ಪ್ರಧಾನಿ ಮೋದಿ ವಿಡಿಯೊ ವಿವಾದ: ಡೀಪ್‌ಫೇಕ್, ತಾಂತ್ರಿಕ ದೋಷಗಳಿಗೆ ಮೆಟಾ, ಜುಕರ್‌ಬರ್ಗ್ ಕ್ಷಮೆಯಾಚನೆ

ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳು (Child Sexual Abuse Material – CSAM), ಡೀಪ್‌ಫೇಕ್ (Deepfake) ವಿಷಯಗಳ ಪ್ರಸಾರ ಹಾಗೂ ಪ್ಲಾಟ್‌ಫಾರ್ಮ್‌ ನಿರ್ವಹಣೆಯಲ್ಲಿನ ದೋಷಗಳ ಕುರಿತು ಮೆಟಾ (Meta) ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ಬುಧವಾರ ತಿಳಿಸಿವೆ. ಪ್ರಧಾನಮಂತ್ರಿ ನರೇಂದ್ರ … Continued

‘ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು’ : ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದ 15 ವರ್ಷದ ಬಾಲಕಿಯ ಕ್ಷಮೆಯಾಚನೆ

ನವದೆಹಲಿ: ಜುಲೈ 23ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ (Cockroach Janta Party – CJP) ಆಯೋಜಿಸಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿರುವ 15 ವರ್ಷದ ಬಾಲಕಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾಳೆ. ಆಕೆಯ ಕ್ಷಮೆಯಾಚನೆ ವಿಡಿಯೊ ಶುಕ್ರವಾರ … Continued

ದೈವಕ್ಕೆ ಅಪಮಾನ ; ಮೈಸೂರು ಚಾಮುಂಡೇಶ್ವರಿ ದೇವಿಯ ಮುಂದೆ ಕ್ಷಮೆಯಾಚಿಸಿದ ನಟ ರಣವೀರ ಸಿಂಗ್

ಮೈಸೂರು:  ಬಾಲಿವುಡ್‌ ನಟ ರಣವೀರ ಸಿಂಗ್ ಅವರು ಮಂಗಳವಾರ (ಮೇ 26) ಬೆಳಿಗ್ಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ‘ಕಾಂತಾರ’ ಚಿತ್ರದ ದೈವದ ದೃಶ್ಯವನ್ನು ಅಣಕಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಅವರುಬಚಾಮುಂಡೇಶ್ವರಿ ದೇವಿಯ ಎದುರು ಕ್ಷಮೆಯಾಚಿಸಿದ್ದಾರೆ. 2025ರ ನವೆಂಬರ್ 30 ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ … Continued

ದಾಳಿ ಮಾಡಿದ್ದಕ್ಕೆ ನೆರೆಯ ರಾಷ್ಟ್ರಗಳ ಕ್ಷಮೆ ಕೇಳಿದ ಇರಾನ್ ಅಧ್ಯಕ್ಷ ; ಆದರೆ ಒಂದು ಷರತ್ತು….

ಇಸ್ರೇಲ್ ಮತ್ತು ಅಮೆರಿಕದ ನಡುವಿನ ಯುದ್ಧದ ಸಮಯದಲ್ಲಿ ನಡೆಸಲಾದ ದಾಳಿಗಳಿಗಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ತಮ್ಮ ನೆರೆಹೊರೆಯ ರಾಷ್ಟ್ರಗಳ ಕ್ಷಮೆಯಾಚಿಸಿದ್ದಾರೆ. “ಅವರು ಮೊದಲು ದಾಳಿ ಮಾಡದ ಹೊರತು ಅಥವಾ ಅವರ ನೆಲದಿಂದ ದಾಳಿ ನಡೆಯದ ಹೊರತು ಇರಾನ್‌ ಯಾವುದೇ ದಾಳಿ ನಡೆಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇರಾನ್ ಸರ್ಕಾರಿ ಸ್ವಾಮ್ಯದ ಟಿವಿಯಲ್ಲಿ ಮಾತನಾಡಿದ … Continued

7 ದಿನದಲ್ಲಿ ಅಫಿಡವಿಟ್ ಕೊಡಿ ಇಲ್ಲವೇ ಕ್ಷಮೆಯಾಚಿಸಿ :’ಮತಗಳ್ಳತನ’ ಆರೋಪಕ್ಕೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗದ ಸೂಚನೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ “ಮತಗಳ್ಳತನ” ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು ಭಾನುವಾರ ಅವರಿಗೆ ಏಳು ದಿನಗಳ ಗಡುವು ನೀಡಿದ್ದು, ಅಫಿಡವಿಟ್‌ ನೀಡಬೇಕು ಇಲ್ಲದಿದ್ದರೆ ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದೆ. ಅವರು “ಅಫಿಡವಿಟ್ ನೀಡಬೇಕು ಅಥವಾ ದೇಶಕ್ಕೆ ಕ್ಷಮೆಯಾಚಿಸಬೇಕು. ಮೂರನೇ ಆಯ್ಕೆ ಇಲ್ಲ. 7 ದಿನಗಳಲ್ಲಿ ಅಫಿಡವಿಟ್ ಸ್ವೀಕರಿಸದಿದ್ದರೆ, ಈ ಎಲ್ಲಾ ಆರೋಪಗಳು … Continued

ಸಿಎಂ ಸಿದ್ದರಾಮಯ್ಯ ಫೇಸ್‌ಬುಕ್‌ ಪೋಸ್ಟ್‌ ತಪ್ಪು ಅನುವಾದ ; ಕ್ಷಮೆಯಾಚಿಸಿದ ಮೆಟಾ

ಬೆಂಗಳೂರು: ನಟಿ ಬಿ. ಸರೋಜಾದೇವಿ ಅವರಿಗೆ ಕನ್ನಡದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದ ಫೇಸ್‌ಬುಕ್ ಪೋಸ್ಟ್‌ನ ಆಟೋ ಟ್ರಾನ್ಸ್‌ಲೇಷನ್‌ ಅವಾಂತರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ‌ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮೆಟಾದವರು ತಮ್ಮ ತಪ್ಪಿಗೆ ಕ್ಷಮೆ ಕೇಳಿ, ದೋಷವನ್ನು ಸರಿಪಡಿಸುವುದಾಗಿ ಇ-ಮೇಲ್‌ ಮೂಲಕ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. … Continued

ಟ್ರಂಪ್ ಪಾಕಿಸ್ತಾನಕ್ಕೆ ಭೇಟಿ ನೀಡಲ್ಲ ಎಂದು ಶ್ವೇತಭವನ ಸ್ಪಷ್ಟನೆ ; ಸುಳ್ಳು ಸುದ್ದಿ ಪ್ರಸಾರ ಮಾಡಿ ಕ್ಷಮೆಯಾಚಿಸಿದ ಪಾಕ್‌ ಸುದ್ದಿ ವಾಹಿನಿಗಳು…!

ನವದೆಹಲಿ: ಸೆಪ್ಟೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ ಎಂಬ ಸುಳ್ಳು ಸುದ್ದಿಯನ್ನು ಹರಡಿದ್ದಕ್ಕಾಗಿ ಪಾಕಿಸ್ತಾನದ ಟಿವಿ ಮಾಧ್ಯಮಗಳು ಜಾಗತಿಕವಾಗಿ ಮುಜುಗರ ಎದುರಿಸಬೇಕಾಯಿತು. ನಂತರ ಪಾಕಿಸ್ತಾನದ ಎರಡು ಪ್ರಮುಖ ಟಿವಿ ಸುದ್ದಿ ವಾಹಿನಿಗಳು ವರದಿಗಳನ್ನು ಹಿಂತೆಗೆದುಕೊಂಡವು, ಅವುಗಳಲ್ಲಿ ಒಂದು ಟಿವಿ ಸುದ್ದಿವಾಹಿನಿ ಕ್ಷಮೆಯಾಚಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸಮಾ ಟಿವಿ, ಜಿಯೋ … Continued

ತಾನು ಮಾಡಿದ ತಪ್ಪಿಗೆ ಭಾರತದ ಕ್ಷಮೆಯಾಚಿಸಿದ ಇಸ್ರೇಲ್‌

ನವದೆಹಲಿ: ಮೊದಲ ಬಾರಿಗೆ, ಇಸ್ರೇಲ್ ರಕ್ಷಣಾ ಪಡೆಗಳು ಭಾರತದ ಅಂತಾರಾಷ್ಟ್ರೀಯ ಗಡಿಗಳ ತಪ್ಪಾದ ನಕ್ಷೆಯನ್ನು ಪ್ರಕಟಿಸಿದ ನಂತರ ಇಸ್ರೇಲ್‌ ಭಾರತದ ಕ್ಷಮೆ ಕೋರಿದೆ. ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿದೆ ಎಂದು ತಪ್ಪಾಗಿ ತೋರಿಸಲಾಗಿದೆ. X ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ. ಐಡಿಎಫ್ ನಕ್ಷೆಯು “ಗಡಿಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ” ಎಂದು ಒಪ್ಪಿಕೊಂಡಿದೆ. ಆದರೆ ಅದು … Continued

ವೀಡಿಯೊ | ಬೆಂಗಳೂರು : ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಬಿಹಾರದ ಮಹಿಳೆ ಬಂಧನ ; ಪ್ರಕರಣ ದಾಖಲಾದ ನಂತ್ರ ಚಾಲಕನ ಕಾಲಿಗೆ ಬಿದ್ದು ಕ್ಷಮೆಯಾಚನೆ..!

ಬೆಂಗಳೂರು: ಬೆಂಗಳೂರಿನಲ್ಲಿ ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಭಾನುವಾರ ಬಂಧಿಸಲಾಗಿದೆ. ಚಾಲಕ ಲೋಕೇಶ ಎಂಬವರಿಗೆ ಚಪ್ಪಲಿಯಿಂದ ಹೊಡೆಯುವವೀಡಿಯೊ ವೈರಲ್ ಆದ ನಂತರ ಪಂಖುರಿ ಮಿಶ್ರಾ (28) ಎಂಬ ಮಹಿಳೆಯನ್ನು ಬಂಧಿಸಲಾಯಿತು. ಈಗ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬೆಳ್ಳಂದೂರು ನಿವಾಸಿ ಪಂಖುರಿ ತನ್ನ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಶನಿವಾರ … Continued

ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಕ್ಷಮೆಯಾಚಿಸಿದ ಮಧ್ಯಪ್ರದೇಶದ ಸಚಿವ

ನವದೆಹಲಿ: ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವರಾದ ಕುನ್ವರ್ ವಿಜಯ ಶಾ ಬುಧವಾರ (ಮೇ 14) ಕ್ಷಮೆಯಾಚಿಸಿದ್ದಾರೆ. ಬಿಜೆಪಿ ಸಚಿವ ವಿಜಯ ಶಾ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದು, “ನನ್ನ ಇತ್ತೀಚಿನ ಹೇಳಿಕೆಯಿಂದ ನನಗೆ ನಾಚಿಕೆ ಮತ್ತು ದುಃಖವಾಗಿದೆ, ಇದು ಪ್ರತಿಯೊಂದು ಸಮುದಾಯದ ಭಾವನೆಗಳಿಗೆ … Continued