ಪಾಕಿಸ್ತಾನದಲ್ಲಿ 100 ವರ್ಷಗಳಿಗೂ ಹಳೆಯ ಹಿಂದೂ ದೇವಾಲಯ ಧ್ವಂಸ : ವರದಿ

ಇಸ್ಲಾಮಾಬಾದ್: ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಸುಮಾರು 100ರಿಂದ 125 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಂಘಟನೆಗಳು, ಸ್ಥಳೀಯ ನಿವಾಸಿಗಳು ಹಾಗೂ ರಾಜಕೀಯ ಪಕ್ಷಗಳು ತನಿಖೆಗೆ ಆಗ್ರಹಿಸಿವೆ. ಅಲ್ಲದೆ ದೇವಾಲಯವನ್ನು ಮೂಲ ಸ್ವರೂಪದಲ್ಲಿ ಪುನರ್‌ನಿರ್ಮಿಸಿ, ಅದರ ಭೂಮಿಯ ಮೇಲಿನ  ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ಶೆಹಬಾಜ್ ಶರೀಫ್ ನೇತೃತ್ವದ  ಸರ್ಕಾರವನ್ನು ಒತ್ತಾಯಿಸಿವೆ. … Continued

ಆಪರೇಷನ್ ಸಿಂಧೂರ : ಪಾಕ್ ಪರಮಾಣು ನೆಲೆ ಮೇಲೆ ಭಾರತ ದಾಳಿ ಮಾಡಿತ್ತೇ? ಮಾಜಿ ಸಿಡಿಎಸ್‌ ಹೇಳಿದ್ದೇನು..?

ನವದೆಹಲಿ: ಭಾರತವು ಕಳೆದ ವರ್ಷದ ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಸ್ಕಾರ್ದು ವಾಯುನೆಲೆ ಮೇಲೆ ದಾಳಿ ನಡೆಸಲು ಯೋಜಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಉಂಟಾದ ಪ್ರತಿಕೂಲ ಹವಾಮಾನದ ಕಾರಣ ಆ ಕಾರ್ಯಾಚರಣೆಯನ್ನು ಕೈಬಿಡಬೇಕಾಯಿತು ಎಂದು ಭಾರತದ ಮಾಜಿ ರಕ್ಷಣಾ ಸಿಬ್ಬಂದಿ (CDS) ಮುಖ್ಯಸ್ಥ ಜನರಲ್ ಅನಿಲ ಚೌಹಾಣ ಬಹಿರಂಗಪಡಿಸಿದ್ದಾರೆ. ನವದೆಹಲಿಯ ವಿವೇಕಾನಂದ … Continued

ವಿಡಿಯೋ | ಹಫೀಜ್ ಸಯೀದ್ ಕಾಶ್ಮೀರಕ್ಕೆ 10 ಸಾವಿರ ಉಗ್ರರನ್ನು ಕಳುಹಿಸಿದ್ದಾನೆ : ಪಾಕಿಸ್ತಾನದ ನಸೀರ್ ಮದನಿ ಬಹಿರಂಗ ಹೇಳಿಕೆ

ಬಹವಾಲನಗರ: ಈ ತಿಂಗಳ ಆರಂಭದಲ್ಲಿ ಶುಕ್ರವಾರದ ಧಾರ್ಮಿಕ ಪ್ರವಚನ ನೀಡುತ್ತಿದ್ದ ವೇಳೆ ಗಂಭೀರ ಹೃದಯ ಸಂಬಂಧಿತ ತೊಂದರೆಗೆ ಒಳಗಾಗಿದ್ದಾಗಿ ವರದಿಯಾಗಿದ್ದ ಪಾಕಿಸ್ತಾನದ ನಸೀರ್ ಮದನಿ ಮತ್ತೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾನೆ. ಆಗಸ್ಟ್ 14ರಂದು ಬಹವಾಲನಗರದಲ್ಲಿ ನಡೆದ ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದ ಮದನಿ, ಲಷ್ಕರ್-ಎ-ತೊಯ್ಬಾ (LeT) ಸಂಸ್ಥಾಪಕ ಹಫೀಜ್ ಸಯೀದ್ ಕುರಿತು ಗಂಭೀರ … Continued

ಟಿಟಿಪಿ ಸಂಪರ್ಕದ ಶಂಕೆ: ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯ ಬಂಧನ

ಬೆಂಗಳೂರು: ಪಾಕಿಸ್ತಾನದಲ್ಲಿನ ನಿಷೇಧಿತ ಉಗ್ರ ಸಂಘಟನೆಯಾದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಜತೆ ಸಂಪರ್ಕ ಹೊಂದಿದ್ದಾನೆಂದು ಶಂಕಿಸಲಾದ ಹಾಗೂ ಪಾಕಿಸ್ತಾನ ಸೇನೆಯ ವಿರುದ್ಧ ದಾಳಿ ನಡೆಸಲು ಸಂಚು ರೂಪಿಸಿದ್ದನೆಂದು ಆರೋಪಿಸಲಾದ 25 ವರ್ಷದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನೌಪುರ ಗ್ರಾಮದ ನಿವಾಸಿ ಅಸಾಫುಲ್ ಮಲ್ಲಿಕ್ ಎಂದು … Continued

ಪಾಕಿಸ್ತಾನದಿಂದ ಹಿಡಿದು ಅಮೆರಿಕದವರೆಗೆ ಜಗತ್ತು ʼಭಾರತʼವನ್ನು ಹೇಗೆ ನೋಡುತ್ತದೆ ? 36 ದೇಶಗಳ ಸಮೀಕ್ಷೆಯಲ್ಲಿ ಬಹಿರಂಗ

ನವದೆಹಲಿ: ಜಗತ್ತು ಭಾರತವನ್ನು ಹೇಗೆ ನೋಡುತ್ತದೆ? ಪ್ಯೂ ರಿಸರ್ಚ್ ಸೆಂಟರ್ ನಡೆಸಿದ 2026ರ ‘ಸ್ಪ್ರಿಂಗ್ ಗ್ಲೋಬಲ್ ಅಟಿಟ್ಯೂಡ್ಸ್ ಸರ್ವೇ’ಯ ಅಂಕಿ-ಅಂಶಗಳು ಜಗತ್ತಿನ ಹಲವಾರು ದೇಶಗಳು ಭಾರತವನ್ನು ಹೇಗೆ ನೋಡುತ್ತವೆ ಎಂಬುದನ್ನು ವೈವಿಧ್ಯಮಯವಾಗಿ ತೋರಿಸಿವೆ. ವರದಿಯ ಪ್ರಕಾರ, ಫೆಬ್ರವರಿ 9ರಿಂದ ಮೇ 13, 2026ರವರೆಗೆ 36 ದೇಶಗಳಲ್ಲಿ 42,092 ಜನರನ್ನು ಒಳಗೊಂಡ ಸಮೀಕ್ಷೆಯಲ್ಲಿ, ಸರಾಸರಿ 45% ಮಂದಿ … Continued

ಲಷ್ಕರ್‌ ಉಗ್ರರ ಜತೆ ವೇದಿಕೆ ಹಂಚಿಕೊಂಡ ಪಾಕಿಸ್ತಾನದ ಮಾಜಿ ಸಚಿವ ; ಭಾರತ ನಾಶ ಮಾಡುವುದಾಗಿ ಬೆದರಿಕೆ

ಇಸ್ಲಾಮಾಬಾದ್ : ಪಾಕಿಸ್ತಾನವು ಉಗ್ರ ಸಂಘಟನೆಗಳಿಗೆ ಸುರಕ್ಷಿತ ತಾಣವಾಗಿದೆ ಎಂಬ ಆರೋಪಗಳಿಗೆ ಮತ್ತಷ್ಟು ಬಲ ನೀಡುವಂತಹ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪಾಕಿಸ್ತಾನದ ಮಾಜಿ ಗೃಹ ಸಚಿವ ಹಾಗೂ ಅವಾಮಿ ಮುಸ್ಲಿಂ ಲೀಗ್‌ (AML) ಸ್ಥಾಪಕ ಶೇಖ್ ರಶೀದ್ ಅಹ್ಮದ್ ಲಷ್ಕರ್‌-ಎ-ತೈಬಾ (LeT) ಉಗ್ರ ಸಂಘಟನೆಯ ಕಮಾಂಡರ್‌ಗಳ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಭಾರತಕ್ಕೆ … Continued

ಎನ್‌ಕ್ರಿಪ್ಟೆಡ್‌ ಕಾಲ್‌, ರಹಸ್ಯ ಕಡತ, ತೀವ್ರ ನಿಗಾ : ಪೊಲೀಸರು ವಾಯುಪಡೆಯ ಹನಿಟ್ರ್ಯಾಪ್–ಗೂಢಚಾರಿಕೆ ಜಾಲ ಭೇದಿಸಿದ್ದು ಹೇಗೆ…?

ನವದೆಹಲಿ: ಪಾಕಿಸ್ತಾನ ಮೂಲದ ಗುಪ್ತಚರ ಏಜೆಂಟನಿಗೆ ರಹಸ್ಯ ರಕ್ಷಣಾ ದಾಖಲೆಗಳು ಹಾಗೂ ಸೇನಾ ಕಾರ್ಯತಂತ್ರದ  ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಸೇವೆಯಲ್ಲಿದ್ದ 44 ವರ್ಷದ ಭಾರತೀಯ ವಾಯುಪಡೆಯ (IAF) ವಿಂಗ್ ಕಮಾಂಡರ್‌ನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ. ನಾಲ್ಕು ತಿಂಗಳ ಕಾಲ ನಡೆದ ಈ ಅಧಿಕಾರಿಯ ಮೇಲೆ ನಿಗಾ ಇಟ್ಟ ಬಳಿಕ … Continued

ಒಂದರ ಮೇಲೆ ದಾಳಿ ಎಂದರೆ ಅದು ಮೂರರ ಮೇಲಿನ ದಾಳಿ : ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ ಪಾಕ್‌–ಸೌದಿ–ಟರ್ಕಿ

ರಿಯಾದ್ : ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭದ್ರತಾ ಸವಾಲುಗಳ ನಡುವೆಯೇ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ಶುಕ್ರವಾರ ಮಹತ್ವದ  ‘ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ’ (Mecca Joint Defence Agreement)ಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಮೂಲಕ ಮೂರು ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರಕ್ಕೆ ಹೊಸ ಆಯಾಮ ದೊರೆತಿದ್ದು, ಯಾವುದೇ ಒಂದು ಸದಸ್ಯ ರಾಷ್ಟ್ರದ ಮೇಲೆ … Continued

ಅಪರಿಚಿತ ಬಂದೂಕುಧಾರಿಗಳಿಂದ ಪಾಕಿಸ್ತಾನದಲ್ಲಿ 30ಕ್ಕೂ ಹೆಚ್ಚು ಲಷ್ಕರ್ ಉಗ್ರರ ಹತ್ಯೆ’ ; ಕ್ಯಾಮೆರಾ ಮುಂದೆಯೇ ಉಗ್ರನ ಒಪ್ಪಿಗೆ

ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ʼಲಷ್ಕರ್-ಎ-ತೈಬಾ (LeT)ʼದ ಹಿರಿಯ ಕಾರ್ಯಕರ್ತನೊಬ್ಬ ಕ್ಯಾಮೆರಾ ಮುಂದೆ ನೀಡಿರುವ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಲಷ್ಕರ್-ಎ-ತೈಬಾದ ಸುಮಾರು 30ಕ್ಕೂ ಹೆಚ್ಚು ಸದಸ್ಯರನ್ನು ಪಾಕಿಸ್ತಾನದೊಳಗೆ ಗುರುತು ತಿಳಿಯದ ಅಪರಿಚಿತ ದಾಳಿಕೋರರು ಹತ್ಯೆಗೈದಿದ್ದಾರೆ  ಎಂದು ಆತ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ರಿಜ್ವಾನ್ ಹನೀಫ್, ಭಾರತಕ್ಕೆ … Continued

ಪಾಕಿಸ್ತಾನದಲ್ಲಿ ಶಾಂತಿ ರ‍್ಯಾಲಿ ಮೇಲೆ ಆತ್ಮಾಹುತಿ ದಾಳಿ: ಐವರು ಪೊಲೀಸ್ ಸೇರಿ 14 ಮಂದಿ ಸಾವು

ಇಸ್ಲಾಮಾಬಾದ್ : ಪಾಕಿಸ್ತಾನದ ವಾಯವ್ಯ ಭಾಗದ ಖೈಬರ್ ಪಖ್ತುನ್ಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ಭಾನುವಾರ ನಡೆದ ಶಾಂತಿ ರ್ಯಾಲಿಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್ ನಡೆಸಿದ ಸ್ಫೋಟದಲ್ಲಿ ಐವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 14 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಸ್ವಾತ್ (Swat) ಜಿಲ್ಲೆಯ ಕಬಾಲ್ (Kabal) ಪಟ್ಟಣದ ಪೊಲೀಸ್ ಠಾಣೆ ಸಮೀಪ … Continued