ವೀಡಿಯೊ..| ಭಾಷಣ ಮಾಡುತ್ತಿದ್ದಾಗ ಪೋಡಿಯಂಗೆ ಅಪ್ಪಳಿಸಿದ ಡ್ರೋನ್ ; ಸ್ವಲ್ಪದರಲ್ಲೇ ಪಾರಾದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್

ಪಾಟ್ನಾ : ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ರ್ಯಾಲಿಯ ಸಂದರ್ಭದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ವೇದಿಕೆಯ ಮೇಲೆ ಡ್ರೋನ್ ಅಪ್ಪಳಿಸಿದ ಪರಿಣಾಮ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ‘ವಕ್ಫ್ ಬಚಾವೋ, ಸಂವಿಧಾನ್ ಬಚಾವೋ ಸಮ್ಮೇಳನ’ (ವಕ್ಫ್ ಉಳಿಸಿ, ಸಂವಿಧಾನವನ್ನು ಉಳಿಸಿ) ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. … Continued

ರಾಜಸ್ಥಾನದಲ್ಲಿ 4500 ವರ್ಷಗಳಷ್ಟು ಹಳೆಯ ನಾಗರಿಕತೆ ಪತ್ತೆ..! ಇದಕ್ಕಿತ್ತು ಪೌರಾಣಿಕ ಸರಸ್ವತಿ ನದಿಯ ಸಂಪರ್ಕ…!!

ದೀಗ್ (ರಾಜಸ್ಥಾನ) : ರಾಜಸ್ಥಾನದ ದೀಗ್ ಜಿಲ್ಲೆಯ ಬಹಜ್ ಗ್ರಾಮದಲ್ಲಿ 4,500 ವರ್ಷಗಳ ಹಿಂದಿನ ನಾಗರಿಕತೆಯ ಪುರಾವೆಗಳನ್ನು ಭಾರತೀಯ ಪುರಾತತ್ವ ಸಮೀಕ್ಷೆ (ASI) ಪತ್ತೆಹಚ್ಚಿದೆ. ಜನವರಿ 10, 2024 ರಂದು ಪ್ರಾರಂಭವಾದ ಉತ್ಖನನವು ಹಲವಾರು ಮಹತ್ವದ ಸಂಶೋಧನೆಗಳಿಗೆ ಕಾರಣವಾಗಿದೆ, ಇದರಲ್ಲಿ ಪುರಾತತ್ತ್ವಜ್ಞರು ಋಗ್ವೇದದಲ್ಲಿ ಉಲ್ಲೇಖಿಸಲಾದ ಪೌರಾಣಿಕ ಸರಸ್ವತಿ ನದಿಗೆ ಸಂಪರ್ಕಿಸುವ 23-ಮೀಟರ್ ಆಳದ ಪ್ಯಾಲಿಯೊ-ಚಾನಲ್ ಕಂಡುಬಂದಿದೆ. … Continued

ವೀಡಿಯೊ | 16 ಸೂರ್ಯಾಸ್ತಗಳು, 16 ಸೂರ್ಯೋದಯಗಳು..: ಬಾಹ್ಯಾಕಾಶ ನಿಲ್ದಾಣದಲ್ಲಿರುವ ಶುಕ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ-ವೀಕ್ಷಿಸಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಆಕ್ಸಿಯಮ್ -4 (ಆಕ್ಸ್ -4) ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಭಾರತದ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಜೊತೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ್ದಾರೆ. ಆಕ್ಸಿಯಮ್ -4 ಮಿಷನ್‌ನ ಭಾಗವಾಗಿ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ … Continued

ಶುಭಾಂಶು ಶುಕ್ಲಾರಿಂದ ಇತಿಹಾಸ ಸೃಷ್ಟಿ ; 424 ಕಿಮೀ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಮೊದಲ ಭಾರತೀಯ-ವೀಕ್ಷಿಸಿ

ನವದೆಹಲಿ: ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ 28 ಗಂಟೆಗಳ ನಂತರ, ಗ್ರೂಪ್ ಕ್ಯಾಪ್ಟನ್ ಭಾರತದ ಶುಭಾಂಶು ಶುಕ್ಲಾ ಇತಿಹಾಸ ಸೃಷ್ಟಿಸಿದ್ದಾರೆ. ಗುರುವಾರ ಆಕ್ಸಿಯಮ್ -4 (ಆಕ್ಸ್ -4) ಮಿಷನ್ ಕಕ್ಷೆಯಲ್ಲಿರುವ ಪ್ರಯೋಗಾಲಯದ ಜೊತೆ ಯಶಸ್ವಿಯಾಗಿ ಡಾಕ್ ಆಗುತ್ತಿದ್ದಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ತಲುಪಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. … Continued

‘ನನ್ನನ್ನು ಮುಟ್ಟಿದ್ರೆ ನಿನ್ನನ್ನು 35 ತುಂಡುಗಳಾಗಿ ಕತ್ತರಿಸ್ತೇನೆ..; ಮದುವೆ ಮೊದಲ ರಾತ್ರಿ ಚಾಕು ಹಿಡಿದು ಗಂಡನಿಗೆ ಕೊಲೆ ಬೆದರಿಕೆ ಹಾಕಿದ ನವವಿವಾಹಿತೆ…!

ನವವಿವಾಹಿತೆಯೊಬ್ಬಳು ಮೊದಲ ರಾತ್ರಿಯೇ ಚಾಕು ಹಿಡಿದುಕೊಂಡು ನನ್ನನ್ನು ಮುಟ್ಟಿದರೆ 35 ತುಂಡುಗಳಾಗಿ ಕತ್ತರಿಸುವೆ ಎಂದು ಗಂಡನಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. “ನನ್ನನ್ನು ಮುಟ್ಟಿದರೆ ನಿನ್ನನ್ನು 35 ತುಂಡುಗಳಾಗಿ ಕತ್ತರಿಸುವೆ. ನಾನು ಅಮನ್‌ಗೆ ಸೇರಿದವಳು” ಎಂದು ಎಚ್ಚರಿಸುತ್ತ ಪತ್ನಿ ಕೋಣೆಯ ಒಂದು ಮೂಲೆಯಲ್ಲಿ ಕುಳಿತು, ತಲೆಯ ಮುಸುಕಿನ ಕೆಳಗೆ ಹರಿತವಾದ ಚಾಕುವನ್ನು … Continued

ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

ಸೋಮವಾರ ಉತ್ತರಪ್ರದೇಶದ ಲಖಿಂಪುರ ಖೇರಿಯ ಧೌರಪುರ ಅರಣ್ಯ ಪ್ರದೇಶದ ಜುಗ್ನುಪುರದ ಇಟ್ಟಂಗಿ ತಯಾರಿಕೆ ಘಟಕದ ಕೆಲಸಗಾರರ ಮೇಲೆ ಕಪ್ಪು ಚಿರತೆಯೊಂದು ದಾಳಿ ನಡೆಸಿದೆ. ನಾಟಕೀಯ ಹಾಗೂ ಅಪರೂಪದ ವಿದ್ಯಮಾನದಲ್ಲಿ ಹೆದರದ ಯುವಕನೊಬ್ಬ ಚಿರತೆಯನ್ನು ಕೆಡವಿ ಬಾಯಿಯನ್ನು ಹಿಡಿದು ನೆಲಕ್ಕೆ ಒತ್ತಿ ಹಿಡಿದು ಅದನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾನೆ. ಗದ್ದಲದಿಂದ ಎಚ್ಚೆತ್ತ ಗ್ರಾಮಸ್ಥರು ಒಟ್ಟುಗೂಡಿ ಚಿರತೆಯ ಮೇಲೆ ಇಟ್ಟಿಗೆಗಳು … Continued

ವೀಡಿಯೊ…| ಯೋಗ ದಿನಾಚರಣೆ : 51 ಪುಶ್‌-ಅಪ್‌ ಮಾಡಿ ಜನಸಮೂಹ ಬೆರಗುಗೊಳಿಸಿದ 73 ವರ್ಷದ ತಮಿಳುನಾಡು ರಾಜ್ಯಪಾಲರು…!

ಮಧುರೈ : ದೇಶಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ. ತಮಿಳುನಾಡಿನ ಮಧುರೈನಲ್ಲಿ ನಡೆದ ಕಾರ್ಯಕ್ರಮದಲ್ಲಿ 73 ವರ್ಷದ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ 10,000ಕ್ಕೂ ಹೆಚ್ಚು ಯೋಗಾಸಕ್ತರಿಗೆ ಅಚ್ಚರಿ ಮೂಡಿಸಿದರು. ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಥೀಮ್‌ನೊಂದಿಗೆ 11ನೇ ಅಂತಾರಾಷ್ಟ್ರೀಯ ಯೋಗ ದಿನದ ಜಾಗತಿಕ ಆಚರಣೆಯ … Continued

ವೀಡಿಯೊ..| ಎರಡು ತಲೆ, 3 ಕಣ್ಣುಗಳಿರುವ ಆಕಳ ಕರು ಜನನ ; ಜನರಿಂದ ಪೂಜೆ

ಬಾಗ್ಪತ್ : ಉತ್ತರ ಪ್ರದೇಶದ ಭಾಗ್ಪತ್‌ನ ಟಿಕ್ರಿ ಗ್ರಾಮದಲ್ಲಿ ಎರಡು ತಲೆಗಳಿರುವ ಕರುವೊಂದು ಜನಿಸಿದ ಅಪರೂಪದ ವಿದ್ಯಮಾನ ವರದಿಯಾಗಿದೆ. ಈ ಕರುವಿಗೆ 2 ತಲೆಗಳು ಮತ್ತು 3 ಕಣ್ಣುಗಳಿವೆ. ಪ್ರಸ್ತುತ ಅದು ಆರೋಗ್ಯವಾಗಿದೆ. ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ಬಾಗ್‌ಪತ್ ಸುತ್ತಮುತ್ತಲಿನ ಜನರು ಮತ್ತು ಸ್ಥಳೀಯರು ಆಗಮಿಸುತ್ತಿದ್ದಾರೆ. ಜೂನ್ 18ರಂದು ಕರು ಜನಿಸಿದೆ ಎಂದು ಹಸುವಿನ … Continued

ವೀಡಿಯೊ | ಪರೀಕ್ಷೆ ಸಮಯದಲ್ಲಿ ಸ್ಫೋಟಗೊಂಡು ಬೆಂಕಿ ಉಂಡೆಯಾದ ಸ್ಪೇಸ್‌ ಎಕ್ಸ್ ನ ಸ್ಟಾರ್‌ ಶಿಪ್ ಬಾಹ್ಯಾಕಾಶ ನೌಕೆ-ವೀಕ್ಷಿಸಿ

ಗುರುವಾರ ಟೆಕ್ಸಾಸ್‌ನ ಮ್ಯಾಸ್ಸೆಯಲ್ಲಿರುವ ಎಲೋನ್ ಮಸ್ಕ್‌ ಅವರರ ಸ್ಪೇಸ್‌ಎಕ್ಸ್ ಪರೀಕ್ಷಾ ಸ್ಥಳದಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಹೀಗಾಗಿ ಕಂಪನಿಯ ಮುಂದಿನ ಸ್ಟಾರ್‌ಶಿಪ್ ಉಡಾವಣೆಗೆ ಸಿದ್ಧತೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದ ಪ್ರಕಾರ, ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್ ಸ್ಥಿರ ಅಗ್ನಿ ಪರೀಕ್ಷೆಯ ಸಮಯದಲ್ಲಿ ಬೃಹತ್‌ ಸ್ಫೋಟದಲ್ಲಿ ಕೊನೆಗೊಂಡಿದೆ. ಬಾಹ್ಯಾಕಾಶ ನೌಕೆಯು ಸ್ಥಿರವಾಗಿದ್ದಾಗ … Continued

‘ನೀವು ಅತ್ಯುತ್ತಮ, ನಾನು ನಿಮ್ಮಂತಾಗಲು ಪ್ರಯತ್ನಿಸುತ್ತಿದ್ದೇನೆ’ : ಜಿ7ನಲ್ಲಿ ಪ್ರಧಾನಿ ಮೋದಿಗೆ ಹೇಳಿದ ಇಟಲಿ ಪ್ರಧಾನಿ ಮೆಲೋನಿ-ವೀಡಿಯೊ ವೈರಲ್‌

ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಭೇಟಿಯಾದರು. ಇಬ್ಬರೂ ನಾಯಕರು ಪರಸ್ಪರ ಹಸ್ತಲಾಘವ ಮಾಡಿದ ನಂತರ ಪ್ರಧಾನಿ ಮೋದಿ ಅವರು “ಇಟಲಿಯೊಂದಿಗಿನ ಭಾರತದ ಸ್ನೇಹವು ಮತ್ತಷ್ಟು ಬಲಗೊಳ್ಳುತ್ತದೆ” ಎಂದು ಹೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಇಬ್ಬರು ನಾಯಕರು ಭೇಟಿಯಾಗಿ ಪರಸ್ಪರ ಕೈಕುಲುಕುತ್ತ … Continued