ಸಮುದ್ರ ಮಟ್ಟ ಏರಿಕೆಯಿಂದ ಮುಂಬೈ, ಕೋಲ್ಕತ್ತಾದ 1.4 ಕೋಟಿ ಜನರು ಮನೆ ಕಳೆದುಕೊಳ್ಳಬಹುದು : ವಿಶ್ವಸಂಸ್ಥೆ ವರದಿ

ಸಮುದ್ರ ಮಟ್ಟ ಏರಿಕೆ ಮತ್ತು ಶಾಶ್ವತ ಜಲಾವೃತದ ಪರಿಣಾಮವಾಗಿ ಕೋಲ್ಕತ್ತಾ ಮತ್ತು ಮುಂಬೈನ ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುವ ತಕ್ಷಣದ ಅಪಾಯ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಕಚೇರಿ ಬಿಡುಗಡೆ ಮಾಡಿರುವ ‘ಸಮುದ್ರ ಮಟ್ಟದ ಏರಿಕೆಗೆ ಸಂಬಂಧಿಸಿದ ಸವಾಲುಗಳು ಮತ್ತು ಅದನ್ನು ಎದುರಿಸುವ ಮಾರ್ಗಗಳು’ (‘Challenges Related to … Continued

ಅಣ್ಣಾ ಹಜಾರೆ ಮುಂಬೈ ಆಸ್ಪತ್ರೆಯ ಐಸಿಯುಗೆ ದಾಖಲು

ಮುಂಬೈ: ತೀವ್ರ ವೈರಲ್ ಸೋಂಕಿನಿಂದ  ಬಳಲುತ್ತಿರುವ ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾಚಾರದ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ (Anna Hazare) ಅವರನ್ನು ಸೋಮವಾರ ಮುಂಬೈನ  ಬಾಂಬೆ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಹಜಾರೆ ಅವರು ಪ್ರಸ್ತುತ ಗೌತಮ್ ಬನ್ಸಾಲಿ ಅವರ ನಿರಂತರ ನಿಗಾದಲ್ಲಿದ್ದಾರೆ. ವೈದ್ಯಕೀಯ ತಜ್ಞರು ವಿವರವಾದ ರೋಗನಿರ್ಣಯ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ ಮತ್ತು ವರದಿಗಳ ಆಧಾರದ … Continued

ಆಕೆ ಪಾಸ್‌, ಈತ ಫೇಲ್‌; ಪ್ರೇಮ ಸಂಬಂಧ ಮುರಿದುಬಿದ್ದ ಬೆನ್ನಲ್ಲೇ ಪ್ರಶ್ನೆಪತ್ರಿಕೆ ಲೀಕ್‌ ಆಗಿದ್ದನ್ನು ಬಯಲಿಗೆಳೆದ ಪ್ರಿಯಕರ…!

ಮುಂಬೈ : ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ಪ್ರೇಮ ವೈಫಲ್ಯದ ಕಾರಣಕ್ಕೆ ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಲ್ಲೊಬ್ಬನೇ ಪೊಲೀಸರಿಗೆ ಮಾಹಿತಿ ನೀಡಿ, ನಂತರ ಆತನೇ ಬಂಧನಕ್ಕೊಳಗಾಗಿದ್ದಾನೆ. ಪೊಲೀಸರ ತನಿಖೆಯ ಪ್ರಕಾರ, ಅಭ್ಯರ್ಥಿ ರಿತುಜಾ ಪಾಟೀಲ ಅವರ ತಂದೆ ಅಮೃತ್‌ ಪಾಟೀಲ ಅವರು ನಂದುರ್ಬಾರ್‌ನ ಕೋಚಿಂಗ್‌ … Continued

ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಸಿದ್ಧತೆ : ಪ್ರಯಾಣದ ಅವಧಿ 16 ತಾಸು

ಬೆಂಗಳೂರು: ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ ಸ್ಲೀಪರ್ ರೈಲು ಸೇವೆ ಆರಂಭಿಸಲು ದಕ್ಷಿಣ ಪಶ್ಚಿಮ ರೈಲ್ವೆ (SWR) ಸಿದ್ಧತೆ ನಡೆಸಿದೆ. ಬೆಂಗಳೂರು ಮೂಲದ ರೈಲ್ವೆ ವಲಯಕ್ಕೆ ಬಿಇಎಂಎಲ್ ನಿರ್ಮಿಸಿರುವ ಎರಡು 16 ಬೋಗಿಗಳ ವಂದೇ ಭಾರತ ಸ್ಲೀಪರ್ ರೈಲು ಸೆಟ್‌ಗಳು ತಲುಪಿದ್ದು, ಅವುಗಳನ್ನು ಸೇವೆಗೆ ನಿಯೋಜಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈನ ಇಂಟಿಗ್ರಲ್ ಕೋಚ್ … Continued

ನಟಿಯ ಮೇಲೆ ಅತ್ಯಾಚಾರ ; 73 ವರ್ಷದ ಸಿನೆಮಾ ನಿರ್ದೇಶಕನ ಬಂಧನ

ಮುಂಬೈ: 33 ವರ್ಷದ ನಟಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಶಕೀಲ್ ನೂರಾನಿ (73) ಅವರನ್ನು ಮುಂಬೈನ ಮಾಲ್ವಾಣಿ ಪೊಲೀಸರು ಆಗಸ್ಟ್ 8ರ ಮುಂಜಾನೆ ಬಂಧಿಸಿದ್ದಾರೆ. ‘ಬಡೆ ದಿಲ್ ವಾಲಾ’ (1999) ಹಾಗೂ ‘ಜೋರು ಕಾ ಗುಲಾಮ್’ (2000) ಸೇರಿದಂತೆ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ನೂರಾನಿ ಅವರನ್ನು … Continued

ರಸ್ತೆ ಬಂದ್ ಮಾಡಿ, ಏರ್‌ಗನ್‌ನಿಂದ ಗುಂಡು ಹಾರಿಸಿ ಜನ್ಮದಿನದ ಹುಚ್ಚಾಟ : ಕಾರಿನ ಬಾನೆಟ್ ಮೇಲೆ ಕೇಕ್ ಕಟ್‌ ; 10 ಮಂದಿ ಬಂಧನ

ಮುಂಬೈ: ಬೊರಿವಲಿಯಲ್ಲಿ ತಡರಾತ್ರಿ ನಡೆದ ಜನ್ಮದಿನ ಆಚರಣೆಯ ವೇಳೆ, ರಸ್ತೆ ತಡೆದು, ಗೊಂದಲ ಸೃಷ್ಟಿಸಿ, ಏರ್‌ಗನ್‌ನಿಂದ ಗುಂಡು ಹಾರಿಸಿದ ಆರೋಪದ ಮೇಲೆ 10 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯರಸ್ತೆಯಲ್ಲಿ ಇನ್ನೋವಾ ಕಾರು ನಿಲ್ಲಿಸಿ ಜನ್ಮದಿನ ಆಚರಿಸುತ್ತಿದ್ದ ವೇಳೆ ಏರ್‌ಗನ್‌ನಿಂದ ಪೆಲೆಟ್‌ ಗುಂಡು ಹಾರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು10 ಮಂದಿಯನ್ನು … Continued

ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಮೇಲೆ ಹಲ್ಲೆ : ಕಾರ್ಪೊರೇಟರ್ ಬಂಧನ

ಥಾಣೆ : ಕಲ್ಯಾಣ-ಡೊಂಬಿವಲಿ ಮಹಾನಗರ ಪಾಲಿಕೆ (ಕೆಡಿಎಂಸಿ) ನಡೆಸುತ್ತಿರುವ ಶಾಸ್ತ್ರಿನಗರ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಶಿವಸೇನೆ (ಏಕನಾಥ ಶಿಂಧೆ ) ಕಾರ್ಪೊರೇಟರ್ ರಮೇಶ ಮ್ಹಾತ್ರೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಸಂಬಂಧ ಮ್ಹಾತ್ರೆ ಹಾಗೂ ಇನ್ನೂ ಐವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಅದರ … Continued

ವಿಡಿಯೋ : ಸಮುದ್ರ ತೀರಕ್ಕೆ ತೇಲಿ ಬಂದ 26 ಅಡಿ ಉದ್ದದ ತಿಮಿಂಗಿಲ ಮರಿ ; ರಕ್ಷಣಾ ಕಾರ್ಯಾಚರಣೆ ವಿಫಲ, ದೈತ್ಯ ಜೀವಿ ಸಾವು

ಮುಂಬೈ: ಮುಂಬೈನ ಬಂಡೆಯುಕ್ತ ಬಾಂದ್ರಾ ಕರಾವಳಿಗೆ ತೇಲಿ ಬಂದಿದ್ದ 26 ಅಡಿ ಉದ್ದದ ಹಂಪ್‌ಬ್ಯಾಕ್ (Humpback) ತಿಮಿಂಗಿಲ ಮರಿಯ ರಕ್ಷಣೆಗೆ ವಿವಿಧ ಇಲಾಖೆಗಳ ಸಮನ್ವಯದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗದೆ ಅದು ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ ಬಾಂದ್ರಾದ ಕಾರ್ಟರ್ ಕ್ಲಬ್ ಸಮೀಪದಲ್ಲಿ, ಬಾಂದ್ರಾ–ವರ್ಸೋವಾ ಸಮುದ್ರ ಸೇತುವೆ (Sea Link) ಕಾಮಗಾರಿಯಲ್ಲಿ ತೊಡಗಿದ್ದ … Continued

50 ಕೆಜಿ ವಿಷ, 30000 ಖಾಲಿ ಕ್ಯಾಪ್ಸುಲ್‌, ಇರಾನ್ ಪ್ರವಾಸ: ಮೊಹರಂನಲ್ಲಿ ಸಾಮೂಹಿಕ ಹತ್ಯೆ ನಡೆಸಲು ಫಯ್ಯಾಜ್ ಪ್ರೇಂಜಿಯ ಭೀಕರ ಸಂಚು !

ಮುಂಬೈ : ಮುಂಬೈನಲ್ಲಿ ನಡೆದ ಮೊಹರಂ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಸುಮಾರು 15 ಸಾವಿರ ಜನರನ್ನು ಹತ್ಯೆ ಮಾಡುವ ಉದ್ದೇಶದಿಂದ ವಿಷಕಾರಿ ಕ್ಯಾಪ್ಸುಲ್‌ಗಳನ್ನು ವಿತರಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಫಯ್ಯಾಜ್ ಪ್ರೇಂಜಿ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನೋವು ನಿವಾರಕ ಮಾತ್ರೆಗಳು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಕ್ಯಾಪ್ಸುಲ್‌ಗಳೆಂದು ಬಿಂಬಿಸಿ ಸಾವಿರಾರು ವಿಷಕಾರಿ ಕ್ಯಾಪ್ಸುಲ್‌ಗಳನ್ನು … Continued

ಮೊಹರಂ ಮೆರವಣಿಗೆ ವೇಳೆ ವಿಷದ ಮಾತ್ರೆ ಹಂಚುತ್ತಿದ್ದ ವ್ಯಕ್ತಿಯ ಬಂಧನ ; 15 ಸಾವಿರ ಮಂದಿ ಹತ್ಯೆಯ ಉದ್ದೇಶದ ಸಂಚು ಬಯಲು

ಮುಂಬೈ: ಶುಕ್ರವಾರ ನಡೆದ ಮೊಹರಂ (ಆಶೂರಾ) ಮೆರವಣಿಗೆಯ ವೇಳೆ ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ಮುಂಬೈ ಪೊಲೀಸರು ಮತ್ತು ಮೂವರು ಮಹಿಳಾ ಸ್ವಯಂಸೇವಕರು ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿಸಿದ್ದಾರೆ. ಸಾರ್ವಜನಿಕರಿಗೆ ವಿಷಕಾರಿ ಕ್ಯಾಪ್ಸುಲ್‌ಗಳನ್ನು ಹಂಚುತ್ತಿದ್ದ ಆರೋಪದ ಮೇಲೆ ಫಯ್ಯಾಜ್ ಪ್ರೇಂಜಿ (Fayyaz Premji) ಎಂಬಾತನನ್ನು ಬೈಕುಲ್ಲಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಹಂಚಿದ್ದ ಕ್ಯಾಪ್ಸುಲ್‌ಗಳನ್ನು ಸೇವಿಸಿದ್ದ ಸುಮಾರು 11 … Continued