ರಾತ್ರಿ ವೇಳೆ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿ ಕಂಗಾಲಾಗಿದ್ದ ವಿದೇಶಿ ಮಹಿಳೆ ಸಹಾಯಕ್ಕೆ ಬಂದ ರಾಪಿಡೊ ಚಾಲಕಿ

ಪಣಜಿ (ಗೋವಾ): ಡಿಜಿಟಲ್ ನಕ್ಷೆಗಳ (Navigation App) ಮೇಲಿನ ಅತಿಯಾದ ಅವಲಂಬನೆ ಅನೇಕರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಇತ್ತೀಚೆಗೆ ಗೋವಾದಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿ ಕಂಗಾಲಾಗಿದ್ದ ವಿದೇಶಿ ಪ್ರವಾಸಿ ಮಹಿಳೆಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕಿಯೊಬ್ಬರು ಮಾನವೀಯತೆ ಮೆರೆದು ಸುರಕ್ಷಿತವಾಗಿ ತಲುಪಿಸಿದ ಘಟನೆ ವರದಿಯಾಗಿದೆ. ರಾತ್ರಿ ವೇಳೆ ದಾರಿ ತಪ್ಪಿ … Continued

ಗೋವಾ ಜಿಲ್ಲಾ ಪಂಚಾಯತ ಚುನಾವಣೆ : ಬಿಜೆಪಿಗೆ ಭರ್ಜರಿ ಜಯ; ಕಾಂಗ್ರೆಸ್ಸಿಗೆ ಹಿನ್ನಡೆ

ಪಣಜಿ: ಗೋವಾ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಮೋಘ ಗೆಲುವು ಸಾಧಿಸಿದೆ. ಸೋಮವಾರ (ಡಿಸೆಂಬರ್ 22) ಪ್ರಕಟವಾದ ಫಲಿತಾಂಶದಲ್ಲಿ, ಒಟ್ಟು 50 ಜಿಲ್ಲಾ ಪಂಚಾಯತ ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 2027ರ ವಿಧಾನಸಭಾ ಚುನಾವಣೆಯ ಮುನ್ಸೂಚನೆ ಎಂದೇ ಪರಿಗಣಿಸಲಾಗಿದ್ದ ಈ ಚುನಾವಣೆಯಲ್ಲಿ ಮತದಾರರು … Continued

ಗೋವಾ ನೈಟ್‌ಕ್ಲಬ್ ಅಗ್ನಿ ದುರಂತ: ಥೈಲ್ಯಾಂಡ್​ಗೆ ಪರಾರಿಯಾಗಿದ್ದ ಮಾಲೀಕರ ಬಂಧನ

ಪಣಜಿ: ಗೋವಾದ ‘ಬಿರ್ಚ್ ಬೈ ರೋಮಿಯೋ ಲೇನ್’ (Birch by Romeo Lane) ಕ್ಲಬ್‌ನಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಥೈಲ್ಯಾಂಡ್(Thailand)​ಗೆ ಪರಾರಿಯಾಗಿದ್ದ ಮಾಲೀಕರನ್ನು ಬಂಧಿಸಲಾಗಿದೆ. ಮಾಲೀಕರಾದ ಸೌರಭ್ ಮತ್ತು ಗೌರವ್ ಲೂಥ್ರಾ ಸಹೋದರರನ್ನು ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ಬಂಧಿಸಲಾಗಿದೆ. ಶನಿವಾರ ಈ ಕ್ಲಬ್‌ನಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ 25 ಜನರು ಸಾವಿಗೀಡಾಗಿದ್ದರು. ಬೆಂಕಿ ಅನಾಹುತ ಸಂಭವಿಸುತ್ತಿದ್ದಂತೆ … Continued

ಗೋವಾ ಅಗ್ನಿ ದುರಂತ : ನೈಟ್‌ಕ್ಲಬ್‌ಗೆ ಬೆಂಕಿ ಹೊತ್ತಿಕೊಂಡಾಗ ಥೈಲ್ಯಾಂಡ್‌ಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದ ಲೂತ್ರಾ ಸಹೋದರರು

ಗೋವಾದ ಬರ್ಚ್ ಬೈ ರೋಮಿಯೋ ಲೇನ್ (Birch by Romeo Lane) ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ, 25 ಜನರ ಸಾವಿಗೆ ಕಾರಣವಾದ ಕ್ಲಬ್‌ನ ಮಾಲೀಕರಾದ ಸೌರಭ ಮತ್ತು ಗೌರವ ಲೂಥ್ರಾ ಅವರು, ತುರ್ತು ರಕ್ಷಣಾ ತಂಡಗಳು ಬೆಂಕಿಯನ್ನು ನಿಯಂತ್ರಿಸಲು ಹೋರಾಡುತ್ತಿದ್ದಾಗಲೇ ಥೈಲ್ಯಾಂಡ್‌ಗೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು ಎಂಬ ಆಘಾತಕಾರಿ ವಿಷಯವನ್ನು ಗೋವಾ ಪೊಲೀಸರು … Continued

ಗೋವಾ ನೈಟ್‌ ಕ್ಲಬ್ ದುರಂತ: ಮಾಲೀಕ ಅಜಯ ಗುಪ್ತಾ ದೆಹಲಿಯಲ್ಲಿ ವಶಕ್ಕೆ

ನವದೆಹಲಿ:ಉತ್ತರ ಗೋವಾದ ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್‌ನ ನಾಲ್ವರು ಮಾಲೀಕರಲ್ಲಿ ಒಬ್ಬರಾದ ಅಜಯ ಗುಪ್ತಾ ಅವರನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದೆ. ನೈಟ್‌ಕ್ಲಬ್‌ಗೆ ಸಂಬಂಧಿಸಿದ ಕಾರ್ಯಾಚರಣೆಯ ಜವಾಬ್ದಾರಿಗಳಿಂದ ದೂರವಿರುವ ಗುಪ್ತಾ, ಘಟನೆಯಲ್ಲಿ ತಮ್ಮ ಪಾತ್ರ ಸೀಮಿತವಾಗಿತ್ತು ಎಂದು ಹೇಳಿಕೊಂಡಿದ್ದಾರೆ. “ನಾನು ಕೇವಲ ಪಾಲುದಾರನಾಗಿದ್ದೆ, ನನಗೆ ಬೇರೇನೂ ತಿಳಿದಿಲ್ಲ,” ಎಂದು ಗುಪ್ತಾ ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ … Continued

25 ಜನ ಸಾವಿಗೀಡಾದ ಗೋವಾ ನೈಟ್‌ಕ್ಲಬ್ ಬೆಂಕಿ ದುರಂತದ ಘಟನೆ ; ಮಾಲೀಕರು ದೇಶ ಬಿಟ್ಟು ಪಲಾಯನ

ಪಣಜಿ: ಗೋವಾದ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ 25 ಜನರು ಸಾವಿಗೀಡಾಗಿ, ಆರು ಮಂದಿ ಗಾಯಗೊಂಡ ಕೆಲವೇ ಗಂಟೆಗಳ ನಂತರ, ನೈಟ್‌ಕ್ಲಬ್ ಮಾಲೀಕರಾದ ಸೌರಭ ಮತ್ತು ಗೌರವ್ ಲೂತ್ರಾ ಸಹೋದರರು ಥೈಲ್ಯಾಂಡಿನ  ಫುಕೆಟ್‌ಗೆ (Phuket) ವಿಮಾನದಲ್ಲಿ ಪರಾರಿಯಾಗಿರುವುದನ್ನು ಗೋವಾ ಪೊಲೀಸರು ಖಚಿತಪಡಿಸಿದ್ದು, ಅವರಿಗಾಗಿ ಅಂತಾರಾಷ್ಟ್ರೀಯ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಸೋಮವಾರ ತಿಳಿಸಿದ್ದಾರೆ. ಬೆಂಕಿ … Continued

ವೀಡಿಯೊ…| ಗೋವಾದ ನೈಟ್‌ ಕ್ಲಬ್‌ ದುರಂತ : ಶೋಲೆ ಹಾಡಿಗೆ ನೃತ್ಯ, ನಂತರ ಭಯ ; ಬೆಂಕಿ ಹೊತ್ತಿಕೊಂಡ ಕ್ಷಣದ ದೃಶ್ಯ ಸೆರೆ

ಪಣಜಿ: ಗೋವಾದ ಉತ್ತರ ಗೋವಾದ ಆರ್ಪೋರಾ ಪ್ರದೇಶದಲ್ಲಿರುವ ‘ಬಿರ್ಚ್ ಬೈ ರೋಮಿಯೋ ಲೇನ್’ (Birch By Romeo Lane) ಎಂಬ ಜನಪ್ರಿಯ ನೈಟ್‌ಕ್ಲಬ್‌ನಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 25 ಜನರು ಸಾವಿಗೀಡಾಗಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಸಂಭವಿಸಿದಾಗ ನೂರಕ್ಕೂ ಹೆಚ್ಚು ಪ್ರವಾಸಿಗರು “ಬಾಲಿವುಡ್ ಬ್ಯಾಂಗರ್ ನೈಟ್” … Continued

ಗೋವಾ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ: 25 ಮಂದಿ ಸಾವು

ಆರ್ಪೋರಾ (ಉತ್ತರ ಗೋವಾ): ಉತ್ತರ ಗೋವಾದ ಆರ್ಪೋರಾದಲ್ಲಿರುವ ನೈಟ್‌ಕ್ಲಬ್‌ವೊಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಿಂದಾಗಿ ಕನಿಷ್ಠ 25 ಜನರು ಸಾವಿಗೀಡಾಗಿದ್ದು, ಏಳು ಮಂದಿ ಗಾಯಗೊಂಡಿರುವ ದುರ್ಘಟನೆ ಸಂಭವಿಸಿದೆ. ಮೃತರಾದವರಲ್ಲಿ ಬಹುತೇಕರು ಕ್ಲಬ್‌ನ ಸಿಬ್ಬಂದಿ ಎಂದು ತಿಳಿದುಬಂದಿದೆ. ರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ನೈಟ್‌ಕ್ಲಬ್‌ನ ಅಡುಗೆಮನೆಯ (Kitchen) ಸಮೀಪದಲ್ಲಿ ಸಿಲಿಂಡರ್ ಸ್ಫೋಟದಿಂದ ಬೆಂಕಿ … Continued

ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಾದ ಪರ್ತಗಾಳಿ ಮಠದ ‘ಶ್ರೀರಾಮ ನಾಮ ಜಪ’ ಅಭಿಯಾನ

ಪರ್ತಗಾಳಿ (ಗೋವಾ): ಏಪ್ರಿಲ್‌ 17, 2024ರಂದು ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿಯವರು ಆರಂಭಿಸಿದ ಶ್ರೀರಾಮ ನಾಮ ಜಪ ಅಭಿಯಾನವು ಹೊಸ ಇತಿಹಾಸವು ಗೋಕರ್ಣ ಪರ್ತಗಾಳಿ ಮಠದ ಪುಟದಲ್ಲಿ ದಾಖಲಿಸಿದೆ. ಶ್ರೀರಾಮ ನಾಮ ಜಪ 550 ದಿನಗಳಲ್ಲಿ 593 ಕೋಟಿ ಜಪ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ … Continued

ವೀಡಿಯೊಗಳು..| ಪರ್ತಗಾಳಿ ಮಠದಲ್ಲಿ 77 ಅಡಿ ಎತ್ತರದ ಭಗವಾನ್‌ ಶ್ರೀರಾಮನ ಕಂಚಿನ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ

ಪರ್ತಗಾಳಿ (ಗೋವಾ) : ಪರ್ತಗಾಳಿ ಮಠವು ಪರಂಪರೆ ಹಾಗೂ ಆಧುನಿಕತೆಯ ಜೊತೆ ಸೇತುವೆಯಾಗುವ ಪ್ರಮುಖ ಭೂಮಿಯಕೆಯಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಆಶಿಸಿದರು. ಪರ್ತಗಾಳಿ ಜೋವೋತ್ತಮ ಮಠದಲ್ಲಿ ಶುಕ್ರವಾರ 77 ಅಡಿ ಎತ್ತರದ ರಾಮನ ಕಂಚಿನ ಮೂರ್ತಿಯನ್ನು ಅನಾವರಣ ಮಾಡಿ, ರಾಮಾಯಣ ಥೀಮ್‌ ಪಾರ್ಕ್‌ ಉದ್ಘಾಟಿಸಿ, ಮಠದ 550 ನೇ ವರ್ಷದ ಅಂಗವಾಗಿ ಕೇಂದ್ರ ಸರ್ಕಾರ … Continued