ಆಸ್ಪತ್ರೆಯಿಂದ ₹4 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಸಿಸಿಟಿವಿಯಲ್ಲಿ ಬಯಲಾಯ್ತು ‘ನಾಲ್ಕು ಕಾಲಿನ ಕಳ್ಳ’ನ ಕರಾಮತ್ತು !

ಮಂದಸೌರ್ : ಸರ್ಕಾರಿ ಆಸ್ಪತ್ರೆಯಿಂದ ಸುಮಾರು ₹4 ಲಕ್ಷ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ತಾವು ಹುಡುಕುತ್ತಿದ್ದ “ಕಳ್ಳ” ಮನುಷ್ಯನಲ್ಲ, ಬದಲಿಗೆ ಅಲೆಮಾರಿ ನಾಯಿಯೆಂಬುದು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ಪತ್ತೆಯಾಗಿದ್ದು, ಕ್ಷಣಕಾಲ ಪೊಲೀಸರೇ ದಂಗಾಗಿದ್ದಾರೆ. ಈ ವಿಚಿತ್ರ ಘಟನೆ ಮಧ್ಯಪ್ರದೇಶದ ಮಂದಸೌರ್ ಜಿಲ್ಲಾ ಆಸ್ಪತ್ರೆಯಲ್ಲಿ … Continued

ವಿದ್ಯಾರ್ಥಿನಿಯರಿಗೆ ಮೂತ್ರ ಬೆರೆಸಿದ ನೀರು ಕುಡಿಸಿದ ಸಹಪಾಠಿ ; ದೂರು ನೀಡಿದರೆ ‘ಬಾಯಿ ರುಚಿ ಕೆಟ್ಟಿದ್ರೆ ಚಾಕೊಲೇಟ್ ತಿನ್ನಿ’ ಎಂದ ಪ್ರಾಂಶುಪಾಲ

ಗುಣಾ: 5ನೇ ತರಗತಿಯ ವಿದ್ಯಾರ್ಥಿಯೊಬ್ಬ ನೀರಿನ ಬಾಟಲಿಗೆ ಮೂತ್ರ ಬೆರೆಸಿ ತನ್ನ ಇಬ್ಬರು ಸಹಪಾಠಿ ವಿದ್ಯಾರ್ಥಿನಿಯರಿಗೆ ಕುಡಿಸಿದ ಆರೋಪ ಮಧ್ಯಪ್ರದೇಶದ ಗುಣಾ ಜಿಲ್ಲೆಯ ಆರೋನ್ ಡೆವಲಪ್‌ಮೆಂಟ್‌ ಬ್ಲಾಕ್‌ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಕೇಳಿಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿಯರು ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದಾಗ, ಅವರು ಅಸಂವೇದನಾಶೀಲವಾಗಿ ಪ್ರತಿಕ್ರಿಯಿಸಿ, ಬಾಯಿ ಕೆಟ್ಟ ರುಚಿ ಬರುತ್ತಿದ್ದರೆ ₹10ರ ಚಾಕೊಲೇಟ್ … Continued

1917ರಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ₹35 ಸಾವಿರ ಸಾಲ ನೀಡಿದ್ದ ಮಧ್ಯಪ್ರದೇಶ ಕುಟುಂಬ :109 ವರ್ಷದ ಹಿಂದಿನ ಸಾಲಕ್ಕೆ ಬ್ರಿಟನ್‌ನಿಂದ ಬಂತು ಸ್ಪಂದನೆ !

ಸೀಹೋರ್: 109 ವರ್ಷಗಳ ಹಿಂದೆ ಬ್ರಿಟಿಷ್ ಸರ್ಕಾರದ ಇಂಡಿಯನ್ ವಾರ್ ಲೋನ್ ಯೋಜನೆಯಲ್ಲಿ ₹35,000 ಹೂಡಿಕೆ ಮಾಡಿದ್ದ ಕುಟುಂಬವೊಂದರ ಕೈಯಲ್ಲಿ ಆ ವ್ಯವಹಾರದ ಮೂಲ ಪ್ರಮಾಣಪತ್ರ ಇಂದಿಗೂ ಉಳಿದಿದೆ. ಆದರೆ ನಂತರದ ಆ ಹಣದ ವಿಚಾರ ಏನಾಯಿತು ಎಂಬುದು ಮಾತ್ರ ಇಂದಿಗೂ ನಿಗೂಢವಾಗಿದೆ. ಮಧ್ಯಪ್ರದೇಶದ ಸೀಹೋರ್ ನಿವಾಸಿ 63 ವರ್ಷದ ವಿವೇಕ ರುಥಿಯಾ ಅವರು ತಮ್ಮ … Continued

4 ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದ ತಂದೆ ವೃದ್ಧಾಶ್ರಮದಲ್ಲಿ ಸತ್ತಾಗ ಒಬ್ರೂ ಬರಲಿಲ್ಲ : ಮಕ್ಕಳಿಗೆ ಅಪ್ಪನ “ಡೆತ್‌ ಸರ್ಟಿಫಿಕೆಟ್‌ʼ ಮಾತ್ರ ಬೇಕಂತೆ…!

ಭೋಪಾಲ್ : ಪತ್ನಿಯನ್ನು ಕಳೆದುಕೊಂಡ ಬಳಿಕ ನಾಲ್ವರು ಮಕ್ಕಳನ್ನು ಏಕಾಂಗಿಯಾಗಿ ಸಾಕಿ-ಸಲಹಿ ಬೆಳೆಸಿದ ತಂದೆ. ಮಕ್ಕಳ ಬದುಕು ಕಟ್ಟಿಕೊಡಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು, ವಯಸ್ಸಾದ ಬಳಿಕ ಕುಟುಂಬದವರ ಸಹಾಯ-ಸಹಕಾರ ದೊರೆಯದೆ ವೃದ್ಧಾಶ್ರಮದ ಆಶ್ರಯ ಪಡೆಯಬೇಕಾಯಿತು. ಕೊನೆಗೆ 70ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದಾಗ, ಅವರ ಪಕ್ಕದಲ್ಲಿ ಒಬ್ಬ ಮಗನಾಗಲಿ, ಮಗಳಾಗಲಿ ಇರಲಿಲ್ಲ. ಸಾವಿನ ಬಳಿಕವೂ ಮೃತದೇಹ … Continued

ಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

ನವದೆಹಲಿ : ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ–ಕಮಾಲ್ ಮೌಲಾ ಮಸೀದಿ ಸಂಕೀರ್ಣವನ್ನು ಹಿಂದೂ ದೇವಾಲಯವೆಂದು ಘೋಷಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಮೇ 15ರ ತೀರ್ಪನ್ನು ಪ್ರಶ್ನಿಸಿ ಮುಸ್ಲಿಮ್‌ ಪಕ್ಷದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಸೀಮಿತ ಮಧ್ಯಂತರ ಪರಿಹಾರ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನ … Continued

ಮೀನಾಕ್ಷಿ ನಟರಾಜನ್ ನಾಮಪತ್ರ ವಿವಾದ ನಡುವೆಯೇ ಬಿಜೆಪಿಯ ಮೂರೂ ಅಭ್ಯರ್ಥಿಗಳು ಅವಿರೋಧ ಆಯ್ಕೆ

ಭೋಪಾಲ್: ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಮೂರು ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ.  ಬಿಜೆಪಿಯ ರಜನೀಶ್ ಅಗರ್ವಾಲ್, ತರುಣ ಚುಗ್ ಮತ್ತು ಮಹೇಶ ಕೇವತ್ ಅವರ ಅವಿರೋಧ ಆಯ್ಕೆಯನ್ನು ದೃಢೀಕರಿಸಿ ಚುನಾವಣಾ ಆಯೋಗವು (EC) ಪ್ರಮಾಣಪತ್ರಗಳನ್ನು ವಿತರಿಸಿದೆ. ಕಾಂಗ್ರೆಸ್ ಪಕ್ಷವು ಈ ಚುನಾವಣಾ ಫಲಿತಾಂಶವನ್ನು ತಡೆಯಲು ರಾಜಕೀಯವಾಗಿ ಮತ್ತು ಕಾನೂನುಬದ್ಧವಾಗಿ ತೀವ್ರ ಪ್ರಯತ್ನಗಳನ್ನು ನಡೆಸಿತಾದರೂ ಅಂತಿಮವಾಗಿ … Continued

ರಾಜ್ಯಸಭಾ ಚುನಾವಣೆ : ನಾಮಪತ್ರ ತಿರಸ್ಕಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್

ನವದೆಹಲಿ: ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ತಮ್ಮ ನಾಮಪತ್ರ ತಿರಸ್ಕಾರಗೊಂಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ತೆಲಂಗಾಣದಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣವೊಂದರ ವಿವರಗಳನ್ನು ನಾಮಪತ್ರದಲ್ಲಿ “ಮುಚ್ಚಿಟ್ಟಿದ್ದಾರೆ” ಎಂಬ ಆರೋಪದ ಹಿನ್ನೆಲೆಯಲ್ಲಿ, ಚುನಾವಣಾ ಅಧಿಕಾರಿ (ರಿಟರ್ನಿಂಗ್ ಆಫೀಸರ್) ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದರು. ತಮ್ಮ ನಾಮಪತ್ರ ಅನರ್ಹಗೊಳಿಸಿದ … Continued

ರಾಜ್ಯಸಭಾ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಾಮಪತ್ರ ರದ್ದು ; ಕೈ ನಾಯಕರ ಪ್ರತಿಭಟನೆ

ಭೋಪಾಲ ; ಮಧ್ಯಪ್ರದೇಶದ ರಾಜ್ಯಸಭಾ ಚುನಾವಣಾ ಕಣದಲ್ಲಿ ಭಾರಿ ರಾಜಕೀಯ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಇದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಅವರು ತಮ್ಮ ಚುನಾವಣಾ ಪ್ರಮಾಣಪತ್ರದಲ್ಲಿ (ಅಫಿಡವಿಟ್) ಪ್ರಕರಣವೊಂದರ ಮಾಹಿತಿಯನ್ನು ಮರೆಮಾಚಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿ … Continued

ಜೈಲಿನಲ್ಲೇ ಚಿಗುರೊಡೆದ ಪ್ರೇಮ ; ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮಾಜಿ ಕೈದಿಯ ಮದುವೆಯಾದ ಮಹಿಳಾ ಪೊಲೀಸ್‌ ಅಧಿಕಾರಿ…!

ಭೋಪಾಲ : ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಅಪರೂಪದ ಹಾಗೂ ಅಚ್ಚರಿಯ ಪ್ರೇಮಕಥೆಯೊಂದು ಮದುವೆಯಲ್ಲಿ ಅಂತ್ಯಗೊಂಡಿದೆ. ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಮಾಜಿ ಕೈದಿಯನ್ನು, ಅದೇ ಜೈಲಿನ ಮಹಿಳಾ ಅಧಿಕಾರಿಯೊಬ್ಬರು ಅಂತರ್ಧರ್ಮೀಯ ವಿವಾಹವಾಗಿದ್ದಾರೆ. ಸತ್ನಾ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಅಧೀಕ್ಷಕಿಯಾಗಿ (Assistant Superintendent) ಸೇವೆ ಸಲ್ಲಿಸುತ್ತಿರುವ ಫಿರೋಜಾ ಖಾತೂನ್, ಅಲ್ಲಿಯೇ ಶಿಕ್ಷೆ ಅನುಭವಿಸುತ್ತಿದ್ದ ಧರ್ಮೇಂದ್ರ … Continued

ಪತ್ನಿ ಕೊಲೆ ಪ್ರಕರಣ : 4 ವರ್ಷದಿಂದ ತಲೆಮರೆಸಿಕೊಂಡಿದ್ದ ಮಾಜಿ ಸೇನಾಧಿಕಾರಿ ಸಿಕ್ಕಿಬಿದ್ದಿದ್ದೇ ರೋಚಕ ; ಮುಳುವಾಯ್ತು ಗ್ಯಾಸ್ ಬುಕ್ಕಿಂಗ್…!

ಭೋಪಾಲ: ತನ್ನ ಪತ್ನಿಯನ್ನೇ ಹತ್ಯೆಗೈದು, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡು ಬೇರೆ ಬೇರೆ ರಾಜ್ಯಗಳಲ್ಲಿ ಅಲೆದಾಡುತ್ತಿದ್ದ ಮಾಜಿ ಸೇನಾ ಕ್ಯಾಪ್ಟನ್ ಸಂದೀಪ ತೋಮರ್ ಎಂಬಾತ ಅಂತಿಮವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಧ್ಯಪ್ರದೇಶದ ಪಾಂಡುರ್ನಾ ಜಿಲ್ಲೆಯಲ್ಲಿ ಸ್ಥಳೀಯ ಪೊಲೀಸರು ಮತ್ತು ರಾಷ್ಟ್ರೀಯ ಗುಪ್ತಚರ ಗ್ರಿಡ್ (NATGRID) ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿವೆ. ಎಲ್‌ಪಿಜಿ … Continued