₹9 ಕೋಟಿ ಚೆಕ್ ಬೌನ್ಸ್ ಪ್ರಕರಣ: ಬಾಲಿವುಡ್‌ ನಟ ರಾಜಪಾಲ್ ಯಾದವ್‌ಗೆ ಮೂರು ತಿಂಗಳ ಜೈಲು ಶಿಕ್ಷೆ

ನವದೆಹಲಿ: ಬಾಲಿವುಡ್‌ ನಟ ರಾಜಪಾಲ ಯಾದವ್ ಅವರ  ₹9 ಕೋಟಿ ಸಾಲಕ್ಕೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣಗಳಲ್ಲಿದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಏಳು ಪ್ರತ್ಯೇಕ ಪ್ರಕರಣಗಳಲ್ಲೂ ತಲಾ ಮೂರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ಈ ಆದೇಶವನ್ನು ಪ್ರಕಟಿಸಿದ್ದು, ಪ್ರತಿಯೊಂದು ಪ್ರಕರಣದಲ್ಲೂ ದೂರುದಾರರಿಗೆ ₹1.05 ಕೋಟಿ … Continued

ದೈವಕ್ಕೆ ಅಪಮಾನ ; ಮೈಸೂರು ಚಾಮುಂಡೇಶ್ವರಿ ದೇವಿಯ ಮುಂದೆ ಕ್ಷಮೆಯಾಚಿಸಿದ ನಟ ರಣವೀರ ಸಿಂಗ್

ಮೈಸೂರು:  ಬಾಲಿವುಡ್‌ ನಟ ರಣವೀರ ಸಿಂಗ್ ಅವರು ಮಂಗಳವಾರ (ಮೇ 26) ಬೆಳಿಗ್ಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ‘ಕಾಂತಾರ’ ಚಿತ್ರದ ದೈವದ ದೃಶ್ಯವನ್ನು ಅಣಕಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಅವರುಬಚಾಮುಂಡೇಶ್ವರಿ ದೇವಿಯ ಎದುರು ಕ್ಷಮೆಯಾಚಿಸಿದ್ದಾರೆ. 2025ರ ನವೆಂಬರ್ 30 ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ … Continued

80 ವರ್ಷ, 20ಕ್ಕೂ ಹೆಚ್ಚು ಭಾಷೆಗಳು, 12000ಕ್ಕೂ ಹೆಚ್ಚು ಹಾಡುಗಳು…:’ಪ್ರೀತಿಯ ಭಾಷೆ’ಯಾಗಿದ್ದ ಆಶಾ ಭೋಂಸ್ಲೆ

ಮುಂಬೈ: ಚೇಷ್ಟೆಯ ಭಾವದಿಂದ  ವಿಷಾದದ ಭಾವಕ್ಕೆ ಕ್ಷಣಮಾತ್ರದಲ್ಲಿ ಹೊರಳಬಲ್ಲ, ಎಂಬತ್ತರ ಹರೆಯದಲ್ಲೂ ಇಪ್ಪತ್ತರ ತಾರುಣ್ಯದ ಕಂಠವನ್ನು ಉಳಿಸಿಕೊಂಡಿದ್ದ ಭಾರತೀಯ ಸಂಗೀತದ ಅಪ್ರತಿಮ ಗಾಯಕಿ ಆಶಾ ಭೋಂಸ್ಲೆ (92) ಭಾನುವಾರ ನಿಧನರಾದರು. 20 ಮತ್ತು 21ನೇ ಶತಮಾನದ ಭಾರತೀಯ ಚಿತ್ರಸಂಗೀತದ ಇತಿಹಾಸವನ್ನು ತನ್ನ ಧ್ವನಿಯ ಮೂಲಕ ದಾಖಲಿಸಿದ್ದ ಅವರು, ಏಪ್ರಿಲ್ 12ರಂದು ಭೌತಿಕ ಜಗತ್ತಿನಿಂದ ಮರೆಯಾದರು. ಹೃದಯ … Continued

ನಾಗ್ಪುರ : ಆರ್‌ಎಸ್‌ಎಸ್ ಸ್ಥಾಪಕ ಹೆಡ್ಗೇವಾರ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ ಬಾಲಿವುಡ್‌ ನಟ ರಣವೀರ ಸಿಂಗ್

ನಾಗ್ಪುರ: ಬಾಲಿವುಡ್‌ನ ಖ್ಯಾತ ನಟ ರಣವೀರ ಸಿಂಗ್ ಅವರು ಶುಕ್ರವಾರ ನಾಗ್ಪುರದ ರೇಶಿಂಬಾಗ್‌ನಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಪ್ರಮುಖ ಸ್ಥಳವಾದ ಹೆಡ್ಗೆವಾರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಇತ್ತೀಚಿನ ಚಿತ್ರ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ರಣವೀರ್ ಅವರ ಈ ಭೇಟಿ ಕುತೂಹಲ … Continued

ಕಾಂತಾರ ಮಿಮಿಕ್ರಿ ಪ್ರಕರಣ ; ನಟ ರಣವೀರ್‌ ಸಿಂಗ್‌ ಗೆ ಕರ್ನಾಟಕ ಹೈಕೋರ್ಟ್‌ ತರಾಟೆ

ಬೆಂಗಳೂರು : ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಕರ್ನಾಟಕ ಹೈಕೋರ್ಟ್ ಬಂಧನದಿಂದ ತಾತ್ಕಾಲಿಕ ಸಮಾಧಾನ ನೀಡಿದೆಯಾದರೂ, ಅವರ ವರ್ತನೆಯ ಬಗ್ಗೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, “ಸೆಲೆಬ್ರಿಟಿಯಾದ ತಕ್ಷಣ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡುವ ಹಕ್ಕು ಯಾರಿಗೂ ಇಲ್ಲ” ಎಂದು ಹೇಳಿದ್ದಾರೆ. ಕೋರ್ಟ್ … Continued

ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ವಾಟ್ಸಾಪ್ ನಲ್ಲಿ ಕೊಲೆ ಬೆದರಿಕೆ: ಕೋಟಿ ಕೋಟಿ ರೂಪಾಯಿಗೆ ಬೇಡಿಕೆ

ಮುಂಬೈ: ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ಅವರಿಗೆ ಬೆದರಿಕೆ ಸಂದೇಶವೊಂದು ಬಂದಿದ್ದು, ದುಷ್ಕರ್ಮಿಗಳು ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ಬೆನ್ನಲ್ಲೇ ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮಂಗಳವಾರ (ಫೆಬ್ರವರಿ 10) ರಣವೀರ್ ಸಿಂಗ್ ಅವರ ವಾಟ್ಸಾಪ್‌ಗೆ ವಾಯ್ಸ್ ನೋಟ್ (ಧ್ವನಿ ಸಂದೇಶ) ಮೂಲಕ ಈ … Continued

ಮುಂಬೈ: ನಿರ್ದೇಶಕ ರೋಹಿತ್ ಶೆಟ್ಟಿ ನಿವಾಸದ ಹೊರಗೆ ಗುಂಡಿನ ದಾಳಿ

ಮುಂಬೈ : ಮುಂಬೈನ ಜುಹು ಪ್ರದೇಶದಲ್ಲಿರುವ ಖ್ಯಾತ ಚಲನಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆಯ ಹೊರಗೆ ಅಪರಿಚಿತ ದುಷ್ಕರ್ಮಿಗಳು ಐದು ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.  ಈ ಘಟನೆಯ ನಂತರ ಅವರ ನಿವಾಸದ ಸುತ್ತ ಭಾರಿ ಪೊಲೀಸ್ ಭದ್ರತೆ  ನಿಯೋಜಿಸಲಾಗಿದೆ. ಮುಂಬೈ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಎಲ್ಲ … Continued

ಬಾಲಿವುಡ್ ‘ಹೀ-ಮ್ಯಾನ್’, ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ

ಮುಂಬೈ : ಬಾಲಿವುಡ್‌ ಹೀ ಮ್ಯಾನ್‌ ಎಂದೇ ಖ್ಯಾತಿ ಪಡೆದ, ಹಿರಿಯ ನಟ ಧರ್ಮೇಂದ್ರ (Dharmendra) ಸೋಮವಾರ (ನವೆಂಬರ್‌ 24) ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಧರ್ಮೇಂದ್ರ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈಯ ಬ್ರೀಜ್‌ ಕ್ಯಾಂಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡ ಅವರನ್ನು ಡಿಸ್‌ಚಾರ್ಚ್‌ ಮಾಡಲಾಗಿತ್ತು. ಧರ್ಮೇಂದ್ರ ಅವರು ಇಬ್ಬರು ಪತ್ನಿಯರಾದ ಪ್ರಕಾಶ್ ಕೌರ್ … Continued

ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಬಾಲಿವುಡ್‌ ನಟ ಗೋವಿಂದ ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್‌ನ ಹಿರಿಯ ನಟ ಗೋವಿಂದ ಅವರು ಮಂಗಳವಾರ ರಾತ್ರಿ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ನಂತರ, ಮುಂಬೈನ ಜುಹುವಿನಲ್ಲಿರುವ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 61 ವರ್ಷದ ನಟ ಗೋವಿಂದ ಅವರು ಗೊಂದಲ (disorientation)ದಿಂದಾಗಿ ತಡರಾತ್ರಿ ತಮ್ಮ ಮನೆಯಲ್ಲಿ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಅವರ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್ ಬಿಂದಾಲ್ ಅವರು ಎನ್‌ಡಿಟಿವಿಗೆ … Continued

ಹಿಂದಿ ಸಿನೆಮಾದ ಹಿರಿಯ ನಟ ಪ್ರೇಮ್ ಚೋಪ್ರಾ ಆಸ್ಪತ್ರೆಗೆ ದಾಖಲು

ಮುಂಬೈ: ಹಿಂದಿ ಸಿನೆಮಾದ ಹಿರಿಯ ನಟ ಪ್ರೇಮ ಚೋಪ್ರಾ ಅವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎದೆಯ ಭಾಗದಲ್ಲಿ ಉಸಿರಾಟದ ಸಮಸ್ಯೆ (Chest Congestion) ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕಳೆದ ಮೂರು ದಿನಗಳಿಂದ (ನವೆಂಬರ್ 8) ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ನಟ ಪ್ರೇಮ್ ಚೋಪ್ರಾ ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಮೂರರಿಂದ ನಾಲ್ಕು ದಿನಗಳಲ್ಲಿ … Continued