ನ್ಯಾಯಮೂರ್ತಿಗಳ ಮನೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆ ಆರೋಪ : ಆಂತರಿಕ ತನಿಖೆಗೆ ಮುಂದಾದ ಸುಪ್ರೀಂ ಕೋರ್ಟ್‌

ನವದೆಹಲಿ: ದೆಹಲಿ ಹೈಕೋರ್ಟ್‌(Delhi High Court) ನ್ಯಾಯಮೂರ್ತಿ ಯಶವಂತ ವರ್ಮಾ(Yashwant Verma) ಅವರ ನಿವಾಸದಲ್ಲಿ ಸಂಭವಿಸಿದ ಬೆಂಕಿ ಅವಘಡದ ವೇಳೆ ಅವರ ಅಧಿಕೃತ ನಿವಾಸದಲ್ಲಿ ಹಣದ ರಾಶಿಯೇ ಪತ್ತೆಯಾಗಿದೆ. ಅಧಿಕೃತ ಬಂಗಲೆಯಲ್ಲಿ ಲೆಕ್ಕಕ್ಕೆ ಸಿಗದ ಹಣದ ರಾಶಿ ಪತ್ತೆಯಾದ ನಂತರ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶ್ವಂತ ವರ್ಮಾ ಅವರು ಈಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ದೆಹಲಿ ಹೈಕೋರ್ಟ್ … Continued

ಸರಕು ಹಡಗು -ತೈಲ ಟ್ಯಾಂಕರ್‌ ಹಡಗು ಡಿಕ್ಕಿ ; ಮತ್ತೆ ನಿಜವಾದ ‘ಆಧುನಿಕ ನಾಸ್ಟ್ರಾಡಾಮಸ್’ ಭವಿಷ್ಯವಾಣಿ : ಟ್ರಂಪ್‌ ಹತ್ಯೆ ಯತ್ನದ ಬಗ್ಗೆ ಹೇಳಿದ್ದ ಈತನಿಗಿದೆ ಭಾರತದ ನಂಟು…!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ಪ್ರಯತ್ನವನ್ನು ಮೊದಲೇ ಊಹಿಸಿದ್ದ ಬ್ರಿಟನ್‌ನ ಅತೀಂದ್ರಿಯ ವ್ಯಕ್ತಿಯೊಬ್ಬರು ಮತ್ತೊಮ್ಮೆ ಭಯಾನಕ ಭವಿಷ್ಯವಾಣಿಯೊಂದರ ಮೂಲಕ ಗಮನ ಸೆಳೆದಿದ್ದು, ಅದು ಈಗ ನಿಜವಾಗಿದೆ. “ನ್ಯೂ ನಾಸ್ಟ್ರಾಡಾಮಸ್” ಅಥವಾ “ಪ್ರೊಫೆಟ್ ಆಫ್ ಡೂಮ್” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕ್ರೇಗ್ ಹ್ಯಾಮಿಲ್ಟನ್-ಪಾರ್ಕರ್, ಇಂಗ್ಲೆಂಡ್‌ನಲ್ಲಿ ಸರಕು ಹಡಗು ಡಿಕ್ಕಿ ಸಂಭವಿಸುವ ಕೆಲವೇ ದಿನಗಳ ಮೊದಲು … Continued

ಬಾಂಗ್ಲಾದೇಶ ಸೇನಾ ಮುಖ್ಯಸ್ಥರ ಪದಚ್ಯುತಿಗೆ ಪಾಕಿಸ್ತಾನದಿಂದ ಯತ್ನ : ದಂಗೆ ವಿಫಲಗೊಳಿಸಿ ಸೇನಾ ಮುಖ್ಯಸ್ಥರನ್ನು ಕಾಪಾಡಿದ ಭಾರತ…!

ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಅವರನ್ನು ಪದಚ್ಯತಗೊಳಿಸುವ ಪಾಕಿಸ್ತಾನದ ಪ್ರಯತ್ನಕ್ಕೆ ಭಾರತ ಬಲವಾದ ಪೆಟ್ಟು ನೀಡಿದೆ…! ಜನರಲ್ ವಾಕರ್-ಉಜ್-ಝಮಾನ್ ಅವರನ್ನು ಪದಚ್ಯುತಗೊಳಿಸಲು ಪಾಕಿಸ್ತಾನ ಪ್ರೇರಿತ ಇತ್ತೀಚಿನ ದಂಗೆಯ ಪ್ರಯತ್ನವನ್ನು ಭಾರತದ ನೆರವಿನೊಂದಿಗೆ ಯಶಸ್ವಿಯಾಗಿ ವಿಫಲಗೊಳಿಸಲಾಗಿದೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಆರಂಭಿಸಿದ ಈ ಸಂಚಿನ ಪ್ರಕಾರ, ಜನರಲ್ ವಾಕರ್-ಉಜ್-ಝಮಾನ್ ಅವರ ಬದಲಿಗೆ ಜಮಾತ್-ಎ-ಇಸ್ಲಾಮಿಗೆ ನಿಕಟವಾಗಿರುವ … Continued

ಸ್ಟಾರ್‌ ಲಿಂಕ್ ಇಂಟರ್ನೆಟ್ ಭಾರತಕ್ಕೆ ತರಲು ಸ್ಪೇಸ್‌ ಎಕ್ಸ್‌ ಜೊತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡ ರಿಲಯನ್ಸ್ ಜಿಯೋ, ಏರ್‌ ಟೆಲ್

ನವದೆಹಲಿ: ರಿಲಯನ್ಸ್-ಮಾಲೀಕತ್ವದ ಟೆಲಿಕಾಂ ಕಂಪನಿ ಜಿಯೋ ಭಾರತದಲ್ಲಿ ಸ್ಟಾರ್‌ಲಿಂಕ್‌ನ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನೀಡಲು ಅಮೆರಿಕ ಮೂಲದ ಸ್ಪೇಸ್‌ಎಕ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ ಎಂದು ಬುಧವಾರ (ಮಾರ್ಚ್ 12) ಪ್ರಕಟಿಸಿದೆ. ಭಾರತದಲ್ಲಿನ ತನ್ನ ಗ್ರಾಹಕರಿಗೆ ಸ್ಟಾರ್‌ಲಿಂಕ್‌ನ ಹೈ-ಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ತರಲು ಎಲೋನ್ ಮಸ್ಕ್ ಸ್ಥಾಪಿಸಿದ ಸ್ಪೇಸ್‌ಎಕ್ಸ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಭಾರ್ತಿ ಏರ್‌ಟೆಲ್ ಪ್ರಕಟಿಸಿದ ಒಂದು … Continued

ಫೈನಲ್‌ನಲ್ಲಿ ನ್ಯೂಜಿಲೆಂಡ್ ಸೋಲಿಸಿ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ

ದುಬೈ : ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಬೀಗಿದೆ. ರೋಚಕ ಪಂದ್ಯದಲ್ಲಿ ಕಿವೀಸ್ ತಂಡವನ್ನು 4 ವಿಕೆಟ್​ಗಳಿಂದ ಮಣಿಸಿದ ಟೀಂ ಇಂಡಿಯಾ ತಂಡವು ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್‌ ಗೆದ್ದ … Continued

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹಿಂದೂ ದೇವಾಲಯಕ್ಕೆ ಹಾನಿ, ಭಾರತ ವಿರೋಧಿ ಬರಹ ಗೀಚಿ ವಿರೂಪ

ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾದ ಬಾಪ್ಸ್‌ (BAPS) ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಭಾರತ ವಿರೋಧಿ ಬರಹಗಳನ್ನು ಬರೆದು, ಮಂದಿರಕ್ಕೆ ಹಾನಿ ಮಾಡಿದ ಘಟನೆ ಭಾನುವಾರ ನಡೆದಿದೆ. ಇದು ಅಮೆರಿಕದಲ್ಲಿ ಹಿಂದೂ ಸಮುದಾಯದ ವಿರುದ್ಧ ದ್ವೇಷದ ಅಪರಾಧಗಳ ಮತ್ತೊಂದು ಉದಾಹರಣೆಯಾಗಿದೆ. ಕ್ಯಾಲಿಫೋರ್ನಿಯಾದ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ ದೇವಾಲಯಕ್ಕೆ ಹಾನಿ ಮಾಡಲಾಗಿದೆ. ಬೋಚಸನ್ವಾಸಿ … Continued

ಚಾಂಪಿಯನ್ಸ್‌ ಟ್ರೋಫಿ | ರಂಜಾನ್ ಉಪವಾಸದ ವೇಳೆ ಸೆಮಿಫೈನಲ್ ಪಂದ್ಯದಲ್ಲಿ ಎನರ್ಜಿ ಡ್ರಿಂಕ್ ಕುಡಿದಿದ್ದಕ್ಕೆ ಕ್ರಿಕೆಟಿಗ ಶಮಿಯನ್ನು ಕ್ರಿಮಿನಲ್ ಎಂದ ಮುಸ್ಲಿಂ ಧರ್ಮಗುರು

ನವದೆಹಲಿ : ಮಂಗಳವಾರ ಆಸ್ಟ್ರೇಲಿಯಾ ವಿರುದ್ಧದ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಉಪವಾಸ ಮಾಡದೇ ಇದ್ದುದಕ್ಕಾಗಿ ಭಾರತದ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮೊಹಮ್ಮದ್ ಶಮಿ ಅವರನ್ನು ಮುಸ್ಲಿಂ ಧರ್ಮಗುರು ಟೀಕಿಸಿದ್ದಾರೆ. ಮುಸ್ಲಿಮರು ಆಚರಿಸುವ ಉಪವಾಸದ ಅವಧಿಯಲ್ಲಿ ನಡೆಯುತ್ತಿರುವ ಪವಿತ್ರ ತಿಂಗಳ ರಂಜಾನ್‌ನಲ್ಲಿ ಪಂದ್ಯ ನಡೆಯಿತು. ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಶಮಿಯನ್ನು “ಅಪರಾಧಿ” ಎಂದು … Continued

ಏಪ್ರಿಲ್ 2 ರಿಂದ ಭಾರತ, ಚೀನಾ ಸರಕುಗಳ ಮೇಲೆ ಪ್ರತಿ ಸುಂಕ ; ಅಮೆರಿಕ ಅಧ್ಯಕ್ಷ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಅಮೆರಿಕನ್ನರಿಗೆ ಅನ್ಯಾಯವಾಗುವ ವ್ಯಾಪಾರ ನೀತಿಗಳನ್ನು ಜಾರಿಗೆ ತಂದಿದ್ದಕ್ಕಾಗಿ” ಭಾರತ ಸೇರಿದಂತೆ ಅಮೆರಿಕದ ಬಹುತೇಕ ವ್ಯಾಪಾರ ಪಾಲುದಾರರ ಮೇಲೆ ಏಪ್ರಿಲ್ 2 ರಿಂದ ಸುಂಕವನ್ನು ವಿಧಿಸುವುದಾಗಿ ಹೇಳಿದ್ದಾರೆ. ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಆಮದುಗಳ ಮೇಲಿನ ಟ್ರಂಪ್‌ ಅವರು ಹೊಸದಾಗಿ ವಿಧಿಸಿರುವ 25% ಸುಂಕಗಳು ಜಾರಿಗೆ ಬಂದ … Continued

ಚಾಂಪಿಯನ್ಸ್ ಟ್ರೋಫಿ 2025 : ಆತಿಥೇಯ ಪಾಕಿಸ್ತಾನ ಟೂರ್ನಿಯಿಂದ ಹೊರಕ್ಕೆ ; ಸೆಮಿಫೈನಲ್‌ ಪ್ರವೇಶಿಸಿದ ಭಾರತ, ನ್ಯೂಜಿಲೆಂಡ್

ನವದೆಹಲಿ: ಸೋಮವಾರ (ಫೆಬ್ರವರಿ 24) ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಬಾಂಗ್ಲಾದೇಶವನ್ನು 5 ವಿಕೆಟ್‌ಗಳಿಂದ ಸೋಲಿಸಿದ ನಂತರ ಭಾರತವು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಸೆಮಿಫೈನಲ್‌ಗೆ ಪ್ರವೇಶಿಸಿದೆ ಮತ್ತು ಹಾಲಿ ಚಾಂಪಿಯನ್‌ ಪಾಕಿಸ್ತಾನವು ಟೂರ್ನಿಯಿಂದ ಹೊರಬಿದ್ದಿದೆ. 29 ವರ್ಷಗಳ ನಂತರ ತವರಿನಲ್ಲಿ ನಡೆದ ಮೊದಲ ಐಸಿಸಿ (ICC) ಟೂರ್ನಮೆಂಟ್‌ನಲ್ಲಿ ಹಾಲಿ ಚಾಂಪಿಯನ್‌ ಪಾಕಿಸ್ತಾನವು … Continued

ವೀಡಿಯೊ | ಸ್ಟೇಡಿಯಂನಲ್ಲಿ ಕುಳಿತು 22 ಪಂಡಿತರು ʼಮಾಟಮಂತ್ರʼ ಮಾಡಿದ್ದಕ್ಕೆ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಸೋಲಾಯ್ತಂತೆ ; ಹೀಗೆಂದ ಪಾಕ್‌ ಮಾಧ್ಯಮ-ವೀಕ್ಷಿಸಿ

ಹೈ-ವೋಲ್ಟೇಜ್ ಚಾಂಪಿಯನ್ಸ್ ಟ್ರೋಫಿ 2025 ಲೀಗ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡವು ಸೋಲನುಭವಿಸಿದ ನಂತರ ತಂಡದ ಅಭಿಮಾನಿಗಳು ಮತ್ತು ಮಾಧ್ಯಮಗಳು ಸೇರಿದಂತೆ ಬೆಂಬಲಿಗರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವೈರಲ್ ಆಗಿರುವ ಪಾಕಿಸ್ತಾನಿ ಟಿವಿ ಚರ್ಚೆಯ ವಿಲಕ್ಷಣ ಹಾಗೂ ಹಾಸ್ಯಾಸ್ಪದ ಆರೋಪಗಳನ್ನೂ ಮಾಡಲಾಗಿದೆ. ಟಿವಿ ಚರ್ಚೆ ವೇಳೆ ಪ್ಯಾನೆಲಿಸ್ಟ್‌ಗಳಲ್ಲಿ ಒಬ್ಬರು ಭಾರತವು 22 ಪಂಡಿತರನ್ನು … Continued