊರಹೊಮ್ಮಿವೆ. ಬಿಹಾರ ಸಾರ್ವಜನಿಕ ಸೇವಾ ಆಯೋಗದ (BPSC) ಪ್ರಶ್ನೆ ಪತ್ರಿಕೆಗಳು ಮತ್ತು … Continued

ದುಷ್ಕರ್ಮಿಗಳ ದಾಳಿಗೆ ಹೊಟ್ಟೆಗೆ ಗುಂಡೇಟು ಬಿದ್ದರೂ ಹಲವಾರು ಕಿಲೋ ಮೀಟರ್‌ ಜೀಪ್‌ ಓಡಿಸಿ 15 ಪ್ರಯಾಣಿಕರ ಜೀವ ಕಾಪಾಡಿದ ಚಾಲಕ..!

ಬಿಹಾರದ ಭೋಜಪುರ ಜಿಲ್ಲೆಯ ಜೀಪ್ ಚಾಲಕನೊಬ್ಬ ಅಸಾಧಾರಣ ಶೌರ್ಯ ಮತ್ತು ಸಾಹಸ ಪ್ರದರ್ಶನದಲ್ಲಿ, ಹೊಟ್ಟೆಗೆ ಗುಂಡೇಟು ತಗುಲಿದ ನಂತರವೂ ಹಲವಾರು ಕಿಲೋಮೀಟರ್‌ಗಳಷ್ಟು ಜೀಪ್‌ ಓಡಿಸುವ ಮೂಲಕ 14-15 ಪ್ರಯಾಣಿಕರ ಜೀವಗಳನ್ನು ಉಳಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಗಂಭೀರ ಗಾಯದ ನಡುವೆಯೂ ಅವರ ಅಚಲ ಧೈರ್ಯಕ್ಕೆ ಎಲ್ಲರೂ ಬೆರಗಾಗಿದ್ದಾರೆ. ರಾತ್ರಿಯ ವೇಳೆ ಈ ಭಯಾನಕ ಘಟನೆ … Continued

ವೀಡಿಯೊ..| ಬ್ಯಾಂಕಿನ ಮಹಿಳಾ ಮ್ಯಾನೇಜರ್‌ ಜೊತೆ ದುರ್ವರ್ತನೆ; ಬೆದರಿಕೆ ಹಾಕಿ-ಆಕೆಯ ಮೊಬೈಲ್ ಒಡೆದು ಹಾಕಿದ ವ್ಯಕ್ತಿಯ ಬಂಧನ

ಪಾಟ್ನಾ: ಮಹಿಳಾ ಬ್ಯಾಂಕ್ ಮ್ಯಾನೇಜರ್ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಆಘಾತಕಾರಿ ಘಟನೆ ಬಿಹಾರದ ಪಾಟ್ನಾದ ಕೆನರಾ ಬ್ಯಾಂಕ್ ಶಾಖೆಯೊಂದರಲ್ಲಿ ನಡೆದಿದ್ದು ಈ ಘಟನೆಯದ್ದು ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ತಾನು ತೋರಿದ ದುರ್ವರ್ತನೆ ಕೃತ್ಯ ಸೆರೆ ಹಿಡಿಯುತ್ತಿದ್ದರು ಎನ್ನುವ ಕಾರಣಕ್ಕೆ ವ್ಯಕ್ತಿಯು ಮಹಿಳಾ … Continued

ವೀಡಿಯೊ..| ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಲು ಮುಂದಾದ ಬಿಹಾರ ಸಿಎಂ ನಿತೀಶಕುಮಾರ : ಮೋದಿ ಏನು ಮಾಡಿದ್ರು ನೋಡಿ

ದರ್ಭಾಂಗ : ಬಿಹಾರದ ದರ್ಭಾಂಗದಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಲು ಮುಂದಾಗಿರುವುದು ಕಂಡುಬಂದಿದೆ. ಬಿಹಾರ ಮುಖ್ಯಮಂತ್ರಿ ಪ್ರಧಾನಿ ಬಳಿಗೆ ಬರುತ್ತಿದ್ದಂತೆ ಅವರ ಪಾದ ಮುಟ್ಟಿ ಮುಂದಾಗುತ್ತಾರೆ. ಆದಾಗ್ಯೂ, ಪ್ರಧಾನಿ ಮೋದಿ ಅವರನ್ನು ನಡುವೆ ತಡೆಯುತ್ತಾರೆ, ನಂತರ ಅವರು ಅವರೊಂದಿಗೆ ಹಸ್ತಲಾಘವ ಮಾಡುತ್ತಾರೆ.ಈ ಕ್ಷಣದ … Continued

ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ ಫೀಸ್‌ ಕೇಳಿದ್ರೆ ಶಾಕ್‌ ಆಗ್ತೀರಾ ; ಒಂದು ಸಲಹೆಗೆ ಪಡೆವ ಶುಲ್ಕ 1…10…50 ಕೋಟಿ ರೂ. ಅಲ್ಲ, ಎಷ್ಟೆಂದರೆ…

ಪಾಟ್ನಾ: ಬಿಹಾರದ ನಾಲ್ಕು ವಿಧಾನಸಭಾ ಸ್ಥಾನಗಳ ಮುಂಬರುವ ಉಪಚುನಾವಣೆಗಳಿಗೆ ಮುಂಚಿತವಾಗಿ, ಜನ ಸೂರಜ್‌ ಪಕ್ಷದ ಸಂಸ್ಥಾಪಕರಾದ ಪ್ರಶಾಂತ ಕಿಶೋರ ಅವರು ತಾವು ಚುನಾವಣಾ ತಂತ್ರಗಾರರಾಗಿ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನಿಗೆ ಸಲಹೆ ನೀಡಲು ಕನಿಷ್ಠ 100 ಕೋಟಿ ರೂಪಾಯಿಗಳ ಶುಲ್ಕವಾಗಿ ವಿಧಿಸುವುದಾಗಿ ಹೇಳಿದ್ದಾರೆ. ಬಿಹಾರದ ಬೆಳಗಂಜನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅವರು ಇದನ್ನು … Continued

ವೀಡಿಯೊ…| ಚಿನ್ನಾಭರಣ ಅಂಗಡಿ ಮಾಲೀಕ-ದರೋಡೆಕೋರರ ನಡುವೆ ಗುಂಡಿನ ಚಕಮಕಿ ; 3 ಮಂದಿಗೆ ಗಾಯ

ನವದೆಹಲಿ : ಬಿಹಾರದ ಬೇಗುಸರಾಯ್‌ನಲ್ಲಿರುವ ಆಭರಣ ಮಳಿಗೆಯೊಂದರಲ್ಲಿ ಶಸ್ತ್ರಧಾರಿಗಳ ತಂಡವೊಂದು ಹಗಲು ದರೋಡೆ ನಡೆಸಿದ ನಾಟಕೀಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂಗಡಿಯ ಮಾಲೀಕರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಆಭರಣ ಅಂಗಡಿಯ ಉದ್ಯೋಗಿ ಮತ್ತು ಇಬ್ಬರು ದರೋಡೆಕೋರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಇಬ್ಬರು ದರೋಡೆಕೋರರನ್ನು … Continued

ಬಿಹಾರದ ಕಳ್ಳಬಟ್ಟಿ ದುರಂತ ; ಸಾವಿನ ಸಂಖ್ಯೆ 35ಕ್ಕೆ ಏರಿಕೆ

ಪಾಟ್ನಾ: ಬಿಹಾರದ ಸಿವಾನ್ ಮತ್ತು ಸರನ್ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಸೇವಿಸಿದ ಹತ್ತು ಮಂದಿ ಸಾವಿಗೀಡಾಗಿದ್ದು ಈ ಕಳ್ಳಬಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಸರನ್ ಪೊಲೀಸ್ ಉಪ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ನೀಲೇಶಕುಮಾರ ಶುಕ್ರವಾರ ಮಾತನಾಡಿ, ಸಿವಾನ್ 28 ಸಾವುಗಳಿಗೆ ಕಾರಣವಾಗಿದ್ದರೆ, ಸರನ್‌ ಜಿಲ್ಲೆಯಿಂದ ಏಳು ಸಾವುಗಳು … Continued