ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಮೇಲೆ ಹಲ್ಲೆ : ಕಾರ್ಪೊರೇಟರ್ ಬಂಧನ

ಥಾಣೆ : ಕಲ್ಯಾಣ-ಡೊಂಬಿವಲಿ ಮಹಾನಗರ ಪಾಲಿಕೆ (ಕೆಡಿಎಂಸಿ) ನಡೆಸುತ್ತಿರುವ ಶಾಸ್ತ್ರಿನಗರ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಶಿವಸೇನೆ (ಏಕನಾಥ ಶಿಂಧೆ ) ಕಾರ್ಪೊರೇಟರ್ ರಮೇಶ ಮ್ಹಾತ್ರೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಸಂಬಂಧ ಮ್ಹಾತ್ರೆ ಹಾಗೂ ಇನ್ನೂ ಐವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಅದರ … Continued

ವಿಡಿಯೋ : ಸಮುದ್ರ ತೀರಕ್ಕೆ ತೇಲಿ ಬಂದ 26 ಅಡಿ ಉದ್ದದ ತಿಮಿಂಗಿಲ ಮರಿ ; ರಕ್ಷಣಾ ಕಾರ್ಯಾಚರಣೆ ವಿಫಲ, ದೈತ್ಯ ಜೀವಿ ಸಾವು

ಮುಂಬೈ: ಮುಂಬೈನ ಬಂಡೆಯುಕ್ತ ಬಾಂದ್ರಾ ಕರಾವಳಿಗೆ ತೇಲಿ ಬಂದಿದ್ದ 26 ಅಡಿ ಉದ್ದದ ಹಂಪ್‌ಬ್ಯಾಕ್ (Humpback) ತಿಮಿಂಗಿಲ ಮರಿಯ ರಕ್ಷಣೆಗೆ ವಿವಿಧ ಇಲಾಖೆಗಳ ಸಮನ್ವಯದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗದೆ ಅದು ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ ಬಾಂದ್ರಾದ ಕಾರ್ಟರ್ ಕ್ಲಬ್ ಸಮೀಪದಲ್ಲಿ, ಬಾಂದ್ರಾ–ವರ್ಸೋವಾ ಸಮುದ್ರ ಸೇತುವೆ (Sea Link) ಕಾಮಗಾರಿಯಲ್ಲಿ ತೊಡಗಿದ್ದ … Continued

50 ಕೆಜಿ ವಿಷ, 30000 ಖಾಲಿ ಕ್ಯಾಪ್ಸುಲ್‌, ಇರಾನ್ ಪ್ರವಾಸ: ಮೊಹರಂನಲ್ಲಿ ಸಾಮೂಹಿಕ ಹತ್ಯೆ ನಡೆಸಲು ಫಯ್ಯಾಜ್ ಪ್ರೇಂಜಿಯ ಭೀಕರ ಸಂಚು !

ಮುಂಬೈ : ಮುಂಬೈನಲ್ಲಿ ನಡೆದ ಮೊಹರಂ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಸುಮಾರು 15 ಸಾವಿರ ಜನರನ್ನು ಹತ್ಯೆ ಮಾಡುವ ಉದ್ದೇಶದಿಂದ ವಿಷಕಾರಿ ಕ್ಯಾಪ್ಸುಲ್‌ಗಳನ್ನು ವಿತರಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಫಯ್ಯಾಜ್ ಪ್ರೇಂಜಿ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನೋವು ನಿವಾರಕ ಮಾತ್ರೆಗಳು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಕ್ಯಾಪ್ಸುಲ್‌ಗಳೆಂದು ಬಿಂಬಿಸಿ ಸಾವಿರಾರು ವಿಷಕಾರಿ ಕ್ಯಾಪ್ಸುಲ್‌ಗಳನ್ನು … Continued

ಮೊಹರಂ ಮೆರವಣಿಗೆ ವೇಳೆ ವಿಷದ ಮಾತ್ರೆ ಹಂಚುತ್ತಿದ್ದ ವ್ಯಕ್ತಿಯ ಬಂಧನ ; 15 ಸಾವಿರ ಮಂದಿ ಹತ್ಯೆಯ ಉದ್ದೇಶದ ಸಂಚು ಬಯಲು

ಮುಂಬೈ: ಶುಕ್ರವಾರ ನಡೆದ ಮೊಹರಂ (ಆಶೂರಾ) ಮೆರವಣಿಗೆಯ ವೇಳೆ ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ಮುಂಬೈ ಪೊಲೀಸರು ಮತ್ತು ಮೂವರು ಮಹಿಳಾ ಸ್ವಯಂಸೇವಕರು ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿಸಿದ್ದಾರೆ. ಸಾರ್ವಜನಿಕರಿಗೆ ವಿಷಕಾರಿ ಕ್ಯಾಪ್ಸುಲ್‌ಗಳನ್ನು ಹಂಚುತ್ತಿದ್ದ ಆರೋಪದ ಮೇಲೆ ಫಯ್ಯಾಜ್ ಪ್ರೇಂಜಿ (Fayyaz Premji) ಎಂಬಾತನನ್ನು ಬೈಕುಲ್ಲಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಹಂಚಿದ್ದ ಕ್ಯಾಪ್ಸುಲ್‌ಗಳನ್ನು ಸೇವಿಸಿದ್ದ ಸುಮಾರು 11 … Continued

ವಿಡಿಯೋ | ಮುಂಬೈ ಮಳೆ : ಮೇಯರ್ ಕಣ್ಣೆದುರೇ ಮ್ಯಾನ್‌ಹೋಲ್‌ಗೆ ಬಿದ್ದ ವ್ಯಕ್ತಿ ; ಅಧಿಕಾರಿಗಳಿಗೆ ಸಸ್ಪೆಂಡ್‌ ವಾರ್ನಿಂಗ್‌ ನೀಡಿದ ತಾವ್ಡೆ

ಮುಂಬೈ: ಮುಂಬೈನ ದಾದರ್ ಮತ್ತು ಇತರ ತಗ್ಗು ಪ್ರದೇಶಗಳಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಬುಧವಾರ ಬೆಳಿಗ್ಗೆ ಮಳೆಯ ಪರಿಸ್ಥಿತಿಯ ಪರಿಶೀಲನೆಗೆ ನಗರ ಸಂಚಾರ ನಡೆಸಿದ ಮುಂಬೈ ಮೇಯರ್ ರಿತು ತಾವ್ಡೆ ಅವರ ಕಣ್ಣೆದುರೇ ಪೌರಕಾರ್ಮಿಕನೊಬ್ಬ ತೆರೆದ ಮ್ಯಾನ್‌ಹೋಲ್‌ಗೆ (ಒಳಚರಂಡಿ) ಬಿದ್ದ ಆಘಾತಕಾರಿ ಘಟನೆ ನಡೆದಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಮೇಯರ್, ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳನ್ನು … Continued

ದೆಹಲಿ, ಮುಂಬೈ ಸೇರಿದಂತೆ ಹಲವೆಡೆ ದಾಳಿಗೆ ಸಂಚು ; ಐಎಸ್‌ಐ-ದಾವೂದ್ ನಂಟಿದ್ದ 9 ಶಂಕಿತ ಉಗ್ರರ ಬಂಧನ

ನವದೆಹಲಿ : ದೆಹಲಿ ಪೊಲೀಸ್ ವಿಶೇಷ ಘಟಕದ (Special Cell) ಭರ್ಜರಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ಮತ್ತು ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದ ಒಂಬತ್ತು ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭೀಕರ ದಾಳಿ ನಡೆಸಲು ಸಂಚು ರೂಪಿಸಿದ್ದ ಈ … Continued

ವಿಡಿಯೋ..| ಭಾರತದ ಮೊದಲ ಬುಲೆಟ್ ರೈಲು ಹೇಗೆ ಕಾಣುತ್ತದೆ ಗೊತ್ತಾ? ಬುಲೆಟ್‌ ರೈಲಿನ ಫಸ್ಟ್‌ ಲುಕ್ ಅನಾವರಣ…!

ನವದೆಹಲಿ: ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಮುಂಬೈ-ಅಹಮದಾಬಾದ್ ಬುಲೆಟ್ ರೈಲು’ ಯೋಜನೆಯ ಮೊದಲ ಲುಕ್ (First Look) ಅನಾವರಣಗೊಂಡಿದೆ. ನವದೆಹಲಿಯಲ್ಲಿರುವ ರೈಲ್ವೆ ಸಚಿವಾಲಯದ ಕಟ್ಟಡದಲ್ಲಿ ದೇಶದ ಈ ಮೊದಲ ಹೈಸ್ಪೀಡ್ ರೈಲಿನ ಮಾದರಿ ಚಿತ್ರವನ್ನು ಪ್ರದರ್ಶಿಸಲಾಗಿದೆ. ರೈಲ್ವೆ ಸಚಿವಾಲಯದ ಕಟ್ಟಡದ ‘ಗೇಟ್ ಸಂಖ್ಯೆ 4’ ರಲ್ಲಿ ಈ ಹೈಸ್ಪೀಡ್ ರೈಲಿನ ಆಕರ್ಷಕ ಚಿತ್ರವನ್ನು ಅಳವಡಿಸಲಾಗಿದೆ. ಈ … Continued

ಮೈ ಜುಂ ಎನ್ನುವ ವಿಡಿಯೋ : ತಲೆಗೆ ಕತ್ತಿ ಹೊಕ್ಕಿದ್ದರೂ ನಡೆದುಕೊಂಡೇ ಆಸ್ಪತ್ರೆಗೆ ಬಂದ ವ್ಯಕ್ತಿ

ಮುಂಬೈ: ಮುುಂಬೈನಲ್ಲಿ ನಡೆದ ಭೀಕರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ವ್ಯಕ್ತಿಯೊಬ್ಬನ ತಲೆಗೆ ಕತ್ತಿಯಿಂದ (Sickle) ಹಲ್ಲೆ ಮಾಡಲಾಗಿದ್ದು, ಆ ಕತ್ತಿ ತಲೆಯ ಒಳಭಾಗಕ್ಕೆ ಹೊಕ್ಕಿದ್ದರೂ ಸಹ ಆತ ಯಾವುದೇ ಆತಂಕವಿಲ್ಲದೆ ನಡೆದುಕೊಂಡೇ ಆಸ್ಪತ್ರೆಗೆ ಬಂದಿರುವ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮೇ 4ರಂದು ಮುಂಜಾನೆ ವಿಕ್ರೋಲಿಯ ಕಣ್ಣಂವರ್ ನಗರದಲ್ಲಿ ಇಸ್ಮಾ ಎಂಬ ಯುವಕನ … Continued

ಕಲ್ಮಾ’ ಪಠಿಸಲು ನಿರಾಕರಿಸಿದ ಇಬ್ಬರು ಭದ್ರತಾ ಸಿಬ್ಬಂದಿಗೆ ಚಾಕುವಿನಿಂದ ಇರಿದ ವ್ಯಕ್ತಿ…!

ಮುಂಬೈ: ಮುಂಬೈನ ನಯಾ ನಗರ ಪ್ರದೇಶದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯ ಧರ್ಮವನ್ನು ಕೇಳಿ, ನಂತರ ಅವರಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಈ ಸಂಬಂಧ 31 ವರ್ಷದ ಜೈಬ್ ಜುಬೇರ್ ಅನ್ಸಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಮುಂಜಾನೆ ಸುಮಾರು 4 ಗಂಟೆಯ ಸುಮಾರಿಗೆ ವೊಕಾರ್ಡ್ ಆಸ್ಪತ್ರೆಯ ಹಿಂಭಾಗದಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿ ಈ … Continued

ಬಿರಿಯಾನಿ ಊಟ, ನಂತರ ಕಲ್ಲಂಗಡಿ ಸೇವನೆ : 12 ತಾಸುಗಳ ಅಂತರದಲ್ಲಿ ಒಂದೇ ಕುಟುಂಬದ ನಾಲ್ವರು ಸಾವು…!

ಮುಂಬೈ: 13 ವರ್ಷದ ಝೈನಾಬ್, ಆಕೆಯ ಅಕ್ಕ ಮತ್ತು ತಾಯಿ ಶನಿವಾರ ರಾತ್ರಿ ಬಿರಿಯಾನಿ ಔತಣವನ್ನು ಸವಿದಿದ್ದರು. ಮಧ್ಯರಾತ್ರಿಯ ನಂತರ, ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು. ಆದರೆ ಭಾನುವಾರ ಮುಂಜಾನೆ ತೀವ್ರ ಅನಾರೋಗ್ಯ ಕಾಣಿಸಿಕೊಂಡು, ಚಿಕಿತ್ಸೆ ಫಲಕಾರಿಯಾಗದೆ ಕುಟುಂಬದ ನಾಲ್ವರೂ ಒಬ್ಬರಾದ ಮೇಲೆ ಒಬ್ಬರಂತೆ ಮೃತಪಟ್ಟ ಬೆಚ್ಚಿಬೀಳಿಸುವಂತಹ ಘಟನೆ ಮುಂಬೈನಲ್ಲಿ ನಡೆದಿದೆ. ಈ ನಾಲ್ವರ ಸಾವು ಆಹಾರ … Continued