ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕೆಂಪು ಅಂಗಿ ತೊಟ್ಟು ʼಹಮಾಲಿʼಯಾದ ರಾಹುಲ್ ಗಾಂಧಿ | ವೀಕ್ಷಿಸಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ದೆಹಲಿಯ ಆನಂದ್ ವಿಹಾರ ರೈಲು ನಿಲ್ದಾಣದಲ್ಲಿ ಹಮಾಲರನ್ನು ಭೇಟಿ ಮಾಡಿದರು ಮತ್ತು ಕೆಂಪು “ಕೂಲಿ” ಶರ್ಟ್ ಮತ್ತು ಕೈಗೆ ಬ್ಯಾಡ್ಜ್ ಕಟ್ಟಿಕೊಂಡು ತಲೆಯ ಮೇಲೆ ಲಗೇಜ್ ಹೊತ್ತುಕೊಂಡು ಸಾಗಿದರು. ವೈರಲ್ ಕ್ಲಿಪ್‌ನಲ್ಲಿ, ವಯನಾಡ್ ಸಂಸದ ತಲೆಯ ಮೇಲೆ ಟ್ರಾಲಿ ಬ್ಯಾಗ್ ಇರಿಸುತ್ತಿರುವುದು ಹಾಗೂ ಪೋರ್ಟರ್‌ಗಳು ಅವರನ್ನು ಸುತ್ತುವರೆದಿರುವುದನ್ನು … Continued

ಮರಳಿನಲ್ಲಿ ಸಿಕ್ಕಿಬಿದ್ದ ದಾಳಿಕೋರ ಬೃಹತ್‌ ಮಾಕೋ ಶಾರ್ಕ್ ಮೀನನ್ನು ಸಮುದ್ರಕ್ಕೆ ತಳ್ಳಿ ರಕ್ಷಿಸಿದ ಬೀಚಿಗೆ ಹೋದ ಪ್ರವಾಸಿಗರು | ವೀಕ್ಷಿಸಿ

ಫ್ಲೋರಿಡಾ ಕಡಲತೀರದವರು ಮರಳಿನ ಮೇಲೆ ಸಿಕ್ಕಿಬಿದ್ದ ಬೃಹತ್ ಶಾರ್ಕ್ ಮೀನನ್ನು ಉಳಿಸಲು ನಾಲ್ಕೈದು ಜನ ಒಟ್ಟಾಗಿ ಸೇರಿ ಪ್ರಯತ್ನ ಪಡುವ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಸನ್‌ಶೈನ್ ಸ್ಟೇಟ್‌ನ ಗಲ್ಫ್ ಕೋಸ್ಟ್‌ನಲ್ಲಿರುವ ಪೆನ್ಸಕೋಲಾದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಕಡಲತೀರಕ್ಕೆ ಬಂದವರ ಗುಂಪೊಂದು 10 ಅಡಿ ಉದ್ದದ ಮಾಕೋ ಶಾರ್ಕ್ ದಡಕ್ಕೆ ಕೊಚ್ಚಿಬಂದಿರುವುದನ್ನು ಗಮನಿಸಿದೆ. ಅವರು ಶೀಘ್ರದಲ್ಲೇ … Continued

ರಸ್ತೆಯಲ್ಲಿ ಸಾರ್ವಜನಿಕರ ಎದುರೇ ಹೊಡೆದಾಡಿಕೊಂಡ ಇಬ್ಬರು ಪೊಲೀಸರು : ತನಿಖೆ ಆರಂಭ | ವೀಡಿಯೊ

ಬಿಹಾರದ ನಳಂದಾದಲ್ಲಿ ಇಬ್ಬರು ಪೊಲೀಸ್ ಪೇದೆಗಳು ಹಗಲು ಹೊತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ಆಘಾತಕಾರಿ ವೀಡಿಯೊ ಆನ್‌ಲೈನ್‌ನಲ್ಲಿ ಹೊರಹೊಮ್ಮಿದೆ. ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಇಬ್ಬರು ಪೊಲೀಸರು ನಳಂದಾದಲ್ಲಿ ರಸ್ತೆಯ ಮಧ್ಯದಲ್ಲಿ ಹೊಡೆದಾಡಿಕೊಂಡಿದ್ದಾರೆ. ಒಬ್ಬ ಅಧಿಕಾರಿ ಸಾರ್ವಜನಿಕರ ಮುಂದೆಯೇ ಲಂಚ ಸ್ವೀಕರಿಸುತ್ತಿದ್ದಾರೆ ಎಂದು ಆರೋಪಿಸುವುದರೊಂದಿಗೆ ವೀಡಿಯೊ ಆರಂಭವಾಗುತ್ತದೆ. ಮೊದಲ ಪೋಲೀಸರು ಅಲ್ಲಿಂದ ತೆರಳಲು ಯತ್ನಿಸಿದಾಗ ಮತ್ತೋರ್ವ ಪೋಲೀಸ್‌ … Continued

ವೀಡಿಯೊ : ಭಾರೀ ಮಳೆ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ರನ್‌ ವೇಯಲ್ಲಿ ಬಿದ್ದ ಖಾಸಗಿ ವಿಮಾನ | ವೀಕ್ಷಿಸಿ

ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಂಟು ಜನರಿದ್ದ ಖಾಸಗಿ ಜೆಟ್ ಗುರುವಾರ ಭಾರೀ ಮಳೆಯ ನಡುವೆ ಲ್ಯಾಂಡ್ ಆಗುತ್ತಿರುವಾಗ ರನ್‌ವೇಯಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದೆ.. ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಾರ, ಸಿಬ್ಬಂದಿ ಸೇರಿದಂತೆ ಎಂಟು ಜನರಿಗೆ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಭಾರೀ ಮಳೆಯ ನಂತರ ಕಡಿಮೆ ಗೋಚರತೆಯಿಂದಾಗಿ ವಿಮಾನವು ರನ್‌ … Continued

ಮೀಸಲಾತಿ ವಿವಾದದ ನಡುವೆ ಮಹಾರಾಷ್ಟ್ರದ ಕಂದಾಯ ಸಚಿವರ ತಲೆ ಮೇಲೆ ಅರಿಶಿಣದ ಪುಡಿ ಸುರಿದ ವ್ಯಕ್ತಿ | ವೀಡಿಯೊ

ಮುಂಬೈ: ಮೀಸಲಾತಿಗಾಗಿ ಒತ್ತಾಯಿಸಿ ಧಂಗರ್ ಸಮುದಾಯದ ಸದಸ್ಯರು ನೀಡಿದ ಮನವಿ ಪತ್ರ ಓದುತ್ತಿದ್ದಾಗ ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರಿಗೆ ಹಲ್ದಿ ಅಥವಾ ಅರಿಶಿನ ಪುಡಿಯನ್ನು ಎರಚಲಾಗಿದೆ. ಘಟನೆಯ ವೀಡಿಯೋದಲ್ಲಿ ಧನಗರ್ (ಕುರುಬ) ಸಮುದಾಯದ ಇಬ್ಬರು ವ್ಯಕ್ತಿಗಳು ಸಚಿವರ ಎರಡೂ ಬದಿಯಲ್ಲಿ ನಿಂತಿರುವುದು ಕಂಡುಬರುತ್ತದೆ. ಸಚಿವರು ಅವರು ನೀಡಿದ ಪತ್ರವನ್ನು ಓದುತ್ತಿದ್ದಾಗ, ಅವರಲ್ಲಿ … Continued

ಆಘಾತಕಾರಿ ವೀಡಿಯೊ | 100 ಮೀಟರ್‌ ವರೆಗೆ ಎಳೆದೊಯ್ದ ಹಸು ; ವೃದ್ಧ ಸಾವು

ಮೊಹಾಲಿ: ಪಂಜಾಬ್‌ನ ಮೊಹಾಲಿಯಲ್ಲಿ ಹಸುವೊಂದು ವಯೋವೃದ್ಧರೊಬ್ಬರನ್ನು 100 ಮೀಟರ್‌ವರೆಗೆ ಎಳೆದೊಯ್ದ ನಂತರ ವಯೋವೃದ್ಧರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಈ ದಾರುಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ವೃದ್ಧನನ್ನು ಸರೂಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಬಿಡಾಡಿ ಹಸು ಆತನ ನಿವಾಸಕ್ಕೆ ನುಗ್ಗಿದೆ ಎಂದು ಹೇಳಲಾಗಿದೆ. ಸಿಸಿಟಿವಿ ದೃಶ್ಯಾವಳಿಯು ಹಸು ಆಕ್ರಮಣಕಾರಿಯಾಗಿ ಸರೂಪ್‌ ಸಿಂಗ್ ಅವರನ್ನು ಎಳೆಯುವುದನ್ನು … Continued

ಕಾರವಾರ : ಬಾರೆ ರಸ್ತೆಯಲ್ಲಿ ವಾಹನದ ಪಕ್ಕವೇ ಕಾಣಿಸಿಕೊಂಡ ಹುಲಿ : ಜನರತ್ತ ನೋಡಿ ಘರ್ಜನೆ | ವೀಕ್ಷಿಸಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಲ್ಲಾಪುರ-ಕೈಗಾ-ಬಾರೆ-ಯಲ್ಲಾಪುರ ರಸ್ತೆಯಲ್ಲಿ ಹುಲಿಯೊಂದು ಕಾರಿನ ಪಕ್ಕದಲ್ಲಿಯೇ ಕಾಣಿಸಿಕೊಂಡಿದ್ದು, ಇದರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೈಗಾ ಎನ್‌ಪಿಸಿಐಎಲ್‌ ಉದ್ಯೋಗಿ ಚೇತನ ತೇಲ್ಕರ ಎಂಬವರು ಹುಲಿ ಕಾಣಿಸಿಕೊಂಡಿದ್ದನ್ನು ವೀಡಿಯೊ ಚಿತ್ರೀಕರಣ ಮಾಡಿದ್ದಾರೆ. ಬೃಹತ್‌ ಗಾತ್ರದ ಹುಲಿ ರಸ್ತೆ ಬದಿಯಲ್ಲೇ ನಿಂತು ಕಾರಿನಲ್ಲಿದ್ದವರನ್ನು ನೋಡಿ ಘರ್ಜಿಸುವುದನ್ನು ವೀಡಿಯೊದಲ್ಲಿ ನೋಡಬಹುದಾಗಿದೆ. ಕಾರನ್ನು ಹಿಂಬಾಲಿಸಿದಂತೆ … Continued

ಚಿರತೆ ಹಿಡಿದುಕೊಂಡು ಸಂಭ್ರಮಿಸಿದ ಗ್ರಾಮಸ್ಥರು, ಅದರೊಂದಿಗೆ ಸೆಲ್ಫಿ ತೆಗೆದುಕೊಂಡರು | ವೀಕ್ಷಿಸಿ

ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಹಲವಾರು ಗ್ರಾಮಸ್ಥರು ಚಿರತೆಯನ್ನು ಹಿಡಿದುಕೊಂಡು ಸಂಭ್ರಮಿಸುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಮಂಗಳವಾರ ಮಧ್ಯಾಹ್ನ ಕಾಳಿ ಸಿಂಧ್ ನದಿಯ ದಡದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಈ ಪ್ರಾಣಿಯನ್ನು ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ವೈರಲ್ ಆಗಿರುವ ವೀಡಿಯೊದಲ್ಲಿ, ಚಿರತೆ ಆಲಸ್ಯವಾಗಿ ಇರುವಂತೆ ಕಾಣಿಸಿಕೊಂಡಿದ್ದು, ಅದು ನಡೆಯಲು ಕಷ್ಟಪಡುತ್ತಿದೆ. ಆರಂಭದಲ್ಲಿ ಗ್ರಾಮಸ್ಥರು ಭಯಭೀತರಾಗಿದ್ದರೂ, ಚಿರತೆ … Continued

ವೀಡಿಯೊ…: ಎರಡು ಮನೆಯ ಸಾಕು ನಾಯಿಗಳ ಜಗಳ : ಇಬ್ಬರನ್ನು ಗುಂಡಿಕ್ಕಿ ಕೊಂದ ವ್ಯಕ್ತಿ, 6 ಜನರಿಗೆ ಗಾಯ

ಇಂದೋರ್‌: ಸಾಕುನಾಯಿಗಳ ನಡುವೆ ನಡೆದ ಕಾದಾಟವು ಅವುಗಳ ಮಾಲೀಕರ ನಡುವಿನ ಜಗಳಕ್ಕೆ ಕಾರಣವಾಗಿ ಇದು ಗುರುವಾರ ಇಬ್ಬರ ಸಾವಿನಲ್ಲಿ ಅಂತ್ಯಗೊಂಡ ಘಟನೆ ಇಂದೋರ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಂಕ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ರಾಜಪಾಲ್ ಸಿಂಗ್ ರಜಾವತ್ ಗುರುವಾರ ರಾತ್ರಿ ತನ್ನ ಮನೆಯ ಬಾಲ್ಕನಿಯಿಂದ ಅಕ್ಕಪಕ್ಕದವರ ಮೇಲೆ ಗುಂಡು ಹಾರಿಸಿದ್ದು, ಇಬ್ಬರು … Continued

ರಸ್ತೆ ಮಧ್ಯದಲ್ಲಿ ತಮ್ಮ ಮೇಲೆ ದಾಳಿ ಮಾಡಿದ ಚಿರತೆ ಮೇಲೆಯೇ ಪ್ರತಿದಾಳಿ ಮಾಡಿದ ಬಬೂನ್‌(ಮಂಗ)ಗಳು : ಕಂಗಾಲಾಗಿ ಕಾಲ್ಕಿತ್ತ ಚಿರತೆ | ವೀಕ್ಷಿಸಿ

ವನ್ಯಜೀವಿಗಳ ಬೆರಗುಗೊಳಿಸುವ ವೈವಿಧ್ಯತೆಯು ಸಾಮಾನ್ಯವಾಗಿ ನಮ್ಮ ಆಲೋಚನೆಗಳು ಹಾಗೂ ಕಲ್ಪನೆಗಳನ್ನೂ ಮೀರಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಸುಮಾರು 50 ಬಬೂನ್‌ಗಳು (ಮಂಗನ ಒಂದು ಪ್ರಭೇದ) ಚಿರತೆಯ ಮೇಲೆ ದಾಳಿ ಮಾಡುತ್ತಿರುವ ದೃಶ್ಯದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದು ಈ ವಿದ್ಯಮಾನಕ್ಕೆ ಪುರಾವೆಯನ್ನು ಒದಗಿಸಿದೆ. ರಸ್ತೆಯ ಮಧ್ಯದಲ್ಲಿ ಸಂಭವಿಸಿದ ಚಿರತೆ-ಬಬೂನ್‌ಗಳ ಸಂಂಘರ್ಷದ ಕ್ಷಣವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ … Continued