ರಣದೀಪ ಹೂಡಾ ನಿರ್ದೇಶನದ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನೆಮಾಕ್ಕೆ ನೇತಾಜಿ ಸುಭಾಷಚಂದ್ರ ಬೋಸ್ ಮೊಮ್ಮಗ ಟೀಕೆ

ನವದೆಹಲಿ : ರಣದೀಪ್ ಹೂಡಾ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿರುವ ಸ್ವಾತಂತ್ರ್ಯ ವೀರ ಸಾವರ್ಕರ ಚಿತ್ರದ ಟ್ರೈಲರ್ ಬಿಡುಗಡೆಯಾದ ಒಂದು ದಿನದ ನಂತರ, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರಕುಮಾರ ಬೋಸ್ ಚಲನಚಿತ್ರದ ಬಗ್ಗೆ ಕೆಲವೊಂದು ವಿಷಯಗಳ ಬಗ್ಗೆ ಆಕ್ಷೇಪ ಮಾಡಿದ್ದಾರೆ.
ಚಿತ್ರದ ಮೂರು ನಿಮಿಷಗಳ ಟ್ರೇಲರ್‌ನಲ್ಲಿ ಸಾವರ್ಕರ್ ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ವ್ಯಕ್ತಿಗಳಾದ ಎಂ.ಕೆ. ಗಾಂಧಿ, ಬೋಸ್, ಬಾಲಗಂಗಾಧರ ತಿಲಕ ಸೇರಿದಂತೆ ಇತರರು ವೀರ ಸಾವರ್ಕರ ಅವರ ಜೀವನ ಪಯಣವನ್ನು ವಿವರಿಸುತ್ತಾರೆ.
X ನಲ್ಲಿ ಚಂದ್ರಕುಮಾರ ಬೋಸ್ ಅವರು ವೀರ ಸಾವರ್ಕರ ಅವರ ಮೇಲೆ ಚಲನಚಿತ್ರವನ್ನು ನಿರ್ಮಿಸುತ್ತಿರುವುದಕ್ಕೆ ನಿರ್ದೇಶಕರನ್ನು ಶ್ಲಾಘಿಸಿದರು ಆದರೆ ವೀರ ಸಾವರ್ಕರ್ ಅವರ ನೈಜ ವ್ಯಕ್ತಿತ್ವವನ್ನು ಬಿಂಬಿಸುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಹೆಸರನ್ನು ಸಾವರ್ಕರ ಅವರೊಂದಿಗೆ ನಂಟು ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಹಾಗೂ ಅದರಿಂದ ದೂರವಿರುವಂತೆ ರಣದೀಪ ಹೂಡಾ ಅವರಿಗೆ ಸೂಚಿಸಿದ್ದಾರೆ.
ನೇತಾಜಿ ಅವರು ಅಂತರ್ಗತ ಜಾತ್ಯತೀತ ನಾಯಕ ಮತ್ತು ದೇಶಭಕ್ತರ ದೇಶಭಕ್ತರಾಗಿದ್ದರು” ಎಂದು ಚಂದ್ರಕುಮಾರ ಬೋಸ್ ಬರೆದಿದ್ದಾರೆ.
ನೇತಾಜಿ ಬ್ರಿಟಿಷ್ ಸಾಮ್ರಾಜ್ಯಶಾಹಿಯೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲು ಹೋಗಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಸಾವರ್ಕರ ಅವರು ಕ್ಷಮಾದಾನಕ್ಕೆ ಅರ್ಜಿ ಬರೆದಿದ್ದರು ಮತ್ತು ಬ್ರಿಟಿಷ್ ವಸಾಹತುಶಾಹಿಗಳಿಂದ ಸ್ಟೈಫಂಡ್ ಸ್ವೀಕರಿಸುವ ಮೂಲಕ ವ್ಯಾಪಕವಾಗಿ ಹೆಸರುವಾಸಿಯಾಗಿದ್ದಾರೆ. ಸುಭಾಷಚಂದ್ರ ಬೋಸ್‌ ಅವರು ಸಾವರ್ಕರ್ ಅವರನ್ನು ಜಿನ್ನಾ ಅವರೊಂದಿಗೆ ಸಮೀಕರಿಸಿದ್ದರು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಬಿಎಸ್‌ಇ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸ್ಟಂಪ್ಡ್‌ ಔಟ್‌ ಮಾಡಿದ ಬ್ರೋಕರ್‌ : ವೀಕ್ಷಿಸಿ

ಲೆಜೆಂಡ್ ಸ್ಟುಡಿಯೋಸ್ ಮತ್ತು ಅವಕ್ ಫಿಲ್ಮ್ಸ್ ಸಹಯೋಗದಲ್ಲಿ ಆನಂದ ಪಂಡಿತ್ ಮೋಷನ್ ಪಿಕ್ಚರ್ಸ್ ಮತ್ತು ರಣದೀಪ ಹೂಡಾ ಫಿಲ್ಮ್ಸ್ ನಿರ್ಮಿಸಿರುವ ಸ್ವಾತಂತ್ರ್ಯ ವೀರ ಸಾವರ್ಕರ ಮಾರ್ಚ್ 22 ರಂದು ತೆರೆಗೆ ಬರಲಿದೆ.
ಈ ಹಿಂದೆ ಸಿನಿಮಾದ ಬಗ್ಗೆ ಮಾತನಾಡಿದ ಹೂಡಾ ಇದು ಪ್ರಚಾರದ ಸಿನಿಮಾ ಅಲ್ಲ ಎಂದು ಹೇಳಿಕೊಂಡಿದ್ದರು. “ಸಾವರ್ಕರ ವಿರುದ್ಧ ದಶಕಗಳಿಂದ ನಡೆಯುತ್ತಿರುವ ಎಲ್ಲಾ ಅಪಪ್ರಚಾರಗಳನ್ನು ಇದು (ಚಲನಚಿತ್ರ) ಎದುರಿಸಲಿದೆ. ಅವರು ‘ಮಾಫಿವೀರ’ (ಕ್ಷಮೆಯಾಚಿಸುವವರು) ಅಲ್ಲ, ಅವರು ಮಾತ್ರವಲ್ಲ, ಇನ್ನೂ ಅನೇಕರು ಸಹ ಆ ಸಮಯದಲ್ಲಿ ಕ್ಷಮಾದಾನ ಅರ್ಜಿಗಳನ್ನು ಬರೆದಿದ್ದಾರೆ. ಇದನ್ನು ಚಿತ್ರದಲ್ಲಿ ಬಹಳ ವಿಸ್ತಾರವಾಗಿ ತಿಳಿಸಲಾಗಿದೆ ಎಂದು ನಿರ್ದೇಶಕ-ನಟ ಮಿಡ್-ಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆಸ್ಪತ್ರೆಯಲ್ಲಿ ಎಡವಟ್ಟು : 4 ವರ್ಷದ ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಮಾಡುವುದರ ಬದಲು ನಾಲಿಗೆಗೆ ಆಪರೇಶನ್‌ ಮಾಡಿದ ವೈದ್ಯರು...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement